IMG 20220822 WA0005

ಕಾಂಗ್ರೆಸ್ :ರಾಜೀವ್ ಗಾಂಧಿ ಹಾಗೂ ಡಿ. ದೇವರಾಜ ಅರಸು ಅವರ ಜನ್ಮದಿನಾಚರಣೆ

POLATICAL STATE

ರಾಜೀವ್ ಗಾಂಧಿ ಹಾಗೂ ಡಿ. ದೇವರಾಜ ಅರಸು ಅವರ ಜನ್ಮದಿನಾಚರಣೆ

ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ:

ಇಡೀ ದೇಶದಲ್ಲಿ ಕಾಂಗ್ರೆಸ್ ಇಂದು ದಿವಂಗತ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಜನ್ಮದಿನ ಆಚರಿಸುತ್ತಿದೆ. ಆ.20ರಂದು ರಾಜೀವ್ ಗಾಂಧಿ ಹಾಗೂ ದೇವರಾಜ ಅರಸು ಅವರ ಜನ್ಮದಿನ. ಈ ಇಬ್ಬರು ನಾಯಕರು ಜನ್ಮದಿನ ಒಂದೇ ದಿನ ಆಗಿದ್ದು, ಒಟ್ಟಿಗೆ ಜನ್ಮದಿನ ಆಚರಿಸುತ್ತಿದ್ದೇವೆ. ಆ ಮೂಲಕ ಅವರ ಸ್ಮರಣೆ ಮಾಡುತ್ತಿದ್ದೇವೆ.

ರಾಜೀವ್ ಗಾಂಧಿ ಅವರು ಚಿಕ್ಕ ವಯಸ್ಸಿನಲ್ಲಿ ಈ ಬೃಹತ್ ರಾಷ್ಟ್ರದ ಪ್ರಧಾನಿ ಆದರು. ಅವರು ಪ್ರಧಾನಿಯಾಗಿ ಈ ದೇಶವನ್ನು 21ನೇ ಶತಮಾನಕ್ಕೆ ವಿಜ್ಞಾನ, ತಂತ್ರಜ್ಞಾನ, ಸಂಪರ್ಕ ಕ್ಷೇತ್ರಗಳಲ್ಲಿ ಜಗತ್ತಿನ ಇತರೆ ರಾಷ್ಟ್ರಗಳ ಮಟ್ಟಕ್ಕೆ ನಿಲ್ಲಲು ತೀರ್ಮಾನಿಸಿ ಇವುಗಳ ಬೆಳವಣಿಗೆಗೆ ಕ್ರಾಂತಿ ಮಾಡಿದರು. ಇಡೀ ಜಗತ್ತು ಭಾರತದತ್ತ ತಿರುಗಿ ನೋಡುವಂತೆ ಮಾಡಿದರು. ಅವರಿಗೆ ಯುವಕರಲ್ಲಿ ಅಪಾರವಾದ ಭರವಸೆ ಇತ್ತು. ಅಂಬೇಡ್ಕರ್ ಅವರು ಒಂದು ಮಾತು ಹೇಳಿದ್ದರು. ಇತಿಹಾಸ ಗೊತ್ತಿಲ್ಲದವರು ಇತಿಹಾಸ ನಿರ್ಮಿಸಲು ಸಾಧ್ಯವಿಲ್ಲ ಎಂದು. ಇತಿಹಾಸ ತಿಳಿದವರು ಭವಿಷ್ಯ ರೂಪಿಸಲು ಸಾಧ್ಯವಿಲ್ಲ. ಹೀಗಾಗಿ ಬಿಜೆಪಿಯವರು ಇತಿಹಾಸ ತಿರುಚಲು ಹೊರಟಿದ್ದಾರೆ.

