IMG 20230729 WA0023

ಪಾವಗಡ: ಭಾಗ್ಯಲಕ್ಷ್ಮಿ ರಸಗೊಬ್ಬರ ಅಂಗಡಿಗೆ ನೋಟೀಸು….!

DISTRICT NEWS ತುಮಕೂರು

ಭಾಗ್ಯಲಕ್ಷ್ಮಿ ರಸಗೊಬ್ಬರ ಅಂಗಡಿಗೆ ನೋಟೀಸು….!

ವೈ.ಎನ್.ಹೊಸಕೋಟೆ : ಗ್ರಾಮದ ಭಾಗ್ಯಲಕ್ಷ್ಮಿ ಏಜೆನ್ಸೀಸ್ ರಸಗೊಬ್ಬರ ಅಂಗಡಿಗೆ ಜಿಲ್ಲಾ ಕೀಟನಾಶಕ ಪರಿವೀಕ್ಷಕರು ಶುಕ್ರವಾರ ನೋಟಿಸು ನೀಡಿದ್ದಾರೆ.

ಗ್ರಾಮದ ಈ ರಸಗೊಬ್ಬರ ಅಂಗಡಿಯಲ್ಲಿ ಮಾಲೀಕರು ರೈತರಿಗೆ ನಿಶೇದಿತ ಕೀಟನಾಶಕವಾದ ಡಿಕ್ಲೋರವಸ್-76% ಇಸಿ (ನೋವನ್) ಯನ್ನು ಮಾರಾಟ ಮಾಡುತ್ತಿರುವುದು ಕಂಡುಬಂದಿದೆ.
ಇಲ್ಲಿಯವರೆಗೆ ಸುಮಾರು 84  ಸಾವಿರ ರೂ ಮೌಲ್ಯದ ನಿಶೇದಿತ ಕ್ರಿಮಿನಾಶಕವನ್ನು ಮಾರಾಟ ಮಾಡಿದ್ದಾರೆ.
ಅಂಗಡಿ ಪರಿಶೀಲನೆಯ ವೇಳೆ 13 ಸಾವಿರ ರೂ ಮೌಲ್ಯದ 9.5ಲೀಟರ್ ನಿಶೇದಿತ ಕ್ರಿಮಿನಾಶಕ ಪತ್ತೆಯಾಗಿದ್ದು, ವಶಪಡಿಸಿಕೊಳ್ಳಗಿದೆ.

ಅಂಗಡಿಯಲ್ಲಿ ಸರಿಯಾದ ದಾಸ್ತಾನು ಮತ್ತು ಧರಪಟ್ಟಿ ಇಲ್ಲ. ವಹಿವಾಟಿನ ದಾಖಲೆಗಳು ಲಭ್ಯವಿಲ್ಲ. ಕೃಷಿಪರಿಕರಗಳ ಸೂಕ್ತ ನಿರ್ವಹಣೆ ಇಲ್ಲ. ಈ ಬಗ್ಗೆ ಕಾರಣ ಕೇಳಿ ನೋಟೀಸು ನೀಡಲಾಗಿದೆ. ಸೂಕ್ತ ಉತ್ತರ ದೊರೆಯದಿದ್ದಲ್ಲಿ ಕೀಟನಾಶಕ ಕಾಯ್ದೆ 1968 ರ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಸಹಾಯಕ ಕೃಷಿ ನಿರ್ದೇಶಕ ಪುಟ್ಟರಂಗಪ್ಪ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ತಾಲ್ಲೂಕು ಕೃಷಿ ಅಧಿಕಾರಿ ಷಂಶದ್ ಉನ್ನೀಸಾ, ಸ್ಥಳೀಯ ರೈತ ಸಂಪರ್ಕ ಕೇಂದ್ರದ ಯಲ್ಲಪ್ಪ, ಚನ್ನಕೇಶವ ಇದ್ದರು.

ವರದಿ:- ನಂದೀಶ್ ನಾಯ್ಕ