IMG 20260511 WA0012

ಪಾವಗಡ: ತುಂಗಭದ್ರ ನೀರು ಸರಬರಾಜು ಸ್ಥಗಿತ….!

ಪಾವಗಡಕ್ಕೆ ತುಂಗಭದ್ರ ನೀರು ಸರಬರಾಜು ಸ್ಥಗಿತ. ರೈತರ ಪ್ರತಿಭಟನೆ. ಪಾವಗಡ: ಬೇಸಿಗೆಯ ಹಿನ್ನೆಲೆ ಕೆರೆ ಕಾಲುವೆಗಳು ಬತ್ತಿ ಹೋಗಿದ್ದು, ಕುಡಿಯಲು ಹಾಗೂ ದನ ಕರುಗಳಿಗೆ ನೀರಿಲ್ಲದೆ ಪರದಾಡುವ ಪರಿಸ್ಥಿತಿ ಉಂಟಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಪೂಜಾರಪ್ಪ ತಿಳಿಸಿದರು. ಪಟ್ಟಣದ ತಹಶೀಲ್ದಾರ್ ಕಚೇರಿ ಮುಂದೆ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಗ್ರೇಡ್ 2 ತಹಶೀಲ್ದಾರ್ ಪ್ರಸಾದ್ ರವರಿಗೆ ಮನವಿ ಪತ್ರ ಸಲ್ಲಿಸಿ ಅವರು ಮಾತನಾಡಿದರು. ತಾಲ್ಲೂಕಿಗೆ ಶುದ್ಧ ಕುಡಿಯುವ […]

Continue Reading
IMG 20260416 WA0012

ಪಾವಗಡ : ಸಾರ್ವಜನಿಕ ಆಸ್ಪತ್ರೆಯಲ್ಲಿ ನಾಗರಿಕರಿಗೆ ಸಮರ್ಪಕ ಸೇವೆ ಸಿಗುತ್ತಿಲ್ಲ….!

ಸಾರ್ವಜನಿಕ ಆಸ್ಪತ್ರೆಯಲ್ಲಿ ನಾಗರಿಕರಿಗೆ ಸಮರ್ಪಕ ಸೇವೆ ಸಿಗುತ್ತಿಲ್ಲ: ವಕೀಲ ರಮೇಶ್ ಆರೋಪ. ಪಾವಗಡ : ತಾಲ್ಲೂಕಿನ ಜನತೆಗಾಗಿ ದೊಡ್ಡಮಟ್ಟದ ಸಾರ್ವಜನಿಕ ಆಸ್ಪತ್ರೆಯಲ್ಲಿ ನಾಗರಿಕರಿಗೆ ಸಮರ್ಪಕ ಸೇವೆ ಸಿಗುತ್ತಿಲ್ಲ: ವಕೀಲ ರಮೇಶ್ ಆರೋಪ. ಪಾವಗಡ : ತಾಲ್ಲೂಕಿನ ಜನತೆಗಾಗಿ ದೊಡ್ಡಮಟ್ಟದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮತ್ತು ಸಾರ್ವಜನಿಕ ಆಸ್ಪತ್ರೆ ಇದ್ದರೂ ಜನತೆಗೆ ಗುಣಮಟ್ಟದ ಚಿಕಿತ್ಸೆ ಸಿಗುತ್ತಿಲ್ಲ. ಹಾಗಾಗಿ ಜನರು ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆ ಹೋಗಬೇಕಾಗಿದೆ ಎಂದು ಅಟ್ರಾಸಿಟಿ ಕಮಿಟಿಯ ಸದಸ್ಯ ಹಾಗೂ ವಕೀಲರಾದ ರಮೇಶ್ ಆರೋಪಿಸಿದ್ದಾರೆ. ಪಟ್ಟಣದ […]

Continue Reading
JP0 2876 scaled

Tumkur : ಶಿಕ್ಷಣ ವ್ಯಕ್ತಿತ್ವ ನಿರ್ಮಾಣದ ಅಡಿಪಾಯ : ರಾಷ್ಟ್ರಪತಿ ದ್ರೌಪದಿ ಮುರ್ಮು…!