ಕುವೆಂಪು, ಅಂಬೇಡ್ಕರ್, ಕನಕದಾಸರು, ಭಗತ್ ಸಿಂಗ್, ನಾರಾಯಣ ಗುರು ಸೇರಿದಂತೆ ಅನೇಕ ಮಹಾನ್ ವ್ಯಕ್ತಿಗಳ ಚರಿತ್ರೆ ಬದಲಿಸಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ನಮ್ಮ ಯುವಕರು ಚರಿತ್ರೆ ತಿಳಿದುಕೊಳ್ಳಬೇಕಾದದ್ದು ಅವಶ್ಯಕ, ಆಗ ಮಾತ್ರ ನೀವು ಭವಿಷ್ಯದಲ್ಲಿ ಸರಿಯಾದ ತೀರ್ಮಾನ ಮಾಡಲು ಸಾಧ್ಯ. ಪಟ್ಟಭದ್ರಶಕ್ತಿಗಳು ಯುವಕರನ್ನು ಜಾತಿ, ಧರ್ಮದ ಹೆಸರಲ್ಲಿ ದಾರಿ ತಪ್ಪಿಸಿ ನೀಚಕೆಲಸ ಮಾಡುತ್ತಿದ್ದಾರೆ. ಅದಕ್ಕಾಗಿ ನಮ್ಮ ವಿದ್ಯಾರ್ಥಿಗಳು ಇತಿಹಾಸವನ್ನು ಅರ್ಥ ಮಾಡಿಕೊಳ್ಳಬೇಕು. ಆ ಮೂಲಕ ಭವಿಷ್ಯ ರೂಪಿಸಿ, ದೇಶಕ್ಕೆ ಭವಿಷ್ಯ ನೀಡಬೇಕು. ಅದಕ್ಕಾಗಿ ರಾಜೀವ್ ಗಾಂಧಿ ಅವರು ಯುವಕರಿಗೆ ಮತದಾನದ ಹಕ್ಕನ್ನು 21 ವರ್ಷದಿಂದ 18 ವರ್ಷಕ್ಕೆ ಇಳಿಸಿದರು.

ದೇಶದ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿ ಅವರು ಒಳ್ಳೆಯ ತೀರ್ಮಾನ ಮಾಡಬೇಕು ಎಂದು ಮತದಾನದ ಹಕ್ಕು ನೀಡಿದರು. ಇದನ್ನು ಪ್ರತಿಯೊಬ್ಬ ಯುವಕ ಯುವತಿಯರು ಅರ್ಥ ಮಾಡಿಕೊಳ್ಳಬೇಕು.

ರಾಜೀವ್ ಗಾಂಧಿ ಅವರು ಸಂವಿಧಾನಕ್ಕೆ 73 ಹಾಗೂ 74ನೇ ತಿದ್ದುಪಡಿ ತಂದರು. ಇದನ್ನು ತರುವ ಮುನ್ನ ಮಹಿಳೆಯರಿಗೆ ಸಂವಿಧಾನ ಬದ್ಧ ರಾಜಕೀಯ ಮೀಸಲಾತಿ ಇರಲಿಲ್ಲ. ಹಿಂದುಳಿದವರಿಗೆ ರಾಜಕೀಯ ಮೀಸಲಾತಿ ಇರಲಿಲ್ಲ. ಪ್ರಜಾಪ್ರಭುತ್ವ ಬಲಗೊಳಿಸಬೇಕು, ಜನ ಪಾಲುದಾರರಾಗಬೇಕು ಎಂದು ಈ ತಿದ್ದುಪಡಿ ತಂದರು. ಯಾರಿಗೆ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿರಲಿಲ್ಲ, ಅವರು ಕೂಡ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಭಾಗವಹಿಸಲು ತಿದ್ದುಪಡಿ ತಂದರು. ಅದನ್ನು ಜಾರಿ ಕೊಟ್ಟವರು ನರಸಿಂಹರಾವ್ ಅವರು.

