IMG 20240423 WA0050 scaled

Karnataka : ಭಾರತದ ಯಾವ ಮೂಲೆಯಲ್ಲೂ ಮೋದಿ ಅಲೆ ಇಲ್ಲ….!

*ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿ ಇಡಿ ದೇಶದ ರೈತರ 76 ಸಾವಿರ ಕೋಟಿ ಸಾಲ ಮನ್ನಾ ಮಾಡಿದರು* *ಮೋದಿ ಪ್ರಧಾನಿಯಾಗಿ ಅತ್ಯಂತ ಶ್ರೀಮಂತರ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದರು* *ಹಾಗಾದ್ರೆ ಮೋದಿಯವರು ಶ್ರೀಮಂತರ ಪರ, ಜನ ಸಾಮಾನ್ಯರ ವಿರೋಧಿ ತಾನೆ: ಸಿ.ಎಂ.ಸಿದ್ದರಾಮಯ್ಯ ಪ್ರಶ್ನೆ* ಭಾರತದ ಯಾವ ಮೂಲೆಯಲ್ಲೂ ಮೋದಿ ಅಲೆ ಇಲ್ಲ ಎನ್ನುವುದು ಸಾಬೀತಾಗಿದೆ* *ಪ್ರತೀ ಬಾರಿ ಭಾರತೀಯರನ್ನು ನಂಬಿಸಿ ಮೋಸ ಮಾಡೋದು ಮೋದಿಯವರಿಗೆ ರೂಢಿಯಾಗಿದೆ: ಸಿ.ಎಂ* ಚಿತ್ರದುರ್ಗ ಏ 23: ಮನಮೋಹನ್ ಸಿಂಗ್ […]

Continue Reading
IMG 20240419 WA0028

ಪಾವಗಡ : ನೀರಾವರಿ ಮತ್ತು ನಿರುದ್ಯೋಗ ನಿವಾರಣೆಗೆ ಒತ್ತು…!

ನೀರಾವರಿ ಮತ್ತು ನಿರುದ್ಯೋಗ ನಿವಾರಣೆಗೆ ಒತ್ತು ವೈ.ಎನ್.ಹೊಸಕೋಟೆ : ಬರಗಾಲದ ಛಾಯೆ ಆವರಿಸಿರುವ ಪಾವಗಡದಲ್ಲಿ ಮೇವು ನೀರಿನ ಸಮಸ್ಯೆ ಮತ್ತು ನಿರುದ್ಯೋಗ ಸಮಸ್ಯೆ ಕಾಡುತ್ತಿದ್ದು, ನೀರಾವರಿ ಪ್ರಗತಿಗೆ ಒತ್ತು ನೀಡಲಾಗುವುದು ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ತಿಳಿಸಿದರು. ಗ್ರಾಮದಲ್ಲಿ ಬುಧವಾರ ಸಂಜೆ ಮಹಾತ್ಮ ಗಾಂಧೀಜಿ ವೃತ್ತದಲ್ಲಿ ಹಮ್ಮಿಕೊಂಡಿದ್ದ ರೋಡ್ ಶೋ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಸುಮಾರು ಐವತ್ತು ಸಾವಿರ ಜನ ಬೆಂಗಳೂರಿಗೆ ಉದ್ಯೋಗ ಗುಳೆ ಹೋಗುತ್ತಿರುವ ವಿಚಾರ ನೋವಿನ ಸಂಗತಿ. […]

Continue Reading
IMG 20240419 WA0001

ಮಧುಗಿರಿ :DDPI ನಿರ್ಲಕ್ಷ್ಯ – ಶಿಕ್ಷಕರಿಗೆ ಸಂಕಷ್ಟ……!

ಶಿಕ್ಷಕರ ಮೇಲೆ ಹೆಜ್ಜೇನು ದಾಳಿ ಮಧುಗಿರಿ : ರಾಜ್ಯದಾದ್ಯಂತ ಎಸ್ ಎಸ್ ಎಲ್ ಸಿ ಮೌಲ್ಯಮಾಪನ ಕಾರ್ಯ ಪ್ರಾರಂಭವಾಗಿದ್ದು .ಪಟ್ಟಣದ ಚೇತನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಜ್ಞಾನ ವಿಷಯದ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ನಡೆಯುತ್ತಿದ್ದು. ಈ ಪರೀಕ್ಷಾ ಕೇಂದ್ರದಲ್ಲಿ ಸುಮಾರು 180 ಕ್ಕೂ ಹೆಚ್ಚಿನ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದು.ಗು ರುವಾರ ಮಧ್ಯಾಹ್ನದ ವೇಳೆಯಲ್ಲಿ ಚೇತನ ಶಾಲೆಯ ಮೂರನೇ ಮಹಡಿಯಲ್ಲಿದ್ದ ಹೆಜ್ಜೇನು ನೊಣಗಳು ಶಿಕ್ಷಕರ ಮೇಲೆ ಒಮ್ಮೆಲೆ ದಿಢೀರ್ ದಾಳಿ ನಡೆಸಿವೆ.ಇದರಿಂದಾಗಿ ಕಂಗಾಲಾದ ಶಿಕ್ಷಕರು ದಿಕ್ಕಾಪಾಲಾಗಿ ಓಡಿದ್ದಾರೆ.ಹೆಜ್ಜೇನು ನೊಣಗಳು […]