  .*  ಡಾ: ಶ್ರೀ ಶಿವಕುಮಾರ ಸ್ವಾಮೀಜಿ ಅವರ ಜಯಂತಿ ಉದ್ಘಾಟಿಸಿದ ರಾಷ್ಟ್ರಪತಿ;  * ಶ್ರೀ ಮಠದ ಶಿಕ್ಷಣ ಕ್ರಾಂತಿಗೆ ರಾಷ್ಟ್ರಪತಿ ಪ್ರಶಂಸೆ; * ಕರ್ನಾಟಕ ರಾಷ್ಟ್ರ ನಿರ್ಮಾಣದ ಪ್ರಮುಖ ಕೇಂದ್ರ; ಭಾಷಣದಲ್ಲಿ ಕುವೆಂಪು ನೆನಪಿಸಿಕೊಂಡ ರಾಷ್ಟ್ರಪತಿ * ಶಿಕ್ಷಣ ವ್ಯಕ್ತಿತ್ವ ನಿರ್ಮಾಣದ ಅಡಿಪಾಯ : ರಾಷ್ಟ್ರಪತಿ ದ್ರೌಪದಿ ಮುರ್ಮು ತುಮಕೂರು(ಕ.ವಾ.)ಏ.1: ಶಿಕ್ಷಣ ವ್ಯಕ್ತಿತ್ವ ವಿಕಸನ ಮತ್ತು ವ್ಯಕ್ತಿತ್ವ ನಿರ್ಮಾಣದ ಅಡಿಪಾಯವಾಗಿದೆ ಹಾಗೂ ಶಿಕ್ಷಣವು ಸ್ವಾವಲಂಬನೆಗೆ ದಾರಿ ಮಾಡಿಕೊಡಲಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. […]

Continue Reading
IMG 20260329 WA0003

ಪಾವಗಡ : ನಾಯಿಗಳು ದಾಳಿ: 20 ಕುರಿಮರಿಗಳು ಸಾವು….!

ನಾಯಿಗಳು ದಾಳಿ: 20 ಕುರಿಮರಿಗಳು ಸಾವು. ​ಪಾವಗಡ: ನಾಯಿಗಳು ದಾಳಿ ನಡೆಸಿದ ಪರಿಣಾಮ 20 ಕುರಿಮರಿ ಗಳು ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಕ್ಯಾತಗಾನಚೆರ್ಲುದಲ್ಲಿ ಗ್ರಾಮದಲ್ಲಿ ಶನಿವಾರ ಸಂಜೆ ನಡೆದಿದೆ. ಗ್ರಾಮದ ಚಾಕಲಿ ವೆಂಕಟೇಶ್ಎಂಬುವವರಿಗೆ ಸೇರಿದ ಕುರಿಮರಿಗಳು ಕೊಟ್ಟಿಗೆಯಲ್ಲಿ ಇದ್ದ ವೇಳೆ ನಾಯಿಗಳು ದಾಳಿ ನಡೆಸಿಕೊಂದು ಹಾಕಿವೆ. ಘಟನೆಯಿಂದ ಕುರಿಗಾಹಿ ಬೆಚ್ಚಿ ಬಿದ್ದಿದ್ದು, ಘಟನೆ ಹಿನ್ನಲೆ ತೀವ್ರ ನಷ್ಟ ಉಂಟಾಗಿದೆ. ಜೀವನಾಧಾರಕ್ಕಾಗಿ ಸಾಲ ಮಾಡಿ ಕುರಿಗಳನ್ನು ಸಾಕುತ್ತಿದ್ದು, ಚಾಕಲಿ ವೆಂಕಟೇಶ್ ಅವರಿಗೆ ಇತ್ತೀಚಿಗೆ ಪಾರ್ಶ್ವವಾಯುವಿನಿಂದ ಬಳಯುತ್ತಿದ್ದು, ಹೆಂಡತಿಯು ಕುರಿಗಳನ್ನು […]

Continue Reading
IMG 20260321 WA0000

ಪಾವಗಡ: ಸಾಮಾಜ ಕಲ್ಯಾಣ ಇಲಾಖೆ ಅಧಿಕಾರಿ ಆತ್ಮಹತ್ಯೆ….!

