IMG 20200819 WA0128

ರಾಜ್ಯದಲ್ಲಿ 2 ಸಾವಿರ ಕೋಟಿ ಹೂಡಿಕೆಗೆ ಯು ಫ್ಲೇಕ್ಸ್‌ ಕಂಪನಿಯ ಒಲವು….

STATE

*ರಾಜ್ಯದಲ್ಲಿ 2 ಸಾವಿರ ಕೋಟಿ ಹೂಡಿಕೆಗೆ ಯು ಫ್ಲೇಕ್ಸ್‌ ಕಂಪನಿಯ ಒಲವು: ಸಚಿವ ಜಗದೀಶ್‌ ಶೆಟ್ಟರ್‌*
ಬೆೆಂಗಳೂರು:ವಿಧಾನಸೌಧದಲ್ಲಿಂದು ಬೃಹತ್‌ ಮತ್ತು ಕೈಗಾರಿಕಾ ಸಚಿವ ಶ್ರೀ ಜಗದೀಶ ಶೆಟ್ಟರ್‌ ಭೇಟಿಯಾಗಿ ಚರ್ಚಿಸಿದ ಕಂಪನಿಯ ಪ್ರತಿನಿಧಿಗಳು*
-*ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಶ್ರೀ ಗೌರವ್‌ ಗುಪ್ತಾ ಹಾಗೂ ಕೈಗಾರಿಕಾಭಿವೃದ್ದಿ ಆಯುಕ್ತೆ ಶ್ರೀಮತಿ ಗುಂಜನ್‌ ಕೃಷ್ಣ ಉಪಸ್ಥಿತಿ*

*ಬೆಂಗಳೂರು ಆಗಸ್ಟ್‌ 19*: ದೇಶದ ಅತಿದೊಡ್ಡ ಫ್ಲೆಕ್ಸಿಬಲ್‌ ಪ್ಯಾಕೇಜಿಂಗ್‌ ಮೆಟೀರಿಯಲ್‌ ಅಂಡ್‌ ಫಿಲ್ಮ್ಸ್‌ನ ಉತ್ಪಾದಕರಾದ ಯು ಫ್ಲೆಕ್ಸ್‌ ಗ್ರೂಪ್‌ ರಾಜ್ಯದಲ್ಲಿ 2 ಹಂತಗಳಲ್ಲಿ 2 ಸಾವಿರ ಕೋಟಿ ರೂಪಾಯಿಗಳ ಹೂಡಿಕೆಯನ್ನು ಮಾಡಲು ಒಲವು ತೋರಿಸಿದೆ. ಇದರಿಂದಾಗಿ 2 ಸಾವಿರ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು *ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಶ್ರೀ ಜಗದೀಶ್‌ ಶೆಟ್ಟರ್*‌ ತಿಳಿಸಿದರು.IMG 20200819 WA0129

*ವಿಧಾನಸೌಧದಲ್ಲಿಂದು ಸಚಿವರನ್ನು ಭೇಟಿಯಾದ ಯು ಫ್ಲೆಕ್ಸ್‌ ಗ್ರೂಪ್‌ ನ ಸಂಸ್ಥಾಪಕ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕ ಅಶೋಕ್‌ ಚತುರ್ವೇದಿ ಭೇಟಿಯಾಗಿ ಚರ್ಚೆ ನಡೆಸಿದರು*. ಬಯೋಡಿಗ್ರೇಡಬಲ್‌ ಪ್ಯಾಸ್ಟಿಕ್‌ ಉತ್ಪನ್ನಗಳನ್ನು ತಯಾರಿಸುವ ಕಂಪನಿಯ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು. ಅಲ್ಲದೆ, ರಾಜ್ಯದಲ್ಲಿ ಘಟಕವನ್ನು ಸ್ಥಾಪಿಸಲು ಅಗತ್ಯವಿರುವ ಜಾಗ ಹಾಗೂ ಇನ್ನಿತರೆ ಬೇಡಿಕೆಗಳ ಬಗ್ಗೆ ಕಂಪನಿಯ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿದರು.

