EfDm9kkUcAIUQul

ಕೋವಿಡ್-19 ಬಂದವರನ್ನು ಕಳಂಕಿತರಂತೆ ನೋಡಬೇಡಿ…!

STATE Genaral

ಕೋವಿಡ್-19 ಬಂದವರನ್ನು ಕಳಂಕಿತರಂತೆ ನೋಡಬೇಡಿ- ಸಚಿವ ಡಾ.ಸುಧಾಕರ್

ಬೆಂಗಳೂರು, ಆಗಸ್ಟ್ 10 (ಕರ್ನಾಟಕ ವಾರ್ತೆ): ಕೋವಿಡ್-19 ಸೊಂಕಿತರನ್ನು ಕಳಂಕಿತರಂತೆ ನೋಡುತ್ತಿರುವುದು ನಾಗರೀಕ ಸಮಾಜದ ದುರಾದೃಷ್ಟವಾಗಿದೆ, ಅದೊಂದು ಜಾಗತಿಕವಾಗಿ ಕಾಡುತ್ತಿರುವ ಸಾಮನ್ಯಾ ಕಾಯಿಲೆಯಾಗಿದ್ದು, ಯಾರಿಗೇ ಬೇಕಾದರು ಬರಹುದು, ದಯವಿಟ್ಟು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾದವರನ್ನು ಈ ಸಮಾಜ ಗೌರವದಿಂದ ಕಾಣಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅವರು ಹೇಳಿದರು.

ಯೋಜನಾ ಮತ್ತು ಸಾಂಖ್ಯಿಕ ಇಲಾಖೆ ಆನ್-ಲೈನ್ ಮುಖಾಂತರ ಇಂದು ಹಮ್ಮಿಕೊಂಡಿದ್ದ “ಕೋವಿಡ್ ಕಳಂಕ: ಚಿಂತನಾ-ಮಂಥನಾ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾನಾಡಿದ ಅವರು ಸೋಂಕಿತರಿಗೆ ದೈರ್ಯ ತುಂಬುವ ಕೆಲಸ ಪ್ರತಿಯೊಬ್ಬರಿಂದ ಆಗಬೇಕು, ಗುಣಮುಖರಾದವರನ್ನು ಗೌರವದಿಂದ ಕಾಣಬೇಕು, ಅದೊಂದು ಕಳಂಕ ಎಂಬಂತೆ ಯಾರು ಸಹ ನಡೆದುಕೊಳ್ಳಬಾರದು, ಈ ಕಳಂಕವನ್ನು ಹೋಗಲಾಡಿಸುವುದರಲ್ಲಿ ಸಮಾಜದ ಪಾತ್ರ ಅತಿ ಮುಖ್ಯ ಎಂದು ಅಭಿಪ್ರಾಯಪಟ್ಟರು.

ಜಯದೇವ ಹೃದ್ರೋಗ ಆಸ್ಪತ್ರೆಯ ಹಿರಿಯ ವೈದ್ಯ ಡಾ.ಮಂಜುನಾಥ್ ಅವರು ಮಾತಾನಾಡಿ ಈ ರೋಗದಿಂದ ಸತ್ತವರಿಗಿಂತ, ಈ ರೋಗದ ಭಯದಿಂದ ಸತ್ತವರು ಹೆಚ್ಚಾಗಿರುವುದು ಈ ಸಮಾಜದ ಮನಸ್ಥಿತಿಯನ್ನು ತೋರಿಸುತ್ತದೆ, ಇದೊಂದು ಸಾಮಾನ್ಯವಾಗಿ ಬಂದು ಹೀಗುವ ಕಾಯಿಲೆಯಾಗಿದ್ದು ಯಾರು ಸಹ ಭಯಪಡಬಾರದು. ಜನರಲ್ಲಿ ದೈರ್ಯ ತುಂಬುವ ಸಕರಾತ್ಮಕ ಸುದ್ದಿಗಳನ್ನು ಪ್ರಸಾರ ಮಾಡುವ ದೊಡ್ಡ ಜವಬ್ಧಾರಿ ಮಾಧ್ಯಮ ಗಳ ಮೇಲಿದೆ ಎಂದು ಹೇಳಿದರು.

ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಕೋವಿಡ್ ಕಳಂಕವನ್ನು ಹೋಗಲಾಡಿಸುವುದು ಹೇಗೆ ಎನ್ನುವುದಾಗಿದ್ದು, ರೋಗವನ್ನಾಗಲಿ ಅಥವಾ ಸೋಂಕಿತರನ್ನಾಗಲಿ ವೈಭವೀಕರಿಸುವ ಅಗತ್ಯವಿಲ್ಲ. ಗುಣಮುಖರಾದಾಗ ಅವರು ಎಲ್ಲಾರಂತೆಯೇ ಆರೋಗ್ಯರು ಎಂಬುದನ್ನು ಮರೆತು ಮಾನವೀಯತೆ ಕಳೆದುಕೊಳ್ಳಬಾರದು ಎಂದರು.

b6cb3d10 ccc6 4242 847d c979fa6f1f98

ಲೋಕಸಭಾ ಸದಸ್ಯರಾದ ಶ್ರೀಮತಿ ಸುಮಲತ ಅಂಬರೀಷ್ ಅವರು ಮಾತಾನಾಡಿ ತಾವು ಸಹ ಈ ಸೋಕಿಗೆ ತುತ್ತಾದ ಅನುಭವಗಳನ್ನು ಹಂಚಿಕೊಂಡು ಇದೊಂದು ಸಾಮಾನ್ಯ ಕಾಯಿಲೆಯನ್ನು ಪೆಡಂಭೂತವಾಗಿ ಚಿತ್ರಿಸಲಾಗುತ್ತಿದೆ, ಇದರಿಂದ ವಾಸಿಯಾದ ಅನೇಕ ವಿಐಪಿಗಳನ್ನು ಹಾಗೂ ಸಾಮಾನ್ಯ ಜನರನ್ನು ಸಮಾಜ ಕಾಣುವ ದೃಷ್ಟಿಕೋನ ಬದಲಾಗಬೇಕಿದೆ ಎಂದು ಹೇಳಿದರು.

ಈ ಆನ್-ಲೈನ್ ಕಾರ್ಯಕ್ರಮದಲ್ಲಿ ಸಿನಿಮಾ ತಾರೆಯರಾದ ಶ್ರೀಮತಿ ತಾರಾ, ರಶ್ಮಿಕಾ, ಪ್ರಕೃತಿ ಸೇರಿದಂತೆ ಮಾಧ್ಯಮ ಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆಗಳ ಮುಖ್ಯಸ್ಥರು ಭಾಗವಹಿಸಿದ್ದರು.

ಕೋವಿಡ್ ಕಳಂಕವನ್ನು ಸ್ವತಃ ಅನುಭವಿಸಿರುವ ಹಾಗೂ ಗುಣವಾಗಿರುವ ಭಗವಾನ್ ಹಾಗೂ ವೆಂಕಟರಾಮ್ ಅವರು ಸೇರಿದಂತೆ ಇತರರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದು ವಿಶೇಷವಾಗಿತ್ತು.

ಇಂದಿನ ಕೋವಿಡ್ ಹಿನ್ನಲೆಯಲ್ಲಿ ಸಮಾಜದ ದೃಷ್ಟಿಕೊನ ಹೇಗಿದೆ ? ಅದೊಂದು ಕಳಂಕವಲ್ಲ ಮತ್ತು ಸಮಾಜದ ಈ ದೃಷ್ಟಿಕೋನವನ್ನು ಬದಲಾಯಿಸುವುದು ಹೇಗೆ ಎಂಬುದರ ಬಗ್ಗೆ ಅನೇಕರು ತಮ್ಮ ಸಲಹೆ-ಸೂಚನೆಗಳನ್ನು ನೀಡಿದರು.