Continue Reading
IMG 20240414 WA0006

ಪಾವಗಡ : ಜೆಡಿ.ಎಸ್. ಪಕ್ಷಕ್ಕೆ ಲೋಕಸಭೆಯ ಚುನಾವಣೆಯ ನಂತರ ಭವಿಷ್ಯ ಇರುವುದಿಲ್ಲ….!

ಒಂದು ಲಕ್ಷಕ್ಕೂ ಅಧಿಕ ಮತಗಳಿಂದ ಚಿತ್ರದುರ್ಗ ಕಾಂಗ್ರೆಸ್ ಅಭ್ಯರ್ಥಿ ಚಂದ್ರಪ್ಪನನ್ನು ಗೆಲ್ಲಿಸಿ. ಶಾಸಕ ಹೆಚ್ ವಿ. ವೆಂಕಟೇಶ್ ಜೆ.ಡಿ.ಎಸ್. ಪಕ್ಷಕ್ಕೆ ಲೋಕಸಭೆಯ ಚುನಾವಣೆಯ ನಂತರ ಭವಿಷ್ಯ ಇರುವುದಿಲ್ಲ…. ಪಾವಗಡ : ಮುಂಬರುವ ಚಿತ್ರದುರ್ಗ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚಂದ್ರಪ್ಪನನ್ನು ತಾಲ್ಲೂಕಿನಿಂದ ಒಂದು ಲಕ್ಷಕ್ಕೂ ಅಧಿಕ ಮತಗಳನ್ನು ನೀಡಿ ಗೆಲ್ಲಿಸಬೇಕೆಂದು ಶಾಸಕ ಹೆಚ್ ವಿ ವೆಂಕಟೇಶ್ ಕಾರ್ಯಕರ್ತರಿಗೆ ಕರೆ ನೀಡಿದರು. ಪಟ್ಟಣದ ಎಸ್.ಎಸ್.ಕೆ ಬಯಲು ರಂಗ ಮಂದಿರದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ನ ಬೃಹತ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ […]

Continue Reading
IMG 20240407 WA0008

ಪಾವಗಡ: ಕಾಂಗ್ರೆಸ್ ಪಕ್ಷ ಸುಳ್ಳುಗಳ ಮೂಲಕ ಜನರನ್ನು ದಿಕ್ಕು ತಪ್ಪಿಸುತ್ತಿವೆ…!

ಅಂಬೇಡ್ಕರ್ ಬರೆದ ಸಂವಿಧಾನವೇ, ಈ ದೇಶಕ್ಕೆ ಧರ್ಮ ಗ್ರಂಥ. ಗೋವಿಂದ ಕಾರಜೋಳ. ಕಾಂಗ್ರೆಸ್ ಪಕ್ಷ ಸುಳ್ಳುಗಳ ಮೂಲಕ ಜನರನ್ನು ದಿಕ್ಕು ತಪ್ಪಿಸುತ್ತಿವೆ – ತಿಮ್ಮರಾಯಪ್ಪ… ಪಾವಗಡ: ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾವಣೆ ಮಾಡಲಾಗುವುದೆಂದು ಕಾಂಗ್ರೆಸ್ ಪಕ್ಷದವರು ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ. ಈ ದೇಶಕ್ಕಿರುವ ನಿಜವಾದ ಧರ್ಮ ಗ್ರಂಥವೆಂದರೆ ಅದು ಅಂಬೇಡ್ಕರ್ ಬರೆದ ಸಂವಿಧಾನ . ಈ ಸಂವಿಧಾನದಿಂದಾಗಿ ಇಂದು ಒಬ್ಬ ಸಾಮಾನ್ಯ ವ್ಯಕ್ತಿ ದೇಶದ ಪ್ರಧಾನಮಂತ್ರಿಯಾಗಲು ಅವಕಾಶ ಕಲ್ಪಿಸಲಾಗಿದೆ ಎಂದು. ಇದಕ್ಕೆ ಕಾರಣವಾದ ಏಕೈಕ […]

Continue Reading
IMG 20240405 WA0020

ಪಾವಗಡ: ಅಂತು- ಇಂತು ಬಂತು ಜಾನುವಾರುಗಳಿಗೆ ಮೇವು ಬ್ಯಾಂಕ್….!

