IMG 20221220 WA0020

ವಿಧಾನ ಪರಿಷತ್ತಿನ ಸಭಾಪತಿ ಆಯ್ಕೆಗಾಗಿ ಬಸವರಾಜ ಹೊರಟ್ಟಿ ನಾಮಪತ್ರ ಸಲ್ಲಿಕೆ…!

POLATICAL STATE

ವಿಧಾನ ಪರಿಷತ್ತಿನ ಸಭಾಪತಿ ಆಯ್ಕೆಗಾಗಿ ಬಸವರಾಜ ಹೊರಟ್ಟಿ ನಾಮಪತ್ರ ಸಲ್ಲಿಕೆ

ಬೆಂಗಳೂರು / ಬೆಳಗಾವಿ ಸುವರ್ಣಸೌಧ, ಡಿ. 20 (ಕರ್ನಾಟಕ ವಾರ್ತೆ) :

ವಿಧಾನ ಪರಿಷತ್ತಿನ  ಸಭಾಪತಿ ಸ್ಥಾನಕ್ಕೆ ಬೆಳಗಾವಿಯ ಸುವರ್ಣ ಸೌಧದಲ್ಲಿ ಬುಧವಾರ ನಡೆಯಲಿರುವ ಬಿ.ಜೆ.ಪಿ.ಅಭ್ಯರ್ಥಿಯಾಗಿ ವಿಧಾನಪರಿಷತ್ತಿನ ನಿಕಟಪೂರ್ವ ಸಭಾಪತಿಗಳು ಹಾಗೂ ಮೇಲ್ಮನೆಯ ಹಿರಿಯ ಸದಸ್ಯರಾದ ಬಸವರಾಜ ಹೊರಟ್ಟಿಯವರು ಇಂದು ನಾಮಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಕಾನೂನು ಮತ್ತು ಸಂಸದೀಯ ಸಚಿವರಾದ ಜೆ.ಸಿ. ಮಾಧುಸ್ವಾಮಿ, ಕಂದಾಯ ಸಚಿವರಾದ ಆರ್.ಅಶೋಕ, ಬೃಹತ್ ನೀರಾವರಿ ಸಚಿವರಾದ ಗೋವಿಂದ ಕಾರಜೋಳ, ಮೇಲ್ಮನೆ ಸದಸ್ಯರಾದ ಆಯನೂರು ಮಂಜುನಾಥ, ನಾರಾಯಣಸ್ವಾಮಿ, ಎಸ್.ವ್ಹಿ.ಸಂಕನೂರ, ಪ್ರಾಣೇಶ, ಹನಮಂತ ನಿರಾಣಿ, ಸೇರಿದಂತೆ ವಿಧಾನಪರಿಷತ್ತಿನ ಸದಸ್ಯರು ಉಪಸ್ಥಿತರಿದ್ದರು.