IMG 20230926 WA0005

ಪಾವಗಡ: ಕಾವೇರಿ ಹೋರಾಟಕ್ಕೆ ಬೆಂಬಲ ಸೂಚಿಸಿದ ತಾಲೂಕು ವಕೀಲ ಸಂಘ….!

DISTRICT NEWS ತುಮಕೂರು

ಕಾವೇರಿ ಹೋರಾಟಕ್ಕೆ ಬೆಂಬಲ ಸೂಚಿಸಿದ ತಾಲೂಕು ವಕೀಲ ಸಂಘ.

ಪಾವಗಡ : ಮಳೆಯ ಅಭಾವದಿಂದಾಗಿ ಕಾವೇರಿ ನೀರು ತಮಿಳುನಾಡಿಗೆ ಹರಿಸಬಾರದೆಂದು ಅನೇಕ ಸಂಘ ಸಂಸ್ಥೆಗಳು ಮಂಗಳವಾರ ರಾಜ್ಯದಾದ್ಯಂತ ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆ.
ತಾಲ್ಲೂಕಿನ ವಕೀಲರ ಸಂಘ ಕೋರ್ಟಿನ ಕಾರ್ಯ ಕಲಾಪಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸುವುದರ ಮೂಲಕ ಕಾವೇರಿ ಹೋರಾಟಕ್ಕೆ ಬೆಂಬಲ ಸೂಚಿಸಿದರು.

ನ್ಯಾಯಾಲಯದ ಮುಂಭಾಗ ಜಮಾವಣೆಗೊಂಡ ವಕೀಲರು, ಕಾವೇರಿ ಮಾತೆಗೆ ಜೈಕಾರ ಕೂಗುವ ಮೂಲಕ ತಮ್ಮ ಪ್ರತಿರೋಧ ವ್ಯಕ್ತಪಡಿಸಿದರು.

ತಾಲ್ಲೂಕಿನ ನ್ಯಾಯಾಲಯದಿಂದ ತಹಶೀಲ್ದಾರ್ ಕಚೇರಿ ವರೆಗೂ ಪ್ರತಿಭಟನೆ ಮಾಡಿ ಗ್ರೇಡ್ 2 ತಹಶೀಲ್ದಾರ್ ಎನ್ ಮೂರ್ತಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಶೇಷ ನಂದನ್, ಕಾರ್ಯದರ್ಶಿ ಹೆಚ್ ಎ ಪ್ರಭಾಕರ ರೆಡ್ಡಿ , ಖಜಾಂಶಿ ಶಿವಕೇಶವ ರೆಡ್ಡಿ, ಉಪಾಧ್ಯಕ್ಷ ಹನುಮಂತ ರಾಯಪ್ಪ , ವಕೀಲರಾದ. ಕೆ.ಆರ್ ಜಯಸಿಂಹ, ಶಶಿಕಿರಣ್, ಮಂಜುನಾಥ್ ಚನ್ನ ಕೃಷ್ಣಾರೆಡ್ಡಿ, ತಿರುಮಲೇಶ್, ಸುಧಾಕರ್ ಅಂಬರೀಶ್ ,ಮಾರುತಿ ,ಸಿರಾಜ್, ರಘುನಂದನ್, ವೆಂಕಟಸ್ವಾಮಿ. ಸಾಮಾಜಿಕ ಹೋರಾಟಗಾರ ನಾಗಭೂಷಣ ರೆಡ್ಡಿ ಇನ್ನೂ ಮುಂತಾದವರು ಹಾಜರಿದ್ದರು.

ವರದಿ. ಶ್ರೀನಿವಾಸಲು.ಎ