*ನಂತರ ಮಾತನಾಡಿದ ಸಚಿವರು*, ರಾಜ್ಯದಲ್ಲಿ ಹೊಸದಾಗಿ ಜಾರಿಯಾಗಿರುವ ಕೈಗಾರಿಕಾ ನೀತಿ 2020-25 ರ ಪ್ರಮುಖ ಅಂಶಗಳ ಬಗ್ಗೆ ಮಾಹಿತಿಯನ್ನು ಕಂಪನಿಯ ಪ್ರತಿನಿಧಿಗಳಿಗೆ ನೀಡಿದರು. ಇದೇ ವೇಳೆ ಕರ್ನಾಟಕ ರಾಜ್ಯ ಕೈಗಾರಿಕಾ ಸೌಲಭ್ಯ ಅಧಿನಿಯಮದಲ್ಲಿನ ತಿದ್ದುಪಡಿಯಿಂದಾಗಿ ರಾಜ್ಯದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವುದು ಬಹಳ ಸುಲಭವಾಗಿದೆ. ಏಕಗವಾಕ್ಷಿಯ ಮೂಲಕ ಅನುಮತಿಯನ್ನು ಪಡೆದುಕೊಂಡು ಕೈಗಾರಿಕೆಯನ್ನು ಸ್ಥಾಪಿಸುವ ಕಾರ್ಯಕ್ಕೆ ಚಾಲನೆ ನೀಡಬಹುದು ಎಂದು ಹೇಳಿದರು.

ಕೈಗಾರಿಕಾ ಘಟಕದ ಸ್ಥಾಪನೆಗೆ ಒಟ್ಟಾರೆಯಾಗಿ 55 ಎಕರೆ ಭೂಮಿಯ ಅವಶ್ಯಕತೆ ಇದೆ. ಇನ್ನು 4 ಏಕರೆಗಳನ್ನು ಹೆಚ್ಚಾಗಿ ಮಂಜೂರು ಮಾಡಿದಲ್ಲಿ ಕಾರ್ಮಿಕರಿಗೆ ಬೇಕಾದ ವಸತಿಯ ವ್ಯವಸ್ಥೆ ಯನ್ನು ಮಾಡಲಿದ್ದೇವೆ. ಶೂನ್ಯ ತ್ಯಾಜ್ಯ ಹಾಗೂ ಪರಿಸರ ಸ್ನೇಹೀ ಉತ್ಪನ್ನಗಳನ್ನು ತಯಾರಿಸುವ ಘಟಕವನ್ನು ಇಲ್ಲಿ ನಿರ್ಮಿಸಲಿದ್ದೇವೆ. ಈ ಘಟಕದ ಮೂಲಕ ದೇಶದ ಎಲ್ಲಾ ಭಾಗಗಳಿಗೂ ಉತ್ಪನ್ನಗಳನ್ನು ತಲುಪಿಸಲಿದ್ದೇವೆ ಎಂದು ಯು ಫ್ಲೇಕ್ಸ್‌ ಗ್ರೂಪ್‌ ನ ಸಂಸ್ಥಾಪಕ ಅಧ್ಯಕ್ಷರು ತಿಳಿಸಿದರು.

ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು ಘಟಕ ಸ್ಥಾಪನೆಯ ಬಗ್ಗೆ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಸೂಚನೆ ನೀಡಿದರು.

ಸಭೆಯಲ್ಲಿ *ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಶ್ರೀ ಗೌರವ್‌ ಗುಪ್ತ, ಕೈಗಾರಿಕಾಭಿವೃದ್ದಿ ಆಯುಕ್ತೆ ಶ್ರೀಮತಿ ಗುಂಜನ್‌ ಕೃಷ್ಣ ಹಾಗೂ ಕರ್ನಾಟಕ ಉದ್ಯೋಗ ಮಿತ್ರದ ವ್ಯವಸ್ಥಾಪಕ ನಿರ್ದೇಶಕ ರೇವಣ್ಣ ಗೌಡ* ಉಪಸ್ಥಿತರಿದ್ದರು.