ಈ ತಿಂದ್ದುಪಡಿ ಆಗುವವರೆಗೂ ಹಿಂದುಳಿದವರಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಮೀಸಲಾತಿ ಇರಲಿಲ್ಲ. 94-95ನೇ ರಲ್ಲಿ ತಾಲೂಕು ಪಂಚಾಯ್ತಿ, ಪಾಲಿಕೆ, ನಗರ ಸಭೆ ಚುವನಾವಣೆಯಲ್ಲಿ ಮೀಸಲಾತಿ ಸಿಕ್ಕಿತು. 33% ಹಿಂದುಳಿದವರಿಗೆ ಮೀಸಲಾತಿ ಮೊದಲ ಬಾರಿಗೆ ನೀಡಲಾಯಿತು. ಬಿಸಿಎಂಎ ಅವರಿಗೆ 26.4% ಹಾಗೂ ಬಿಸಿಎಂಬಿ ಅವರಿಗೆ 6.6% ಒಟ್ಟು 33% ರಷ್ಟು ಮೀಸಲಾತಿ ನೀಡಿದರು.

IMG 20220822 WA0002

ಇದನ್ನು ಜನರಿಗೆ ತಿಳಿಸಬೇಕು. ಬಿಜೆಪಿಯವರಿಗೆ ಹಿಂದುಳಿದವರು, ಮಹಿಳೆಯರಿಗೆ ಮೀಸಲಾತಿ ನೀಡುವ ಇಚ್ಛಾಶಕ್ತಿ ಬದ್ಧತೆ ಇಲ್ಲ. ಈ ಮೀಸಲಾಯಿ ವಿರುದ್ಧ ಬಿಜೆಪಿ ಉಪಾಧ್ಯಕ್ಷರಾಗಿದ್ದ ರಾಮಾಜೋಷಿಸ್ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಆಗ ಇದ್ದ ಮಹಾ ವೀರರಾದ ಯಡಿಯೂರಪ್ಪ, ಈಶ್ವರಪ್ಪ ಅವರು ಇವರನ್ನು ತಡೆದಿದ್ದರಾ? ಈ ತಿದ್ದುಪಡಿಯನ್ನು ಸುಪ್ರೀಂ ಕೋರ್ಟ್ ನಲ್ಲಿ ವಿರೋಧಿಸಿದರು. ಅದೃಷ್ಟವಶಾತ್ ಈ ಅರ್ತಿ ವಜಾಗೊಂಡಿತು. ಹೀಗಾಗಿ ಮೀಸಲಾತಿ ಉಲಿಯಿತು. ಈಗ ಮತ್ತೆ ಅಪಾಯ ಎದುರಾಗಿದೆ.

ಸುಪ್ರೀಂ ಕೋರ್ಟ್ ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶ ಕೊಟ್ಟ ಮೀಸಲಾತಿಯನ್ನು ಒಡೆದುಹಾಕಿದ್ದಾರೆ. ಈಗ ಸುಪ್ರೀಂ ಕೋಟ್ ಹಿಂದುಳಿದ ಮೀಸಲಾತಿ ನೀಡುವಾಗ ಮೂರು ಪರೀಕ್ಷೆ ಮಾಡಿಲ್ಲ, ನಿಮಗೆ ಹಿಂದುಳಿದವರ ಬಗ್ಗೆ ಅಂಕಿ ಅಂಶ ಇಲ್ಲ ಎಂದರು. ಇದೇ ಕಾರಣಕ್ಕೆ ನಾವು ಜಾತಿ ಗಣತಿ ಮಾಡಿದ್ದೆವು. ಅದನ್ನು ಕುಮಾರಸ್ವಾಮಿ ಹಾಗೂ ಬಿಜೆಪಿ ಒಪ್ಪಲಿಲ್ಲ. ಇದನ್ನು ಕುಮಾರಸ್ವಾಮಿ ಬಿಜೆಪಿ ಹೇಗೆ ವಿರೋಧಿಸಿದೆ ಎಂದು ಜನರಿಗೆ ಹೇಳಬೇಕು. ಅವರು ಮೀಸಲಾತಿಗೆ ಸಾಮಾಜಿಕ ನ್ಯಾಯಕ್ಕೆ ಹೇಗೆ ವಿರುದ್ಧವಿದ್ದಾರೆ ಎಂದು ತಿಳಿಸಬೇಕು. ಮಂಡಲ್ ಕಮಿಷನ್ ವಿರೋಧಿಸಿದ್ದು ಯಾರು? ಇದೇ ಬಿಜೆಪಿಯವರು.

