IMG 20210203 WA0026

ಪಾವಗಡ: ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್..!

DISTRICT NEWS ತುಮಕೂರು

ವೈ.ಎನ್. ಹೊಸಕೋಟೆ: ಗ್ರಾಮದ  ಮದಕರಿ ಕ್ರಿಕೆಟ್ ಕ್ಲಬ್ ವತಿಯಿಂದ ಮೇಗಳಪಾಳ್ಯ ರಸ್ತೆಯ ಮೈದಾನದಲ್ಲಿ 3 ದಿನಗಳ ತಾಲ್ಲೂಕು ಮಟ್ಟದ  ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಲಾಗಿತ್ತು.
ಟೂರ್ನಿಯಲ್ಲಿ ಒಟ್ಟು15 ತಂಡಗಳು ಭಾಗವಹಿಸಿದ್ದವು. ಸೋಮವಾರ ಸಂಜೆ ನಡೆದ ಅಂತಿಮ ಪಂದ್ಯಾವಳಿಯಲ್ಲಿ ಗ್ರಾಮದ ಮದಕರಿ ಕ್ರಿಕೆಟ್ ತಂಡ ಮತ್ತು ಮೇಗಳಪಾಳ್ಯ ತಂಡಗಳು ಪ್ರತಿಸ್ಪರ್ಧಿಗಳಾಗಿದ್ದವು. ಅಂತಿಮ ಹಂತದಲ್ಲಿ ಮೇಗಳಪಾಳ್ಯ ತಂಡ ಜಯಗಳಿಸಿ ಪ್ರಥಮ ಬಹುಮಾನ ಪಡೆಯಿತು.

ಪ್ರಾಯೋಜತ ತಂಡ ದ್ವಿತೀಯ ಬಹುಮಾನ ಗಳಿಸಿತು.
ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಬಹುಮಾನ ವಿತರಣೆ ಮಾಡಿದರು.

ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ
ಪಿ.ಸಿ.ನಾಗರಾಜ್, ಮುಖಂಡರಾದ ಜಿ.ಬಿ.ಸತ್ಯನಾರಾಯಣ, ಶ್ರೀನಿವಾಸಾಚಾರಿ, ಎ.ಒ.ನಾಗರಾಜ್, ಟಿ.ಎನ್.ಕೃಷ್ಣಮೂರ್ತಿ,
ಕೆ.ಎನ್.ಶಂಕರ, ಇ.ಗೋಪಾಲ, ಜಿ.ಬಿ.ಗಿರೀಶ್, ಕ್ರೀಡಾಪಟುಗಳಾದ ಸುರೇಶ್, ಭರತ್, ಮನೋಜ್, ತನು, ಅರುಣ್, ತೇಜ, ಹರೀಶ್ ಮುಂತಾದವರು ಹಾಜರಿದ್ದರು.