IMG 20200819 WA0017

ಪಾವಗಡ: ಸತ್ತು ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ…!

DISTRICT NEWS ತುಮಕೂರು

ಪಾವಗಡ*: ಮಾನಸಿಕ ಅಸ್ವಸ್ಥನೋರ್ವ ಸತ್ತು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವಂತ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಪಾವಗಡ ತಾಲ್ಲೂಕಿನ ನಿಡಗಲ್ ಹೋಬಳಿಯ ಜಂಗಮರಹಳ್ಳಿ ಹೊರವಲಯದಲ್ಲಿ ಈ ಘಟನೆ ನಡೆದಿದ್ದು ,
ಮೃತ ಪಟ್ಟ ವ್ಯಕ್ತಿಯನ್ನು ಮುದ್ದುವೀರಯ್ಯ (50) ತಂದೆ ಈರಣ್ಣ ಎಂದು ತಿಳಿದು ಬಂದಿದೆ.
ಮೃತ ದುರ್ದೇವಿ ಪಾವಗಡ ತಾಲ್ಲೂಕಿನ ಬುಡಸನಹಳ್ಳಿ ಗ್ರಾಮದ ವಾಸಿ ಎನ್ನಲಾಗಿದೆ. IMG 20200819 WA0001

ಈತನಿಗೆ ಎರಡು ಕಣ್ಣುಗಳು ಕಾಣದೆ ಅಂಧರಾಗಿದ್ದರು ಹಾಗೂ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು. ಆಗಾಗಿ ಮನೆಯಿಂದ ಹೊರಬಂದವರು ಮರಳಿ ಮನೆಗೆ ಹೋಗುತ್ತಿದ್ದದ್ದು ಅವರ ಕುಟುಂಬಸ್ಥರು ಕಂಡು ಕರೆದೊಯ್ದಾಗ ಎನ್ನುವ ಮಾಹಿತಿ ಲಭ್ಯವಾಗಿದೆ.

*ಘಟನೆ ವಿವರ*
ಇದೇ ತಿಂಗಳು 15 ನೇ ತಾರೀಖಿನಂದು ಮನೆಯಿಂದ ಹೊರ ಬಂದವರು ಮಂಗಳವಾರ ಮಧ್ಯಾಹ್ನ 2.30 ಸುಮಾರಿಗೆ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಅಸ್ವಸ್ಥತೆಯಿಂದ ಕೂಡಿದ್ದ ಈ ವ್ಯಕ್ತಿಯ ಸಾವು ಸಾಮಾನ್ಯ ಸಾವೇ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಅರಸೀಕೆರೆ ಪೊಲೀಸ್ ಇನ್ಸ್ಪೆಕ್ಟರ್ ಎಚ್.ಶ್ರೀನಿವಾಸ್,ಎ ಎಸ್ ಐ ಧನರಾಜ್, ಮುಖ್ಯಪೇದೆ ಸಿದ್ದೇಶ್ ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ, ಪ್ರಥಮ ವರದಿ ದಾಖಲು ಮಾಡಿಕೊಂಡಿದ್ದಾರೆ.

ವರದಿ: ನವೀನ್ ಕಿಲಾರ್ಲಹಳ್ಳಿ