ಇವರಿಗೆ ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ಯಾವ ನೈತಿಕತೆ ಇದೆ. ಇಂದು ಹಿಂದುಳಿದವರು, ಮಹಿಳೆಯರು, ಅಲ್ಪಸಂಖ್ಯಾತರಿಗೆ ರಾಜಕೀಯ ಮೀಸಲಾತಿ ಕೊಟ್ಟಿದ್ದು, ಅದು ಮುಂದುವರಿಯಬೇಕು ಎಂಬ ಬದ್ಧತೆ ಇರುವುದು ಕಾಂಗ್ರೆಸ್ ಗೆ ಮಾತ್ರ.

ಸರ್ವಪಕ್ಷ ಸಭೆ ಕರೆದಿದ್ದಾಗ ಹಿಂದುಳಿದ ವರ್ಗಗಳ ಆಯೋಗದ ವರದಿಯನ್ನು ಸುಪ್ರೀಂ ಕೋರ್ಟ್ ಗೆ ನೀಡಿ ಎಂದರೆ ಅವರು ಭಕ್ತವತ್ಸಲ ಸಮಿತಿ ಮಾಡಿದರು. ಅವರು ಸಮೀಕ್ಷೆ ಮಾಡದೇ 2 ತಿಂಗಳಲ್ಲಿ ವರದಿ ಕೊಟ್ಟರು. ಒಂದು ವೇಳೆ ಇದು ಸುಪ್ರೀಂ ಕೋರ್ಟ್ ನಲ್ಲಿ ಮಾನ್ಯತೆ ಪಡೆಯದಿದ್ದರೆ ಹಿಂದುಳಿದವರಿಗೆ ಮೀಸಲಾತಿ ಇರುವುದಿಲ್ಲ. ಇದೆಲ್ಲವನ್ನು ನೀವು ಆಲೋಚಿಸಬೇಕು. ರಾಜೀವ್ ಗಾಂಧಿ ಅವರು ಕೊಟ್ಟ ಈ ಕೊಡುಗೆ ಅಪಾರವಾದುದು.

ನರೇದ್ರ ಮೋದಿ ಅವರು ಮನ್ ಕಿ ಬಾತ್ ಮಾತನಾಡುತ್ತಾರೆ. ಸಂಸತ್ತಿನಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವ ವಿಚಾರದಲ್ಲಿ ಒತ್ತಡ ಹಾಕಬೇಕು.

ರಾಜೀವ್ ಗಾಂಧಿ ಅವರ ಈ ಕೊಡುಗೆ ಸ್ಮರಿಸುವುದೇ ಅವರಿಗೆ ನಾವು ಸಲ್ಲಿಸುವ ನಮನ.ಯ ದೇವರಾಜ ಅರಸು ಅವರು 1972ರಲ್ಲಿ ಮುಖ್ಯಮಂತ್ರಿಯಾದರು. ಅವರು ಈ ಅವಕಾಶ ಬಳಸಿಕೊಂಡು ಹಿಂದುಳಿದವರಿಗೆ, ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ನೀಡಿದರು. ಆವನೂರು ಆಯೋಗ ರಚಿಸಿ 1977ರಲ್ಲಿ ಅನುಮತಿ ನೀಡಿದರು. 1951ರಲ್ಲಿ ಮೊದಲನೇ ಸಂವಿಧಾನ ತಿದ್ದುಪಡಿ ಆಗಿದ್ದು, ಹಿಂದುಳಿದ ಜಾತಿಯವರಿಗೆ ಮೀಸಲಾತಿ ನೀಡುವ ಉದ್ದೇಶದಿಂದ. 1959ರವರೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಮೀಸಲಾತಿ ಇತ್ತು. ರಾಜ್ಯದಲ್ಲಿ ಮೀಸಲಾತಿ ಸಿಕ್ಕಿದ್ದು 1977ರಲ್ಲಿ. ಹಿಂದುಳಿದವರು ಇದೆಲ್ಲವನ್ನು ತಿಳಿದುಕೊಳ್ಳಬೇಕು. 26 ವರ್ಷ ಹಿಂದುಳಿದ ವರ್ಗದವರಿಗೆ ಮೀಸಲಾತಿ ಇರಲಿಲ್ಲ. ಹೀಗಾಗಿ ಅರಸು ಅವರನ್ನು ಸಾಮಾಜಿಕ ನ್ಯಾಯದ ಹರಿಕಾರ ಎಂದು ಕರೆಯುತ್ತಾರೆ.