ಸಾಮಾಜ ಕಲ್ಯಾಣ ಇಲಾಖೆ ಅಧಿಕಾರಿ ಆತ್ಮಹತ್ಯೆ….. ಪಾವಗಡ : ಸಾಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ್ ತಮ್ಮ ಕಛೇರಿಯಲ್ಲೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಾವಗಡದ ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆಯಲ್ಲಿ ನಡೆದಿದೆ ಸ್ಥಳಕ್ಕೆ ಪಾವಗಡ ಸಿ.ಬಿ.ಪಿ ಕೆ.ಸುರೇಶ್ ರವರು ಬಂದು ವಿಚಾರಣೆ ನಡೆಸುತ್ತಿದ್ದಾರೆ. ಪ್ರತಿ ನಿತ್ಯ ಕಚೇರಿ ಸಮಯದ ನಂತರ ಮನೆಗೆ ತೆರಳುತಿದ್ದ ಮಲ್ಲಿಕಾರ್ಜುನ ರವರು ಇಂದು ತಡವಾದರು ಕಚೇರಿಯಲ್ಲಿ ಒಂಟಿಯಾಗಿರುವುದನ್ನು ಸಿಬ್ಬಂದಿ ಗಮನಿಸಿದ್ದಾರೆ ಸಿಬ್ಬಂದಿ ಕರೆದರು ಬರದೆ ರೂಮ್ ಲಾಕ್ ಮಾಡಿಕೊಂಡಿದ್ದಾರೆ ಅನುಮಾನ […]

Continue Reading
IMG 20260317 WA0132

ಪಾವಗಡ : ಆತ್ಮಸ್ಥೈರ್ಯದಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ ಎದುರಿಸಿ…..!

  ಆತ್ಮಸ್ಥೈರ್ಯದಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ ಎದುರಿಸಿ, ಕ್ಷೇತ್ರ ಶಿಕ್ಷಣಾಧಿಕಾರಿ ರೇಣುಕಮ್ಮ. ಪಾವಗಡ : ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಯು ಜೀವನದ ಒಂದು ಸಾಮಾನ್ಯ ಹಂತವಾಗಿದ್ದು, ಯಾವುದೇ ಆತಂಕವಿಲ್ಲದೆ ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ರೇಣುಕಮ್ಮ ತಿಳಿಸಿದ್ದಾರೆ. ವಿದ್ಯಾರ್ಥಿಗಳು ಓದಿದ್ದನ್ನು ಪುನರ್ಮನನ ಮಾಡಿ, ಧನಾತ್ಮಕ ಚಿಂತನೆ, ಸಮರ್ಪಕ ಸಮಯದ ಯೋಜನೆ, ಮತ್ತು ಆರೋಗ್ಯಕರ ಆಹಾರದ ಮೂಲಕ ಉತ್ತಮ ಅಂಕಗಳನ್ನು ಪಡೆಯಬಹುದೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಎಸ್. ಎಸ್. ಎಲ್. ಸಿ ಪರೀಕ್ಷೆ ಮಾರ್ಚ್18ರಿಂದ ಏಪ್ರಿಲ್ 2ರವರೆಗೆ […]

Continue Reading
IMG 20260312 WA0010

ಪಾವಗಡ : ಗೃಹ ಬಳಕೆ ಸಿಲಿಂಡರ್‌ಗಳನ್ನು ವಾಣಿಜ್ಯಕ್ಕೆ ಬಳಿಸಿದರೆ ಕ್ರಮ….!

ಗೃಹ ಬಳಕೆ ಸಿಲಿಂಡರ್‌ಗಳನ್ನು ವಾಣಿಜ್ಯಕ್ಕೆ ಬಳಿಸಿದರೆ ಕ್ರಮ ಕೈಗೊಳ್ಳಲಾಗುವುದು. ತಹಶೀಲ್ದಾರ್ ವೈ ರವಿ. ಪಾವಗಡ: ಪ್ರಸ್ತುತ ಜಾಗತಿಕ ರಾಜಕೀಯ ಪರಿಸ್ಥಿತಿಗಳಿಂದ ಇಂಧನ ಸರಬರಾಜಿನಲ್ಲಿ ಅಲ್ಪ ಪ್ರಮಾಣದಲ್ಲಿ ವ್ಯತ್ಯಾಸ ಉಂಟಾಗಿದೆ ಎಂದು ತಹಶೀಲ್ದಾರ್ ವೈ ರವಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ತಾಲ್ಲೂಕಿನಲ್ಲಿನ ಹೋಟೆಲ್, ಬೇಕರಿ, ಬೀದಿ ಬದಿ ವ್ಯಾಪಾರಿಗಳು ಗೃಹ ಬಳಕೆ ಸಿಲಿಂಡರ್‌ಗಳನ್ನು ವಾಣಿಜ್ಯ ಬಳಕೆಗಾಗಿ ಉಪಯೋಗಿಸುವುದು ಕಂಡುಬಂದಲ್ಲಿ, ಅಂತಹವರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ-1955 ಮತ್ತು ಲಿಕ್ಸಿಫೈಡ್ ಪೆಟ್ರೋಲಿಯಂ ಗ್ಯಾಸ್(ರೆಗ್ಯುಲೇಷನ್ ಆಫ್ ಸಪ್ಪೆ, ಅಂಡ್ ಡಿಸ್ಟ್ರಿಬ್ಯೂಷನ್) ಆದೇಶ-2000 […]

Continue Reading
IMG 20260311 WA0040 scaled

ಪಾವಗಡ : ಹೆಣ್ಣು ಮಕ್ಕಳು ಶಿಕ್ಷಣ ಪಡೆದಾಗ ಮಾತ್ರ ದೇಶ ಸುಭದ್ರ…..!

  ಹೆಣ್ಣು ಮಕ್ಕಳು ಶಿಕ್ಷಣ ಪಡೆದಾಗ ಮಾತ್ರ ದೇಶ ಸುಭದ್ರ. ಕ್ಷೇತ್ರ ಶಿಕ್ಷಣಾಧಿಕಾರಿ ರೇಣುಕಮ್ಮ. ಪಾವಗಡ: ಹೆಣ್ಣು ಮಕ್ಕಳಿಗೆ ಶಿಕ್ಷಣದ ಅವಶ್ಯಕತೆ ಇದೆ ಎಂದು ಸಂವಿಧಾನ ಶಿಲ್ಪಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಸಂವಿಧಾನದ 15ರ ಅನುಸೂಚಿಯಲ್ಲಿ ತಿಳಿಸಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರೇಣುಕಮ್ಮ ತಿಳಿಸಿದರು. ಪಟ್ಟಣದ ಗುರುಭವನದಲ್ಲಿ ಬುಧವಾರ ತಾಲ್ಲೂಕು ಸಾವಿತ್ರಿಬಾಯಿ ಫುಲೆ ಸಂಘದ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಹೆಣ್ಣು ಮತ್ತು ಗಂಡು ಗಾಡಿಯ ಎರಡು […]

Continue Reading
IMG 20260311 WA0037

ಪಾವಗಡ : ದಾಳಿಂಬೆ ತೋಟಕ್ಕೆ ಬೆಂಕಿ ಹಚ್ಚಿದ ಕಿಡಿಗೇಡಿಗಳು….!

