WhatsApp Image 2020 04 13 at 4.27.33 PM

ರೈತರ ನೆರವಿಗೆ ಜನಪ್ರತಿನಿಧಿಗಳು…!

DISTRICT NEWS

ರೈತರಿಗೆ ನೆರವಾಗಲೆಂದು ಶಾಸಕರು ಸಂಸದರು ಹಾಗೂ ಜನಪ್ರತಿನಿಧಿಗಳು ರೈತರ ಬೆಳೆಗಳನ್ನು ಖರೀದಿ ಮಾಡಿ ಅವರ ಕ್ಷೇತ್ರಕ್ಕೆ ವಿತರಿಸುವ ಕಾರ್ಯಕೆ ಸರ್ಕಾರ ನೆರವು ಮಾಡಲಿದೆ ಎಂದು ಮೈಸೂರು ಉಸ್ತುವಾರಿ ಸಚಿವ ಹಾಗೂ ಸಹಕಾರಿ ಸಚಿವ ಎಸ್ ಟಿ ಸೋಮಶೇಖರ್ ತಿಳಿಸಿದ್ದಾರೆ

ಮೈಸೂರಿನಲ್ಲಿ ಇಂದು
ಕೋರನ ಪ್ರಯುಕ್ತ ಮುಖ್ಯಮಂತ್ರಿಗಳ ನಿಧಿಗೆ ಚೆಕ್ ಪಡೆದುಕೊಂಡು ನಂತರ ಮಾತನಾಡಿದ
ರಾಜ್ಯದಲ್ಲಿನ ಕೆಲವು ಜನಪ್ರತಿನಿಧಿಗಳು ರೈತರಿಗೆ ನೆರವಾಗಲೆಂದು ಹಣ್ಣು ತರಕಾರಿ ಹಾಗೂ ಇತರ ಪದಾರ್ಥಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಇತರ ಜನಪ್ರತಿನಿಧಿಗಳು ರೈತ ಬೇಳೆ ಖರೀದಿ ಮಾಡಲು ಮುಂದೆ ಬಂದರೆ ರೈತರ ವಿಳಾಸ ಹಾಗೂ ಬೆಳೆಗಳ ಬಗ್ಗೆ ಸರ್ಕಾರವೆ ನಿಖರವಾದ ಮಾಹಿತಿ ನೀಡಿ ರೈತರಿಗೂ ಜನಪ್ರತಿನಿದಿಗಳಿಗೆ ನೇರ ಸಂಪರ್ಕ ಕಲ್ಪಿಸಲಿದೆ ರೈತರು ಬೆಳೆದ ಬೆಳೆಗಳನ್ನು ಕೃಷಿ ಮಾರುಕಟ್ಟೆಗೆ ತಂದು ಮಾರಾಟ ಮಾಡಲು ಎಲ್ಲ ರೀತಿಯ ಸೌಕರ್ಯಗಳನ್ನು ಮಾಡಲಾಗಿದೆ ಅವರು ರಾಜ್ಯದಲ್ಲಿರುವ ರೈತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಮುತುವರ್ಜಿ ವಹಿಸಲಾಗಿದೆ ಗ್ರಾಮೀಣ ಪ್ರದೇಶಗಳಿಂದ ನಗರ ಹಾಗೂ ತಾಲ್ಲೂಕುಗಳಲ್ಲಿರುವ ಕೃಷಿ ಮಾರುಕಟ್ಟೆ ಆವರಣಕ್ಕೆ ರೈತರು ಬೆಳೆಗಳನ್ನು ತರಲು ಯಾವುದೇ ರೀತಿಯ ತೊಂದರೆಯಾಗದಂತೆ ಸೂಚನೆ ನೀಡಲಾಗಿದೆ ರೈತರು ಈ ಬಗ್ಗೆ ಆತಂಕಪಡುವ ಪ್ರಮೇಯವಿಲ್ಲ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿರುವ ಕೃಷಿ ಮಾರುಕಟ್ಟೆಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸಿ ರೈತರಿಗೆ ನೆರವಾಗಲಿದ್ದೇವೆ ಮುಖ್ಯಮಂತ್ರಿಗಳ ನಿಧಿಗೆ ಸಹಕಾರ ಇಲಾಖೆಯಿಂದ ಐವತ್ತು ಕೋಟಿ ರೂಗಳನ್ನು ನೀಡಲು ಮುಂದಾಗಿದ್ದೇವೆ ಈಗಾಗಲೇ ನಲವತ್ತೈದು ಕೋಟಿ ರೂಗಳು ಸಂಗ್ರಹವಾಗಿದೆ 5 ಕೋಟಿ ರುಗಳನ್ನು ಸಂಗ್ರಹಿಸಿ 50 ಕೋಟಿ ನೀಡಲಾಗುವುದು ಎಂದು ತಿಳಿಸಿದರು

ಕೋರನ ಹಿನ್ನೆಲೆಯಲ್ಲಿ ದೇಶವೇ ಲಾಕ್ ಔಟ್ ಆಗಿದೆ
ಮುಖ್ಯಮಂತ್ರಿಗಳು ಹಾಗೂ ಪ್ರಧಾನ ಮಂತ್ರಿಗಳ ವಿಪತ್ತು ನಿಧಿಗೆ ಎಲ್ಲರೂ ಸಹಾಯ ಮಾಡೋಣ ಮುಖ್ಯಮಂತ್ರಿಗಳಿಗೆ ನಿಧಿಗೆ ಹಣ ನೀಡಿದ ದಾನಿಗಳಾದ ಪ್ರಕಾಶ್ ತಿಳಿಸಿದ್ದಾರೆ