ಕೇವಲ ಹಿಂದುಳಿದವರಿಗೆ ಮಾತ್ರವಲ್ಲ, ಉಳುವವನೆ ಭೂಮಿಯ ಒಡೆಯ ಎಂದು ಮಾಡಿದರು. ಆದರೆ ಈಗ ಉಳ್ಳವನೇ ಭೂಮಿಯ ಒಡೆಯ ಎಂದು ಮಾಡಿದ್ದಾರೆ. ಇವರಿಗೆ ಬಡವರ ಬಗ್ಗೆ ಕಾಳಜಿ ಇದೆಯಾ? ಮಲಹೊರುವ ಪದ್ಧತಿ, ಜೀತ ಪದ್ಧತಿ ತಪ್ಪಿಸಿದ್ದು ಯಾರು? ಇದನ್ನು ಬಿಜೆಪಿಯವರು ಮಾಡಿದ್ದರಾ? ಇದರ ವಿರುದ್ಧ ಇದ್ದವರು ಬಿಜೆಪಿಯವರು. ಬದಲಾವಣೆ ಆಗಬೇಕಾದರೆ, ಸಾಮಾಜಿಕ, ಆರ್ಥಿಕ ಚಲಾವಣೆ ಆಗಬೇಕಾದರೆ, ಸಾಮಾಜಿಕ ಆರ್ಥಿಕ ಪ್ರಭುತ್ವ ಇರಬೇಕು ಎಂದು ಅಂಬೇಡ್ಕರ್ ಹೇಳಿದ್ದರು. ಇದರಲ್ಲಿ ನಂಬಿಕೆ ಇಟ್ಟುಕೊಂಡಿರುವವರು ಕಾಂಗ್ರೆಸ್ ನವರು, ಇದಕ್ಕೆ ವಿರುದ್ಧ ಇರುವವರು ಬಿಜೆಪಿಯವರು. ಹೀಗಾಗಿ ಬಡವರು, ಹಿಂದುಳಿದವರ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಯವರಿಗೆ ಇದೆಯಾ?

ಇಂದು ಪ್ರಜಾಪ್ರಭುತ್ವ ಹಾಗೂ ಸಂವಿಧಾನಕ್ಕೆ ಅಪಯಾ ಎದುರಾಗಿದೆ. ಸಂವಿಧಾನ ಉಳಿದರೆ ನಾವು ಉಳಿಯುತ್ತೇವೆ, ಉಳಿಯಲಿಲ್ಲ ಎಂದರೆ ನಾವು ಉಳಿಯುವುದಿಲ್ಲ. ಪ್ರಜಾಪ್ರಭುತ್ವ ಇದ್ದರೆ ಮಾತ್ರ ಕಟ್ಟಕಡೆಯ ವ್ಯಕ್ತಿಗೂ ಹಕ್ಕು ಗೌರವ ಸಿಗುತ್ತದೆ. ಇದಕ್ಕೆ ಬದ್ಧವಾಗಿರುವುದು ಕಾಂಗ್ರೆಸ್, ವಿರೋಧಿಸುವವರು ಬಿಜೆಪಿ.

