IMG 20211109 WA0003

ಪಾವಗಡ:ಮಟ್ಕಾ ದಂಧೆಕೋರರಿಗೆ ಖಡಕ್ ಎಚ್ಚರಿಕೆ….!

DISTRICT NEWS ತುಮಕೂರು

ಮಟ್ಕಾ ಮುಕ್ತ ಪಾವಗಡ ಮಾಡಲು ಪಾವಗಡ ಠಾಣಾ ಸಿ.ಪಿ.ಐ ಲಕ್ಷ್ಮಿಕಾಂತ್ ಮಟ್ಕಾ ದಂಧೆಕೋರರಿಗೆ ಖಡಕ್ ಎಚ್ಚರಿಕೆ.

ಪಾವಗಡದಲ್ಲಿ ಮಟ್ಕಾ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಲ್ಲಿಸಬೇಕೆಂದು ಸಿಪಿಐ ಲಕ್ಷ್ಮಿಕಾಂತ್ ಅವರಿಗೆ ಇತ್ತೀಚೆಗೆ ಜೆಡಿಎಸ್ ಐಟಿ ಘಟಕದಿಂದ ಮನವಿ ಪತ್ರ ಸಲ್ಲಿಸಿರುವ ಹಿನ್ನೆಲೆ. ಪಾವಗಡ ಠಾಣೆಯ ಸಿಪಿಐ ಲಕ್ಷ್ಮಿಕಾಂತ ರವರು ದಂದೆಯ ಕಿಂಗ್ ಪಿನ್ ಆದ ಅಶ್ವಥ್ ಮತ್ತು ಸಹೋದರರಾದ ರಾಮಂಜಿ ರಾಮಕೃಷ್ಣ ಗಂಗಾಧರ ಸೋದರನ ಪುತ್ರ ರಂಜಿತ್ ಹಾಗೂ ಪ್ರಮುಖ ಮಟ್ಕಾ ಬುಕ್ಕಿ ಕುಂಟಿನೂರಿ ಯನ್ನು ಪಾವಗಡ ಠಾಣೆಗೆ ವಿಚಾರಣೆಗೆ ಕರೆಸಿದ್ದು ಸಿಪಿಐ ಲಕ್ಷ್ಮಿಕಾಂತ್ ಪಾವಗಡದಲ್ಲಿ ಮಟ್ಕಾ ಚಟುವಟಿಕೆಗಳ ನಿಲ್ಲಿಸಬೇಕು ಇಲ್ಲವಾದಲ್ಲಿ ನಿಮ್ಮ ಮೇಲೆ ಗೂಂಡಾ ಕಾಯ್ದೆ ಹಾಕಿ ಜಿಲ್ಲೆಯಿಂದ ಗಡಿಪಾರು ಮಾಡಬೇಕಾಗುತ್ತದೆ ಎಂದು ಮಟ್ಕಾ ಕಿಂಗ್ ಪಿನ್ ಅಶ್ವಥ್ ಹಾಗೂ ಅವನ ಸಹೋದರರಿಗೆ ಖಡಕ್ ಎಚ್ಚರಿಕೆ ನೀಡಿದರು.

ನೀವು ನಿಮ್ಮ ಉತ್ತಮ ಕೆಲಸಗಳನ್ನು ಮಾಡಿಕೊಂಡು ಹೋದರೆ ಪೊಲೀಸ್ ಇಲಾಖೆಯಿಂದ ಯಾವುದೇ ತೊಂದರೆ ಆಗುವುದಿಲ್ಲ ಅದನ್ನು ಬಿಟ್ಟು ಮಟ್ಕಾ ಬೀಟರ್ ಗಳನ್ನು ಇಟ್ಟುಕೊಂಡು ದಂದೆ ನಡೆಸಿದರೆ ಪೊಲೀಸ್ ಇಲಾಖೆ ಸುಮ್ಮನೆ ಕೂರುವುದಿಲ್ಲ ನಿಮಗೆ ತಪ್ಪುಗಳನ್ನು ತಿದ್ದಿಕೊಳ್ಳಲು ಅವಕಾಶ ನೀಡಲಾಗಿದೆ ಅದರಂತೆ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಿಬಾಳಿದರೆ ನಿಮಗೆ ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ತಿಳಿಸಿದರು

ಈ ಸಂದರ್ಭದಲ್ಲಿ ಎಸ್ಐ ಗುರುನಾಥ್ ಪೇದೆಗಳಾದ ಶಿವಕುಮಾರ್ ಮತ್ತು ನಾಗಭೂಷಣ್ ರೆಡ್ಡಿ ರವರು ಉಪಸ್ಥಿತರಿದ್ದರು

ವರದಿ: ಶ್ರೀನಿವಾಸುಲು ಎ