IMG 20210925 WA0031

ಸಾರ್ಥಕತೆಯ ಬದುಕಿಗೆ ಮಹಾತ್ಮರ ಚರಿತಾಮೃತ ದಾರಿದೀಪ….!

Genaral STATE

*ಸಾರ್ಥಕತೆಯ ಬದುಕಿಗೆ ಮಹಾತ್ಮರ ಚರಿತಾಮೃತ ದಾರಿದೀಪ:* *ಬಸವರಾಜ ಬೊಮ್ಮಾಯಿ*

ಬೆಂಗಳೂರು, ಸೆಪ್ಟೆಂಬರ್ ೨೫: ಅಥಣಿಯ ಮೋಟಗಿಮಠದ ಶ್ರೀ ಪ್ರಭು ಚನ್ನಬಸವ ಸ್ವಾಮಿಗಳು ರಚಿಸಿರುವ ಮಹಾತ್ಮರ ಚರಿತಾಮೃತ ಗ್ರಂಥ ಸಾರ್ಥಕ ಬದುಕಿಗೆ ದಾರಿದೀಪವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಅಥಣಿಯ ಮೊಟಿಗಿಮಠದ ಪೀಠಾಧಿಪತಿ ಶ್ರೀ ಪ್ರಭು ಚನ್ನಬಸವ ವಿರಚಿತ ಮಹಾತ್ಮರ ಚರಿತಾಮೃತ ಗ್ರಂಥವನ್ನು ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.

ಅಥಣಿಯ ಚನ್ನಬಸವ ಸ್ವಾಮಿಗಳು ಅತ್ಯಂತ ಕ್ರಿಯಾಶೀಲರು. ಚಿಂತನೆಯ ಜೊತೆಗೆ ಕ್ರಿಯಾಶೀಲತೆ ಮುಖ್ಯ. ಚಿಂತನೆಯನ್ನು ಕಾರ್ಯರೂಪಕ್ಕೆ ತರಲು ಕ್ರಿಯಾಶೀಲತೆ ಬೇಕು. ಸ್ವಾಮೀಜಿಗಳು ಒಂದು ಹೆಜ್ಜೆ ಮುಂದೆ ಹೋಗಿ ಪ್ರತಿಯೊಬ್ಬರೂ ಕ್ರಿಯಾಶೀಲರಾಗಬೇಕೆಂದು ದಾರ್ಶನಿಕ ಕ್ರಿಯಾಶೀಲತೆಯನ್ನು ಈ ಜಗತ್ತಿನಲ್ಲಿ ತರಲು ಮಹಾತ್ಮರ ಚರಿತಾಮೃತವನ್ನು ಹೊರತಂದಿದ್ದಾರೆ. ಅದಕ್ಕಾಗಿ ಶ್ರೀಗಳಿಗೆ ಅಭಿನಂದನೆಗಳು ಎಂದರು‌.‌IMG 20210925 WA0030

ಪ್ರತಿಯೊಬ್ಬ ಮನುಷ್ಯನಲ್ಲಿ ಒಳಧ್ವನಿ ಇರುತ್ತದೆ. ಯಾರು ಒಳಧ್ವನಿಗೆ ಕಿವಿಗೊಡುತ್ತಾರೆ ಅವರು ಜೀವನದ ಅರ್ಥ ಪಡೆಯುತ್ತಾರೆ ಎಂದರು.

ಬದುಕನ್ನು ಬಹುತೇಕವಾಗಿ ಹೊರಜಗತ್ತು, ಹೊರ ಒತ್ತಡದಲ್ಲಿ ಹಾಗೂ ಇತರರಿಗಾಗಿಯೆ ಕಳೆಯುತ್ತೇವೆ. ಚಿಂತನೆಗೆ ಹಾಗೂ ಒಳಧ್ವನಿಗೆ ಸಮಯವನ್ನು ನೀಡಿದ ಮಹಾತ್ಮರು ನಮ್ಮ ಮುಂದೆ ಇಟ್ಟಿದ್ದಾರೆ. ಇದನ್ನು ಓದಿದರೆ, ನಮ್ಮ ಬದುಕು ಬದಲಾಗುತ್ತದೆ ಎಂಬ ಪ್ರಬಲ ನಂಬಿಕೆ ನನ್ನದು. ಬದಲಾವಣೆ ಮಾಡುವ ಶಕ್ತಿಯಿರುವ ಗ್ರಂಥ. ಅನೇಕರು ಎಲೆಮರೆಕಾಯಿಯಂತೆ ಸಾಧನೆ ಮಾಡುತ್ತಾರೆ. ಮಹಾತ್ಮರ ಚರಿತ್ರೆಯನ್ನು ನಮ್ಮ ಮುಂದೆ ಇಟ್ಟು. ಸಾಮಾನ್ಯರೂ ಕೂಡ ಮಹಾತ್ಮರಾಗಬಹುದು ಎಂದು ಸ್ವಾಮಿಗಳು ತಿಳಿಸಿದ್ದಾರೆ. ಸಾವಿನ ನಂತರವೂ ಅವರನ್ನು ನೆನೆಸಿಕೊಳ್ಳುವ ಕೆಲಸವನ್ನು ಮಾಡಿದ್ದಾರೆ ಎಂದರು.