IMG 20220822 WA0003

ಎಐಸಿಸಿ ವಕ್ತಾರ ಪವನ್ ಖೇರಾ:

ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ನಮ್ಮ ನಾಯಕರಾದ ರಾಜೀವ್ ಗಾಂಧಿ ಅವರಿಗೆ ನಮಿಸುತ್ತಿರುವ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ. ರಾಜೀವ್ ಗಾಂಧಿ ಅವರು ಕೇವಲ 5 ವರ್ಷಗಳ ಕಾಲ ದೇಶದ ಪ್ರಧಾನ ಮಂತ್ರಿಯಾದರೂ ರಾಷ್ಟ್ರ ನಿರ್ಮಾಣಕ್ಕೆ ಅವರು ಕೊಟ್ಟ ಕೊಡುಗೆ ಅನನ್ಯವಾದುದು. ರಾಜೀವ್ ಗಾಂಧಿ ಅವರು ಕೊಟ್ಟ ಕೊಡುಗೆಯನ್ನು ಅಲ್ಪವಧಿಯಲ್ಲಿ ನೀಡಲು ಯಾರಿಂದಲೂ ಸಾಧ್ಯವಿಲ್ಲ. ಅವರು ಇನ್ನಷ್ಟು ವರ್ಷಗಳ ಕಾಲ ಪ್ರಧಾನಿಯಾಗಿದ್ದರೆ ದೇಶ ಅಬೂತಪೂರ್ವ ಬದಲಾವಣೆಯನ್ನು ಕಾಣುತ್ತಿತ್ತು. ದುರಾದೃಷ್ಟವಶಾತ್ ನಾವು ಅವರನ್ನು ಕಳೆದುಕೊಂಡೆವು.

ಅವರ ಕೊಡುಗೆಯಿಂದ ಇಂದು ದೇಶದಲ್ಲಿ ಕಂಪ್ಯೂಟರ್, ಮೊಬೈಲ್, ದೂರಸಂಪರ್ಕ ಕ್ಷೇತ್ರ ದೊಡ್ಡ ಸಾದನೆ ಸಾಧಿಸಿದೆ. ರಾಜೀವ್ ಗಾಂಧಿ ಅವರಿಗೆ ಮೃತ್ಯು ಹಾರದ ರೂಪದಲ್ಲಿ ಬಂದಿತ್ತು. ಇದು ರಾಜೀವ್ ಗಾಂಧಿ ಅವರು ದೇಶದ ಮಗ ಎಂಬುದಕ್ಕೆ ಸಾಕ್ಷಿ. ಅವರ ಮಾರ್ಗದರ್ಶನದಲ್ಲಿ ನಾವು ಸಾಗಬೇಕು. ದೇಶವನ್ನು ಕಟ್ಟಬೇಕು.

ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ:

ಸ್ವರ್ಗೀಯ ರಾಜೀವ್ ಗಾಂಧಿ ಹಾಗೂ ದೇವರಾಜ ಅರಸು ಅವರನ್ನು ಇಂದು ನಾವೆಲ್ಲರೂ ಸ್ಮರಿಸುತ್ತಿದ್ದೇವೆ. ನಮ್ಮೆಲ್ಲರ ಅಚ್ಚುಮೆಚ್ಚಿನ ನಾಯಕ, ದೇಶ ಕಂಡ ಅಪರೂಪದ ರಾಜಕಾರಣಿ, ಅತ್ಯಂತ ಸ್ಪುರದ್ರೂಪಿ ನಾಯಕ, ಅತಿ ಚಿಕ್ಕ ವಯಸ್ಸಿನಲ್ಲಿ ದೇಶದ ಪ್ರಧಾನಿಯಾಗಿ ರಾಜೀವ್ ಗಾಂಧಇ ಅವರ ಕೊಟ್ಟ ಕೊಡುಗೆ ಯಾರೂ ಮರೆಯಲು ಸಾಧ್ಯವಿಲ್ಲ.