ಮೊದಲ ಮೇವು ಬ್ಯಾಂಕ್ ಗೆ ಚಾಲನೆ ನೀಡಿದ ತಹಶೀಲ್ದಾರ್ ಸಂತೋಷ್ ಕುಮಾರ್. ಪಾವಗಡ : ಬರಗಾಲದ ಹಿನ್ನೆಲೆಯಲ್ಲಿ ಉಂಟಾಗಿರುವ ಮೇವು ಕೊರತೆ ನೀಗಿಸಲು ಸರಕಾರದ ನೆರವಿನಿಂದ ತಾಲ್ಲೂಕಿನ ನಾಗಲಮಡಿಕೆ ಗ್ರಾಮದಲ್ಲಿ ಶುಕ್ರವಾರ ಮೊದಲ ಮೇವು ಬ್ಯಾಂಕ್ ಪ್ರಾರಂಭಿಸಲಾಗಿದೆ ಎಂದು ತಹಶೀಲ್ದಾರ್ ಸಂತೋಷ್ ಕುಮಾರ್ ತಿಳಿಸಿದರು. ಪ್ರತಿ ಕೆ.ಜಿ ಮೇವಿಗೆ ಎರಡು ರೂ ನಂತೆ 07 ದಿನಕ್ಕಾಗುವಷ್ಟು ಮೇವು ನೀಡಲಾಗುವುದು ಎಂದರು. ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕರಾದ ಡಾ. ಹೊರಕೆರಪ್ಪ ಮಾತನಾಡಿ, ಇಂದು 55 ಜನ ರೈತರಿಗೆ 10 […]

Continue Reading
IMG 20240403 WA0003

ಪಾವಗಡ : ಎರಡು ಬಸ್ ಗಳ‌ ನಡುವೆ ಮುಖಾ ಮುಖಿ ಡಿಕ್ಕಿ…!

ಕೋಟಗುಡ್ಡ ಗ್ರಾಮದಲ್ಲಿ ಕೆಎಸ್ಆರ್ಟಿಸಿ ಮತ್ತು ಖಾಸಗಿ ಬಸ್ ನಡುವೆ ಮುಖಾಮುಖಿ ಡಿಕ್ಕಿ, ಚಾಲಕನ ಸ್ಥಿತಿ ಗಂಭೀರ ಪಾವಗಡ: ಬುಧವಾರ ಬೆಳಗ್ಗೆ ಸುಮಾರು 7:30ರ ಸಮಯದಲ್ಲಿ ಪಾವಗಡ ಪಟ್ಟಣದಿಂದ ಚಿತ್ರದುರ್ಗದ ಮಾರ್ಗವಾಗಿ ಪ್ರಯಾಣ ಬೆಳೆಸಿದ್ದ ಖಾಸಗಿ ಬಸ್ ಮತ್ತು  ಪಾವಗಡದ ಕಡೆ ಬರುತ್ತಿದ್ದ ಕೆಎಸ್ಆರ್ಟಿಸಿಬಸ್ ಗಳ  ನಡುವೆ ಅಪಘಾತ ‌ಸಂಭವಿಸಿದೆ. ಕೋಟಗುಡ್ಡ ಗ್ರಾಮದ ಎಸ್ ಬಿ ಐ ಬ್ಯಾಂಕ್ ಸಮೀಪದಲ್ಲಿ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು ಕೆಎಸ್ಆರ್ಟಿಸಿ ಬಸ್ ಚಾಲಕನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ ಕೊಟ್ಟಗುಟ್ಟ ಗ್ರಾಮದ ಎಸ್ […]

Continue Reading
IMG 20240401 WA0009

ಪಾವಗಡ : ಲೆಕ್ಕ ಪರೀಕ್ಷೆಗೆ ಶಿಕ್ಷಣ ಇಲಾಖೆಯ ಆಯುಕ್ತರ. ಭೇಟಿ ಸಾಧ್ಯತೆ…?

ಮಾಸ್ ನಕಲು ತಡೆ ಗೆ ಕಟಿಬದ್ದ ವಾದ ಶಿಕ್ಷಣಿಲಾಖೆ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು. ತಾಲ್ಲೂಕಿಗೆ. ಭೇಟಿ ನೀಡುವ ಸಾಧ್ಯತೆ ?. ಪಾವಗಡ : ಮಾಸ್ ಕಾಫಿ ತಡೆಗಟ್ಟಲು ಸರ್ಕಾರ ಈ ವರ್ಷ ಪಿಯುಸಿ ಪರೀಕ್ಷೆಯಲ್ಲಿ ಸಿ ಸಿ ಟಿ ವಿ ಅಳವಡಿಕೆಯ ಮಾದರಿಯಲ್ಲಿ ಈ ಬಾರಿ SSLC ಪರೀಕ್ಷೆಯಲ್ಲೂ ಸಿಸಿ ಕ್ಯಾಮರಾ ಮತ್ತು  ವೆಬ್ ಕಾಸ್ಟಿಂಗ್ ಮೂಲಕ ಪರೀಕ್ಷೆ‌ ನಡೆಸುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲೂ  ನಕಲು ಮಾಡುವುದನ್ನು ತಡೆಗಟ್ಟಲು ಶಿಕ್ಷಣ ಇಲಾಖೆ ಹರ ಸಾಹಸ ಮಾಡುತ್ತಿದೆ. ಗುಣ […]

