IMG 20210107 WA0010

ಪಾವಗಡ: ಬಡ ಮಕ್ಕಳಿಗೆ ಸಿಹಿ ತಿನಿಸು, ಪಾದರಕ್ಷೆ ವಿತರಣೆ….!

DISTRICT NEWS ತುಮಕೂರು

ಪಾವಗಡ : ಮಾನಂ ಶಶಿಕಿರಣ್ ರ ಹೆಲ್ಪ್ ಸೊಸೈಟಿ ನೇತೃತ್ವದಲ್ಲಿ ಬಡವರಿಗೆ ಆಹಾರ, ಆರ್ಥಿಕ ಸಹಕಾರ ಹೀಗೆ ಸಾಕಷ್ಟು ಸೇವಾ ಕಾರ್ಯಗಳನ್ನು ಮಾಡುತ್ತ ಜನಮೆಚ್ಚಿಗೆ ಗಳಿಸುತ್ತಿದೆ. ಅದರಂತೆ ಪಾವಗಡ ಪಟ್ಟಣದ ಆಪ್ ಬಂಡೆಯಲ್ಲಿ ಬಡ ಮಕ್ಕಳಿಗೆ ಸಿಹಿ ತಿನಿಸು, ಪಾದರಕ್ಷೆಗಳನ್ನು ವಿತರಿಸುವ ಸೇವಾ ಕಾರ್ಯ ಮಾಡಿದರು.

ನಂತರ ಪ್ರತಿಕ್ರಿಯಿಸಿದ ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶ ಶಿಕಿರಣ್ ರವರು ಕೊರೊನಾ ಮಕ್ಕಳ ಶಿಕ್ಷಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ ಶೈಕ್ಷಣಿಕ ವ್ಯವಸ್ಥೆಗೆ ಕುತ್ತು ತಂದಿತು.ಆಗಾಗಿ ಮಕ್ಕಳು ವಿದ್ಯಾಭ್ಯಾಸದ ಕಡೆ ಗಮನಹರಿಸಿ ವಿದ್ಯಾವಂತರಾಗಿ ಬಡತನ ಹೋಗಲಾಡಿಸಬೇಕಿದೆ ಎಂದು ಸಲಹೆ ನೀಡಿದರು.
ಇದೇ ವೇಳೆ ಮಾನವ ಹಕ್ಕಿಗಳ ಪರಿಷತ್ ಮಂಜುನಾಥ್ ಶಶಿಕಲಾ, ಹೆಲ್ಪ್ ಸೊಸೈಟಿಯ ಗೌತಮ್, ಸಾಗರ್, ಅನಿಲ್ ಕುಮಾರ್ ಇದ್ದರು.

ವರದಿ: ನವೀನ್ ಕಿಲಾರ್ಲಹಳ್ಳಿ