ದಾಳಿಂಬೆ ತೋಟಕ್ಕೆ ಬೆಂಕಿ ಹಚ್ಚಿದ ಕಿಡಿಗೇಡಿಗಳು. ಪಾವಗಡ: ಕಿಡಿಗೇಡಿಗಳು ದಾಳಿಂಬೆ ತೋಟಕ್ಕೆ ಬೆಂಕಿ ಹಚ್ಚಿದ ಪರಿಣಾಮ 12 ಎಕರೆ ಪ್ರದೇಶದಲ್ಲಿ ದ್ದ ದಾಳಿಂಬೆ ತೋಟ ಸುಟ್ಟು ಬಸ್ಮವಾಗಿರುವ ಘಟನೆ ತಾಲ್ಲೂಕಿನ ತಾಳೆಮರದಲಿ ಗ್ರಾಮದ ಹೊರವಲಯದಲ್ಲಿ ಸಂಭವಿಸಿದೆ. ತಾಳೇಮರದಹಳ್ಳಿ ಗ್ರಾಮದ ರೈತ ಹರಿ ಕುಮಾರ್ ಎನ್ನುವವರು ತಾಳೆಮರದಹಳ್ಳಿ-ಕಡಪಲಕೆರೆ ಬಳಿಇರುವ 12 ಎಕರೆಯಲ್ಲಿ ದಾಳಿಂಬೆ ಬೆಳೆ ಹಾಕಿದ್ದು, ಯಾರೋ ಕಿಡಿಗೇಡಿಗಳು ತೋಟಕ್ಕೆ ಬೆಂಕಿ ಹಚ್ಚಿದ ಪರಿಣಾಮ ಫಸಲಿಗೆ ಬಂದಿದ್ದ ದಾಳಿಂಬೆ ಬೆಳೆ ಮತ್ತು ತೋಟಕ್ಕೆ ಅಳವಡಿಸಿದ್ದ ಹನಿ ನೀರಾವರಿ ಸಲಕರಣೆಗಳು, […]

Continue Reading
IMG 20260305 WA0008

ಪಾವಗಡ : ಕೆಟು ನಿಂತ ಶುದ್ಧ ಕುಡಿಯುವ ನೀರಿನ ಘಟಕಗಳು….!

  ಕೆಟು ನಿಂತ ಶುದ್ಧ ಕುಡಿಯುವ ನೀರಿನ ಘಟಕಗಳು. ಪಾವಗಡ: ತಾಲ್ಲೂಕಿನ ಬ್ಯಾಡನೂರು ಗ್ರಾಮ ಪಂಚಾಯಿತಿಯ ಪಿ ವಡ್ಡರಹಟ್ಟಿ ಯಲ್ಲಿ ಗ್ರಾಮಸ್ಥರ ಅನುಕೂಲಕ್ಕಾಗಿ ಗ್ರಾಮದಲ್ಲಿ ಅಳವಡಿಸಲಾದ 02 ಶುದ್ಧ ಕುಡಿಯುವ ನೀರಿನ ಘಟಕಗಳು 10 ತಿಂಗಳಿನಿಂದ ಕೆಟ್ಟು ನಿಂತಿದೆ. ಆದರೆ, ಈ ಘಟಕವನ್ನು ಇನ್ನೂ ಸರಿಪಡಿಸದ ಹಿನ್ನೆಲೆಯಲ್ಲಿ ಗ್ರಾಮದ ಜನರು ಖಾಸಗಿ ವ್ಯಕ್ತಿಗಳಿಂದ ನೀರು ಖರೀದಿಸಿ ಕುಡಿಯುವ ಅನಿವಾರ್ಯತೆ ಎದುರಾಗಿದೆ. ಪಿ ವಡ್ಡರಹಟ್ಟಿ ಗ್ರಾಮಸ್ಥರು ಶುದ್ಧ ಕುಡಿಯುವ ನೀರಿಗಾಗಿ ಪ್ರತಿನಿತ್ಯ ದೂರದ ಬ್ಯಾಡನೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ […]

Continue Reading