IMG 20231225 WA0010

ಪಾವಗಡ: ಮರಳು ದಂಧೆ ಗೆ ಯುವಕನ ಬಲಿ:

DISTRICT NEWS ತುಮಕೂರು
  • ಕಣ್ಣು ಮುಚ್ಚಿ ಕುಳಿತ ಪೋಲೀಸರು....
  • ಅವ್ಯಾಹತವಾಗಿ ನಡೆಯುತ್ತಿರುವ ಮರಳು ದಂಧೆ….
  • ಮರಳು ಟ್ರಾಕ್ಟರ್‍ಗೆ ಯುವಕ ಬಲಿ
  • ಟ್ರಾಕ್ಟರ್ ಚಾಲಕನನ್ನು ವಶಕ್ಕೆ ಪಡೆಯದ ಪೋಲೀಸರು


ವೈ.ಎನ್.ಹೊಸಕೋಟೆ : ಮರಳು ತುಂಬಿದ್ದ ಟ್ರಾಕ್ಟರ್ ಮತ್ತು ದ್ವಿಚಕ್ರ ವಾಹನ ನಡುವೆ ಅಪಘಾತ ಸಂಭವಿಸಿ ರುದ್ರೇಶ್(26) ಎಂಬ ಯುವಕ ಮೃತಪಟ್ಟ ಘಟನೆ ವೈ ಎನ್ ಹೊಸಕೋಟೆ ಗ್ರಾಮದ ದ್ವಜಸ್ತಂಭ ರಸ್ತೆಯಲ್ಲಿ ಭಾನುವಾರ ರಾತ್ರಿ ನಡೆದಿದೆ..

IMG 20231225 154355

ಅಪಘಾತ ಸಂಬಂಧಿಸಿದ ಸ್ಥಳ
ರುದ್ರೆಶ್ ತನ್ನ ಮನೆಗೆ ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದ ವೇಳೆ ಅದೇ ರಸ್ತೆಯಲ್ಲಿ ಬಂದ ಮರಳು ತುಂಬಿದ ಟ್ರಾಕ್ಟರ್ ಬರುತ್ತಿದ್ದು, ಎರಡು ವಾಹನ ನಡುವೆ ಅಪಘಾತ ಸಂಭವಿಸಿದೆ. ಕೂಡಲೆ ಗಾಯಾಳು ರುದ್ರೇಶನನ್ನು ಸ್ಥಳೀಯರು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ತಾಲ್ಲೂಕು ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ.

IMG 20231225 WA0022

ಪೋಲೀಸ್ ಠಾಣೆಯ ಎದರು ಮರಳು ಸಾಗಣೆ

ಈ ಸಂಬಂಧ ವೈ.ಎನ್.ಹೊಸಕೋಟೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಆದರೆ ಅಪಘಾತ ಕ್ಕೆ ಕಾರಣವಾದ ಟ್ರಾಕ್ಟರ್ ಮತ್ತು ಚಾಲಕನ್ನು ವಶಕ್ಕೆ ಪಡೆಯುವ ಗೋಜಿಗೆ ಪೋಲೀಸರು ಹೋಗದೆ‌ ಇರುವುದು ಹಲವು‌ ಅನುಮಾನಗಳಿಗೆ ಕಾರಣವಾಗಿದೆ.