IMG 20220415 WA0008

ಪಾವಗಡ: ಅಂಬೇಡ್ಕರ್ ಜಯಂತಿ ಆಚರಣೆ…!

DISTRICT NEWS ತುಮಕೂರು

ಅದ್ದೂರಿಯಾಗಿ ನಡೆದ ಮಹಾನ್ ನಾಯಕರ ಜಯಂತಿ.

ಪಾವಗಡ.. ಇಂದು ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಸಂವಿಧಾನ ಶಿಲ್ಪಿ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ 131ನೇ ಜನ್ಮದಿನಾಚರಣೆ ಹಾಗೂ ಹಸಿರು ಕ್ರಾಂತಿಯ ಹರಿಕಾರ ಹಾಗೂ ಭಾರತದ ಮಾಜಿ ಪ್ರಧಾನಿಯಾದ ಜಗಜೀವನ್ ರಾಮ್ ರವರ 115ನೇ ಜನ್ಮದಿನಾಚರಣೆಯನ್ನು ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಹಾಗೂ ಪುರಸಭೆ ಸಂಯುಕ್ತಾಶ್ರಯದಲ್ಲಿ ಬಹಳ ವೈಭವಯುತವಾಗಿ ನಡೆಯಿತು

IMG 20220415 WA0009

ಕಾರ್ಯಕ್ರಮ ಉದ್ದೇಶಿಸಿ ಶಾಸಕ ವೆಂಕಟರಮಣಪ್ಪ ಮಾತನಾಡುತ್ತಾ, ಅಂಬೇಡ್ಕರ್ ಹಿಂದುಳಿದ ವರ್ಗಗಳ ಜನರ ಆಶಾದೀಪ, ಭಾರತದಂತಹ ದೊಡ್ಡ ದೇಶಕ್ಕೆ ಸಂವಿಧಾನ ರಚನೆ ಮಾಡಿದ ಮಹಾನಾಯಕ. ಇವರ ಗುಣಗಳನ್ನು ಆದರ್ಶಗಳನ್ನು ಪಾಲಿಸಿಕೊಂಡು ಹೋಗುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ಎಂದರು. ಮತ್ತೊಬ್ಬ ಮಹಾ ನಾಯಕರಾದ , ಬಾಬು ಜಗಜೀವನ್ ರಾಮ್ ಅವರ ಪರಿ ಶ್ರಮದ ಫಲದಿಂದಾಗ ಪ್ರತಿಯೊಬ್ಬರೂ ಉತ್ತಮ ಜೀವನ ಸಾಗಿಸಲು ಸಹಕಾರಿಯಾಗಿದೆ. ತಹಶೀಲ್ದಾರ್ ಕಚೇರಿಯ ಪಕ್ಕದಲ್ಲಿರುವ ಅಂಬೇಡ್ಕರ್ ಭವನವನ್ನು ಗ್ರಂಥಾಲಯ ವನ್ನಾಗಿ ಪರಿವರ್ತಿಸಿ ಅದಕ್ಕೆ ಅಂಬೇಡ್ಕರ್ ಮತ್ತು ಜಗಜೀವನರಾಮ್ ಗ್ರಂಥಾಲಯ ವೆಂದು ನಾಮಕರಣ ಮಾಡಲಾಗುವುದು ಎಂದು ತಿಳಿಸಿದರು.

IMG 20220415 WA0010

ತಹಶೀಲ್ದಾರ್ ವರದರಾಜು, ಮಾತನಾಡುತ್ತಾ, ಅಂಬೇಡ್ಕರ್, ಹಾಗೂ ಜಗಜೀವನರಾಮ್ ಅವರ ಸರಳತೆ, ಪರಿಶ್ರಮ. ಸಮಾನತೆಯ ತತ್ವಗಳನ್ನುಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ
ಪ್ರಾಂಶುಪಾಲ ಬಸವಲಿಂಗಪ್ಪ , ಡಾ. ಕರಿಯಣ್ಣ ನಿಷಾದ, ಪುರಸಭೆ ಅಧ್ಯಕ್ಷೆ ಗಂಗಮ್ಮ, ಉಪಾಧ್ಯಕ್ಷೆ ಜಾಹ್ನವಿ, ಕಾರ್ಯನಿರ್ವಹಣಾಧಿಕಾರಿ ಶಿವರಾಜಯ್ಯ , ಪುರಸಭೆ ಮುಖ್ಯಾಧಿಕಾರಿ ಬಿ.ಸಿ ಅರ್ಚನಾ , ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ವಿ.ಎಸ್ ಶಿವಣ್ಣ, ಸಿ. ಕೆ ತಿಪ್ಪೇಸ್ವಾಮಿ , ತಮಟೆ ಸುಬ್ಬರಾಯ , ಹನುಮಂತಪ್ಪ ಕ್ಷೇತ್ರ ಶಿಕ್ಷಣಾಧಿಕಾರಿ ಅಶ್ವತ್ಥನಾರಾಯಣ ಮುಂತಾದವರು ಉಪಸ್ಥಿತರಿದ್ದರು.

ವರದಿ: ಶ್ರೀನಿವಾಸುಲು ಎ