IMG 20210227 WA0009

ರೈತರ ಸಬಲೀಕರಣಕ್ಕೆ ಮುಖ್ಯಮಂತ್ರಿಗಳಿಗೆ ಮನವಿ…!

Genaral STATE

ಬೆಂಗಳೂರು: ರೈತರ ಸಬಲೀಕರಣಕ್ಕೆ ಕ್ರಮ ಕೈಗೊಳ್ಳುವಂತೆ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷರು ಹಾಗೂ ರಾಜ್ಯಸಭಾ ಸದಸ್ಯರಾದ ಶ್ರೀ ಈರಣ್ಣ ಕಡಾಡಿಯವರ ನೇತೃತ್ವದ ತಂಡವು ಶನಿವಾರ ಮುಖ್ಯಮಂತ್ರಿ ಶ್ರೀ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿತು.
ರಾಜ್ಯಾದ್ಯಂತ ಪ್ರವಾಸ ಮಾಡಿ ಅನೇಕ ಪ್ರಗತಿಪರ ರೈತರೊಂದಿಗೆ ಸಂವಾದಗಳನ್ನು ನಡೆಸಿದ ಸಂದರ್ಭದಲ್ಲಿ ರೈತರ ಸಬಲೀಕರಣಕ್ಕಾಗಿ ಈ ಕೆಳಕಂಡ ಅಂಶಗಳನ್ನು ಪ್ರಸ್ತಾಪಿಸಿದ್ದು ಇದನ್ನು ಪರಿಗಣಿಸಿ ಅನುಷ್ಠಾನ ಮಾಡಬೇಕೆಂದು ಮನವಿ ಮಾಡಿತು.
ರೈತರ ಉತ್ಪನ್ನಗಳಿಗೆ ಬೆಲೆ ಕುಸಿತವಾದಾಗ ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡಿ ತಕ್ಷಣ ಖರೀದಿ ಕೇಂದ್ರಗಳನ್ನು ತೆರೆಯದಿದ್ದರೆ ಅನಿವಾರ್ಯವಾಗಿ ಸಣ್ಣ ರೈತರು ಕಡಿಮೆ ಬೆಲೆಗೆ ಉತ್ಪನ್ನಗಳನ್ನು ಮಾರಾಟ ಮಾಡಿ ಆರ್ಥಿಕ ಸಂಕಷ್ಠಕ್ಕೆ ಸಿಲುಕುತ್ತಿದ್ದಾರೆ. ಆದ್ದರಿಂದ ಬೆಳೆ ರೈತರ ಕೈಗೆ ಬಂದಾಗ ಖರೀದಿ ಕೇಂದ್ರಗಳನ್ನು ತೆರೆದು, ಕೃಷಿ ಉತ್ಪನ್ನಗಳನ್ನು ಖರೀದಿ ಮಾಡುವುದರ ಮುಖಾಂತರ ರೈತರಿಗೆ ವೈಜ್ಞಾನಿಕ ಬೆಲೆ ಸಿಗುವಂತೆ ಮಾಡಬೇಕಾಗಿ ವಿನಂತಿಸಲಾಯಿತು.
ಕೃಷಿ ಪರ ಸರ್ಕಾರದ ಯೋಜನೆಗಳನ್ನು ನೀಡುವಾಗ ರೈತರಲ್ಲಿ ಜಾತಿ ವರ್ಗಿಕರಣ ಮಾಡದೆ ಎಲ್ಲಾ ರೈತರಿಗೂ ಯೋಜನೆಯ ಲಾಭ ಸಿಗುವಂತೆ ಅವಕಾಶ ನೀಡಬೇಕು. ಮನರೇಗಾ ಯೋಜನೆಯಡಿಯಲ್ಲಿ ಕೃಷಿ ಚಟುವಟಿಕೆಗಳಿಗೆ, ಜಾಬ್ ಕಾರ್ಡಗಳನ್ನು ನೀಡುವುದರ ಮುಖಾಂತರ ರೈತರ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡುವುದರ ಮೂಲಕ ರೈತರ ಆರ್ಥಿಕ ಸಬಲೀಕರಣಕ್ಕೆ ಸಹಕರಿಸಬೇಕು. ಈಗಾಗಲೇ ತೋಟಗಾರಿಕೆಯನ್ನು ಸೇರಿಸಲಾಗಿದ್ದು, ಆಹಾರ ಧಾನ್ಯಗಳು, ವಾಣಿಜ್ಯ ಬೆಳೆಗಳನ್ನು ಸೇರಿಸಬೇಕಾಗಿದೆ ಎಂದು ಕೋರಲಾಯಿತು.IMG 20210227 WA0008
1964ರಲ್ಲಿ ಸರ್ಕಾರದಿಂದ ಸಾಮೂಹಿಕ ