IMG 20221018 WA0037

BJP:ಕಾಂಗ್ರೆಸ್ ದೀನ-ದಲಿತರನ್ನು ಮತಬ್ಯಾಂಕ್ ಆಗಿ ಬಳಸಿಕೊಂಡಿದೆ….!

Genaral STATE

ಕಾಂಗ್ರೆಸ್ ದೀನ-ದಲಿತರನ್ನು ಮತಬ್ಯಾಂಕ್ ಆಗಿ ಬಳಸಿಕೊಂಡಿದೆ – ಸಿಎಂ ಬೊಮ್ಮಾಯಿ

ಬೀದರ್ (ಹುಮ್ಮಾಬಾದ್), ಅಕ್ಟೋಬರ್ 18: ಕಾಂಗ್ರೆಸ್ ದೀನ-ದಲಿತರನ್ನು ಮತಬ್ಯಾಂಕ್ ಆಗಿ ಬಳಸಿಕೊಂಡಿದೆ. ಅವರು ಇಂದಿಗೂ ಸಂಕಷ್ಟದಲ್ಲಿ ಇದ್ದರೆ ಅದಕ್ಕೆ ಕಾಂಗ್ರೆಸ್ ದುರಾಡಳಿತವೇ ಕಾರಣ ಸಿಎಂ ಬೊಮ್ಮಾಯಿ ಹೇಳಿದರು.

ಅವರು ಇಂದು ಬೀದರ್ ಜಿಲ್ಲೆಯ ಹುಮ್ಮಾಬಾದ್‍ನ ತೇರು ಮೈದಾನದಲ್ಲಿ ‘ಜನಸಂಕಲ್ಪ ಯಾತ್ರೆ’ ಉದ್ಘಾಟಿಸಿ ಮಾತನಾಡಿದರು.

ಮೀಸಲಾತಿಗೆ 50 ವರ್ಷದಿಂದ ಬೇಡಿಕೆ ಇದ್ದರೂ ಅವರಿಗೆ ನ್ಯಾಯ ಕೊಡಲು ಕಾಂಗ್ರೆಸ್ ನಿಂದ ಸಾಧ್ಯವಾಗಲಿಲ್ಲ. ದೀನ ದಲಿತರ ಕಾಂಗ್ರೆಸ್ ಯಾವುದೇ ಬೆಳಕಾಗದೇ ಅವರ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲಿಲ್ಲ. ಹಣವನ್ನು ಕೇವಲ ಪುಸ್ತಕದಲ್ಲಿ ಮಾತ್ರ ತೋರಿಸಿದರು. ಜನರ ಉದ್ಧಾರಕ್ಕೆ ಅದನ್ನ ಖರ್ಚು ಮಾಡಲಿಲ್ಲ ಎಂದು ಸಿಎಂ ಬೊಮ್ಮಾಯಿ ಹೇಳಿದರು.

371ಜೆ ಬಂದರೂ ಯಾವುದೇ ಪ್ರಗತಿ ಇಲ್ಲ
ಕಲ್ಯಾಣ ಕರ್ನಾಟಕಕ್ಕೆ ಕಾಂಗ್ರೆಸ್ ಮೋಸ ಮಾಡಿದೆ. ಹಲವರ ಹೋರಾಟದ ಫಲವಾಗಿ ಬಂದ 371ಜೆ ಲೋಕಸಭೆಯಲ್ಲಿ ಅನುಮೋದನೆ ಪಡೆದರೂ ಪುಸ್ತಕದಲ್ಲಿ ಮಾತ್ರ ಇತ್ತು. ಸುಮಾರು 5 ವರ್ಷಗಳ ಕಾಲ ಯಾವುದೇ ಅಭಿವೃದ್ಧಿ ಕಾರ್ಯಗಳು ಈ ಭಾಗದಲ್ಲಿ ಮಾಡಲಿಲ್ಲ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈ ಭಾಗಕ್ಕೆ 1500 ಕೋಟಿಗಳನ್ನು ಮಂಜೂರು ಮಾಡಿದರು. ಈ ವರ್ಷ ಕಲ್ಯಾಣ ಕರ್ನಾಟಕಕ್ಕೆ 3000 ಕೋಟಿಗಳನ್ನು ಮಂಜೂರು ಮಾಡಿದ್ದು, ಮುಂದಿನ ಬಜೆಟ್ ನಲ್ಲಿ 5000 ಕೋಟಿಯನ್ನು ಮೀಸಲಿಡಲಾಗುವುದು ಎಂದು ಈಗಾಗಲೇ ಘೋಷಣೆ ಮಾಡಿದೆ ಎಂದರು.
2014-2018 ವರೆಗಿನ ಕಾಂಗ್ರೆಸ್ ಸರ್ಕಾರದಲ್ಲಿ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಸರ್ಕಾರ ರೈತರಿಗೆ ಕೇವಲ ದೌರ್ಭಾಗ್ಯಗಳನ್ನು ಮಾತ್ರ ಕೊಟ್ಟಿದೆ. ಇದನ್ನು ಗಮನಿಸಿದ್ರೆ ರಾಜ್ಯದಲ್ಲಿ ಯಾವುದೇ ರೈತ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವುದಿಲ್ಲ ಎಂದು ಸಿಎಂ ಹೇಳಿದರು.

IMG 20221018 WA0038

ಕಾಂಗ್ರೆಸ್ ಸರ್ಕಾರದಲ್ಲಿ ಕೇವಲ ಭ್ರಷ್ಟಾಚಾರ
ರೈತರ ಕಬ್ಬಿಗೆ ಬಿಲ್ ಪಾವತಿ ಮಾಡದಕ್ಕೆ ಕಾರ್ಖಾನೆ ನಡೆಸುತ್ತಿದ್ದವರ ಭ್ರಷ್ಟಾಚಾರವೇ ಕಾರಣ. ಕಾಂಗ್ರೆಸ್ ಸರ್ಕಾರದಲ್ಲಿ ಸಕ್ಕರೆ ಕಾರ್ಖಾನೆಯಲ್ಲಿ, ಬಡವರಿಗೆ ಮನೆ ಹಂಚುವುರದಲ್ಲಿ, ರಸ್ತೆ ಮಾಡುವುದರಲ್ಲಿ, ಎಸ್ಸಿಎಸ್ಟಿ ಜನಾಂಗದ ಹಾಸ್ಟೆಲ್ಗಳಿಗೆ ದಿಂಬು ಹಾಸಿಗೆ ಖರೀದಿಯಲ್ಲೂ ಹಣ ಹೊಡೆದಿದ್ದಾರೆ. ಶಿಕ್ಷಕರ ನೇಮಕಾತಿ, ಪೊಲೀಸರ ನೇಮಕಾತಿಯಲ್ಲೂ ಭ್ರಷ್ಟಾಚಾರ ಮಾಡಿದ್ದಾರೆ. ಅವರಿಗೆ ನಾಚಿಕೆ ಆಗಬೇಕು ಎಂದರು.

ನಮ್ಮ ಕಾಲದಲ್ಲಿ ಪಿಎಸ್ಐ ನೇಮಕಾತಿಯಲ್ಲಿ ಭ್ರಷ್ಟಾಚಾರ ಆಗಿರುವ ಬಗ್ಗೆ ಗೊತ್ತಾದ ಕೂಡಲೇ ಅವರು ಇವರು ಎಂದು ನೋಡದೇ ಅಕ್ರಮದಲ್ಲಿ ಭಾಗಿಯಾಗಿದ್ದ ಎಲ್ಲರನ್ನೂ ಬಂಧಿಸಿದ್ದೇವೆ. ಎಡಿಜಿಪಿ ಅವರನ್ನೂ ನಾವು ಬಿಡಲಿಲ್ಲ. ಆದರೆ ಕಾಂಗ್ರೆಸ್ ಅವರು ಪಿಎಸ್ಐ ಹಗರಣದಲ್ಲಿ ಭ್ರಷ್ಟಾಚಾರಿಗಳ ಜತೆಗೆ ಪಾಲುದಾರರಾಗಿದ್ದರು. ಭ್ರಷ್ಟಾಚಾರವನ್ನು ಬಿಜೆಪಿ ಸರ್ಕಾರ ಸಹಿಸುವುದಿಲ್ಲ ಎಂದು ನಮ್ಮ ನಡೆ ನುಡಿಯಿಂದ ನಾವು ತೋರಿಸುತ್ತಿದ್ದೇವೆ ಎಂದು ಮುಖ್ಯಮಂತ್ರಿಗಳು ಹೇಳಿದರು.

ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಕ್ಕೆ ಏನು ಮಾಡಿದ್ದಾರೆ?
ಕಾಂಗ್ರೆಸ್ ಅವರು ಮಾತೆತ್ತಿದರೆ ಸಾಮಾಜಿಕ ನ್ಯಾಯ ಎಂದು ಹೇಳುತ್ತಾರೆ. ಆದರೆ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಕ್ಕೆ ಏನು ಮಾಡಿದ್ದಾರೆ? ಕಾಗಿನೆಲೆ ಅಭಿವೃದ್ಧಿಯನ್ನು ಯಡಿಯೂರಪ್ಪನವರು ಮಾಡಿದರು. ಕನಕ ದಾಸರು ಹುಟ್ಟಿದ ಊರಿನ ಸಮಗ್ರ ಅಭಿವೃದ್ಧಿಯನ್ನು ನಾವು ಮಾಡಿದ್ದೇವೆ, ಸಾಮಾಜಕ ನ್ಯಾಯವನ್ನು ಕೇವಲ ಮಾತುಗಳಲ್ಲಿ ತೋರಿಸದೇ ಕೆಲಸ ಮಾಡಿ ತೋರಿಸಿದ್ದೇವೆ. ಈ ಮೋಸದ ಆಟಕ್ಕೆ ಜನರೇ ಕೊನೆ ಹಾಡಬೇಕು. ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿ ಇದ್ದಾಗ ಇಲ್ಲಿನ ಹಣವನ್ನು ಲೂಟಿ ಮಾಡಿ ದಿಲ್ಲಿಯಲ್ಲಿ ಕಪ್ಪಕಾಣಿಕೆ ಸಲ್ಲಿಸುತ್ತಿದ್ದರು. ಆಗ ಕರ್ನಾಟಕ ಸರ್ಕಾರ ಕಾಂಗ್ರೆಸ್ ಪಕ್ಷಕ್ಕೆ ಎಟಿಎಂ ಆಗಿತ್ತು. ಇದನ್ನು ಆ ಪಕ್ಷದ ಜನರೇ ಮಾತನಾಡಿಕೊಳ್ಳುತ್ತಿದ್ದರು ಎಂದರು.

ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಬೀಸುತ್ತಾ ಇದೆ. ಕಾಂಗ್ರೆಸ್ ಪಕ್ಷ ರೈತರಿಗೆ ಕಷ್ಟ ಕಾಲದಲ್ಲಿ ಸಹಾಯ ಮಾಡದೇ ಒಂದೇ ಸುಳ್ಳನ್ನ ಹಲವಾರು ವರ್ಷಗಳಿಂದ ಹೇಳಿಕೊಂದು ಬಂದು ಅಧಿಕಾರ ಮಾಡುತ್ತಿದೆ ಎಂದರು.

ನಿಮ್ಮ ಉತ್ಸಾಹ, ಹುರುಪು ಹುಮ್ಮಸ್ಸು ಹಾಗೂ ಅಪಾರ ಸಂಖ್ಯೆಯಲ್ಲಿ ಸೇರಿರುವ ಯುವಕರನ್ನು ನೋಡಿದಾಗ ಈ ಜನ ಸಂಕಲ್ಪ ಯಾತ್ರೆ, ವಿಜಯ ಸಂಕಲ್ಪ ಯಾತ್ರೆ ಆಗುತ್ತದೆ. ಮುಂದಿನ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಬಿಜೆಪಿ ಅತ್ಯಧಿಕ ಮತಗಳಿಂದ ವಿಜಯಶಾಲಿ ಆಗುತ್ತದೆ ಎಂದರು.