ಇಂದು ಜಗತ್ತಿನಲ್ಲಿ ನಾವು ತಲೆ ಎತ್ತಿ ಮೆರೆಯುತ್ತಿದ್ದೇವೆ, ಆಧುನಿಕ ಭಾರತ ನಿರ್ಮಾಣ ಮಾಡಿದ ಶ್ರೇಯ ರಾಜೀವ್ ಗಾಂಧಿ ಅವರಿಗೆ ಸಲ್ಲುತ್ತದೆ. ನಾವು ಇಂದು ಬಳಸುತ್ತಿರುವ ಮೊಬೈಲ್ ಗೆ ರಾಜೀವ್ ಗಾಂಧಿ ಅವರ ದೂರಸಂಪರ್ಕ ಕ್ಷೇತ್ರದ ಕ್ರಾಂತಿ ಕಾರಣ. ಇಂದು 116 ಕೋಟಿ ಜನರ ಬಳಿ ಮೊಬೈಲ್ ಇದೆ ಎಂದಾದರೆ ಅದಕ್ಕೆ ರಾಜೀವ್ ಗಾಂಧಿ ಅವರು ಕಾರಣ.

ಇಂದು ಜಗತ್ತು ನಮ್ಮ ಅಂಗೈಯಲ್ಲಿ ಸಿಗುವಂತೆ ಆಗಿದೆ. ರಾಜಕೀಯ ವಿರೋಧಿಗಳು ಕಾಂಗ್ರೆಸ್ ಏನು ಮಾಡಿದೆ ಎಂದು ಕೇಳುತ್ತಾರೆ. ರಾಜೀವ್ ಗಾಂಧಿ ಅವರ ಕಾಲದಲ್ಲಿ ದೇಶವನ್ನು 21ನೇ ಶತಮಾನಕ್ಕೆ ಕರೆತರಲು ಹಳ್ಳಿ ಹಳ್ಳಿಯಲ್ಲಿ ಟೆಲಿಫೋನ್ ಸಂಪರ್ಕ ಕೊಟ್ಟರು. ಈ ಕೀರ್ತಿ ಸಲ್ಲುವುದು ರಾಜೀವ್ ಗಾಂಧಿ ಅವರಿಗೆ. ಇನ್ನು ದೃಶ್ಯ ಮಾಧ್ಯಮ, ಸ್ಯಾಟಲೈಟ್ ಟೆಲಿವಿಷನ್ ಸೇರಿದಂತೆ ಆಧುನಿಕ ಯುಗದಲ್ಲಿ, ವಿಜ್ಞಾನ ತಂತ್ರಜ್ಞಾನದಲ್ಲಿ ಸಾಧನೆ ಮಾಡಿದ್ದು ರಾಜೀವ್ ಗಾಂಧಿ ಹಾಗೂ ಕಾಂಗ್ರೆಸ್.

ಯುವ ಶಕ್ತಿ ಅಣುಶಕ್ತಿಯಂತೆ ಪ್ರಬಲ ಶಕ್ತಿ. ಅದರ ಸದ್ಬಳಕೆ ಆಗಬೇಕು ಎಂದು ರಾಜೀವ್ ಗಾಂಧಿ ಕನಸು ಕಟ್ಟಿದರು. ಇನ್ನು ಮಹಾತ್ಮ ಗಾಂಧಿ ಅವರ ಕನಸಿನಂತೆ ಗ್ರಾಮೀಣ ಅಭಿವೃದ್ಧಿಗೆ ಆದ್ಯತೆ ನೀಡಿದರು. ಪಂಚಾಯತ್ ರಾಜ್ ವ್ಯವಸ್ಥೆಗೆ ಸಂವಿಧಾನಿಕ ತಿದ್ದುಪಡಿ ತಂದು ಸ್ಥಳೀಯರಿಗೆ ಅಧಿಕಾರ ಕೊಟ್ಟರು.