ಸಾಧಕರು ಶ್ರೀಮಂತ ಬದುಕನ್ನು ಬದುಕಿದ್ದಾರೆ. ಭಾವಶ್ರೀಮಂತಿಕೆ, ಸಂಬಂಧಗಳ ಶ್ರೀಮಂತಿಕೆಯನ್ನು ಬಿಟ್ಟು ಹೋಗಿದ್ದಾರೆ. ಹೊರ ಬದುಕಿನಲ್ಲಿ ಏರುಪೇರುಗಳಾಗುತ್ತವೆ. ಒಳ ಬದುಕು ನಿರಂತರವಾಗಿ ಸಾಗುತ್ತದೆ. ಅವರು ಸಾಗಿರುವ ಸಾವಿರಾರು ಹೆಜ್ಜೆಗಳಲ್ಲಿ ಎರಡು ಹೆಜ್ಜೆ ಸಾಗಿದರೆ, ದೊಡ್ಡ ಸಾಧನೆಯಾಗುತ್ತದೆ ಎಂದರು.IMG 20210925 WA0028

ಬಸವಣ್ಣನವರ ಬದುಕನ್ನೇ ತೆಗೆದುಕೊಂಡರೆ, ಸಾಮಾನ್ಯರ ಕುಟುಂಬದಿಂದ ಬಂದರೂ, ಅವರ ಆಚಾರ ವಿಚಾರಗಳಿಂದ ಬಹಳ ದೊಡ್ಡ ಎತ್ತರಕ್ಕೆ ಏರಿದರು. ರಾಜ್ಯಕ್ಕೆ ಬಂದ ಎಲ್ಲಾ ಸಂಕಷ್ಟಗಳನ್ನು ಮೆಟ್ಟಿ ನಿಂತು ಸವಾಲುಗಳನ್ನು ಸ್ವೀಕರಿಸುತ್ತೇನೆ. ನಿಮ್ಮ ನಂಬಿಕೆ, ವಿಶ್ವಾಸಕ್ಕೆ ಕಿಂಚಿತ್ತೂ ವ್ಯತ್ಯಾಸವಾದದಂತೆ ಕೆಲಸ ಮಾಡುತ್ತೇನೆ. ನಿಮ್ಮ ಮನೆಗೆ ಹೂವನ್ನು ತರುತ್ತೇನೆ, ಹುಲ್ಲು ತರುವುದಿಲ್ಲ ಎಂದರು.

ಕರ್ನಾಟಕ ನೈಸರ್ಗಿಕವಾಗಿ ಸಂಪದ್ಭರಿತ ರಾಜ್ಯ. ಅದರ ಸದ್ಬಳಕೆಯ ಮಾಡುವ ಮುಖಾಂತರ ಈ ರಾಜ್ಯದ ಕಟ್ಟ ಕಡೆಯ ವ್ಯಕ್ತಿಗೂ ಸ್ವಾಭಿಮಾನದ ಬದುಕುಳಿಯುವ ಬದುಕಲು, ಸೌಲಭ್ಯಗಳನ್ನು ತಲುಪಿಸಲು ಪ್ರಯತ್ನಿಸಲಾಗುವುದು. ಅವರ ಜೀವನಗುಣಮಟ್ಟದವನ್ನು ಹೆಚ್ಚಿಸಿ, ಶಿಕ್ಷಣ, ಆರೋಗ್ಯ ಹಾಗೂ ಕೈಗಳಿಗೆ ಕೆಲಸವನ್ನು ನೀಡುವ ಮೂಲಭೂತ ಕಾರ್ಯವನ್ನು ಮಾಡುತ್ತೇನೆ. ಈ ದೊಡ್ಡ ಕೆಲಸಕ್ಕೆ ನಿಮ್ಮ ಸಹಕಾರ ಅಗತ್ಯ ಎಂದರು.

ಸಮಾರಂಭದಲ್ಲಿ ಸುತ್ತೂರು ಮಠದ ಜಗದ್ಗುರು ಶ್ರೀ ಶಿವರಾತ್ರಿದೇಶೀಕೇಂದ್ರ ಸ್ವಾಮೀಜಿ, ಸಚಿವ ವಿ.ಸೋಮಣ್ಣ,¸ಸರ್ವೋಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಶಿವರಾಜ್.ವಿ.ಪಾಟೀಲ್, ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಬಸವ ವೇದಿಕೆ ಅಧ್ಯಕ್ಷರಾದ ಡಾ: ಸಿ.ಸೋಮಶೇಖರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.