Continue Reading
IMG 20240327 WA0012

ಪಾವಗಡ‌: ಆಂಧ್ರ ಗಡಿಭಾಗದ ಚೆಕ್‍ಪೋಸ್ಟ್‍ಗಳಿಗೆ ಡೀಸಿ, ಎಸ್‍ ಪಿ ಭೇಟಿ….! ಪಿ ಭೇಟಿ

ಆಂಧ್ರ ಗಡಿಭಾಗದ ಚೆಕ್‍ಪೋಸ್ಟ್‍ ಗಳನ್ನು ಪರಿಶೀಲಿದ ಜಿಲ್ಲಾಧಿಕಾರಿಗಳು…! ತುಮಕೂರು (ಕ.ವಾ.) ಮಾ.27: ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ಆಂಧ್ರ ಗಡಿ ಭಾಗವಾದ ಪಾವಗಡ ತಾಲೂಕಿನಲ್ಲಿ ಸ್ಥಾಪಿಸಿರುವ ಚೆಕ್‍ಪೋಸ್ಟ್‍ಗಳಿಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ ಅಶೋಕ್ ಅವರು ಇಂದು ಜಂಟಿಯಾಗಿ ಭೇಟಿ ನೀಡಿ ಪರಿಶೀಲಿಸಿದರು. ಪಾವಗಡ ವಿಧಾನಸಭಾ ಕ್ಷೇತ್ರವು ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಗೊಳಪಡಲಿದ್ದು, ಕರ್ನಾಟಕಾಂಧ್ರದ ಗಡಿ ಭಾಗದಲ್ಲಿದೆ. ಈ ಭಾಗದಲ್ಲಿ ಲಿಕ್ಕರ್ ಮಾಫಿಯಾ ಹೆಚ್ಚಾಗಿ ವರದಿಯಾಗುವ ಸಾಧ್ಯತೆಯಿದೆ ಎಂಬ […]

Continue Reading
IMG 20240326 184918 scaled

ಪಾವಗಡ : ಅದ್ದೂರಿಯಾಗಿ ನಡೆದ ಶ್ರೀ ಗುರು ತಿಪ್ಪೇರುದ್ರ ಸ್ವಾಮಿ ರಥೋತ್ಸವ….!

ಅದ್ದೂರಿಯಾಗಿ ನಡೆದ ಶ್ರೀ ಗುರು ತಿಪ್ಪೇರುದ್ರ ಸ್ವಾಮಿ ರಥೋತ್ಸವ. ಪಾವಗಡ : ತಾಲ್ಲೂಕಿನ ವದನ ಕಲ್ಲು  ಮತ್ತು ವೈ ಎನ್ ಹೊಸಕೋಡೆ ಹೋಬಳಿ ಯ ಮಾರಮ್ಮನಹಳ್ಳಿ  ಗ್ರಾಮದಲ್ಲಿ ಸುಪ್ರಸಿದ್ಧ ಶ್ರೀ ಗುರು ತಿಪ್ಪೇರುದ್ರಸ್ವಾಮಿಯ ಬ್ರಹ್ಮರಥೋತ್ಸವ ಅದ್ದೂರಿಯಾಗಿ ನಡೆಯಿತು. ಸುತ್ತಮುತ್ತಲಿನ ಹಳ್ಳಿಗಳಿಂದ ಬಂದಂತಹ ಭಕ್ತರು ಉಪವಾಸವಿದ್ದು, ಶ್ರದ್ಧಾ ಭಕ್ತಿಗಳಿಂದ ದೇವರಿಗೆ ನಮಿಸಿದರು. ವದನಕಲ್ಲಿನಲ್ಲಿ. ಶ್ರೀ ಸಿದ್ದೇಶ್ವರ ಬೆಟ್ಟದ ಸ್ವಾಮಿಗಳ ನೇತೃತ್ವದಲ್ಲಿ ಗಣಪತಿ ಪೂಜೆ, ನಂದಿ ಪೂಜೆ, ನವಗ್ರಹ ಪೂಜೆ ಹವನ, ರಥಾಂಗ ಹೋಮ ಮುಂತಾದ ಕಾರ್ಯಗಳನ್ನು ನಾಗಭೂಷಣ ರೆಡ್ಡಿ […]

Continue Reading