ರಾಜೀವ್ ಗಾಂಧಿ ಅವರ ವಿದೇಶಾಂಗ ನೀತಿ ಮೂಲಕ ಎಳ್ಲ ರಾಷ್ಟ್ರಗಳ ಜತೆಗೆ ಉತ್ತಮ ಸಂಬಂಧ ಸಾಧಿಸಿದರು. ನಂತರ ದೇಶಕ್ಕಾಗಿ ಹುತಾತ್ಮರಾದರು. ಇಂತಹವರ ವಿರುದ್ಧ ವಿರೋಧಿಗಳು ಸುಳ್ಳಿನ ಮೂಲಕ ಅಪಪ್ರಚಾರ ಮಾಡುತ್ತಿದ್ದಾರೆ.

ಇನ್ನು ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರು ಸಾಮಾಜಿಕ ನ್ಯಾಯದ ಹರಿಕಾರರು. ಅವರು ಮುಖ್ಯಮಂತ್ರಿಯಾಗಿ ಕ್ರಾಂತಿಕಾರಕ ಭೂಸುಧಾರಣಾ ಕಾಯ್ದೆ, ಮಲ ಹೋರುವ ಪದ್ಧತಿ ನಿಷೇಧ ಕಾಯ್ದೆ, ಎಲ್ಲ ಭಾಷೆ, ಧರ್ಮದವರಿಗೆ ಸಾಮಾಜಿಕ ಕಾರ್ಯ, ಬಡತನ ನಿರ್ಮೂಲನೆಗೆ ಇಂದಿರಾ ಗಾಂಧಿ ಅವರ ಜತೆ ಜೊತೆ 20 ವರ್ಷಗಳ ಕಾರ್ಯಕ್ರಮ ನೀಡಿದರು. ಇಂದು ರಾಜ್ಯ ಇಷ್ಟು ಅಭಿವೃದ್ಧಿ ಆಗಲು ದೇವರಾಜ ಅರಸು ಅವರು ಕಾರಣ. ಅವರು ಬೆಳೆಸಿದ ಅನೇಕ ನಾಯಕರು ದೊಡ್ಡ ಹುದ್ದೆ ಅಲಂಕರಿಸಿದ್ದಾರೆ. ಇಂತಹ ನಾಯಕರ ಜಯಂತಿಯನ್ನು ನಾವು ಇಂದು ಆಚರಿಸುತ್ತಿದ್ದು. ಅವರ ಹಾದಿ, ಮಾರ್ಗದರ್ಶನದಲ್ಲಿ ನಾವು ನಡೆಯಬೇಕು.

ಇಂದು ಆರ್ಥಿಕತೆ ಕುಸಿದಿದೆ, ನಿರುದ್ಯೋಗ ಸಮಸ್ಯೆ, ದ್ವೇಷ ರಾಜಕಾರಣ, ರೈತರು ಕಷ್ಟದಲ್ಲಿದ್ದಾರೆ, ಅನೇಕ ಅಯಾಯ ಆಗುತ್ತಿದ್ದು ಒಡೆದು ಆಳುವ ನೀತಿ ಅನುಸರಿಸಲಾಗುತ್ತಿದ್ದು, ಧರ್ಮ ಸಂಘರ್ಷ ಆಗುತ್ತಿದೆ. ಸಿದ್ದರಾಮಯ್ಯ ಅವರು ಪ್ರವಾಸದ ಸಮಯದಲ್ಲಿ ಅವರ ಧ್ವನಿ ಹತ್ತಿಕ್ಕುವ ಪ್ರಯತ್ನ ಮಾಡಿದ್ದಾರೆ. ಇದರ ವಿರುದ್ಧ ನಾವು ಹೋರಾಟ ಮಾಡಿ ನಮ್ಮ ನಾಯಕರ ಆದರ್ಶ ಕಾಪಾಡೋಣ.

.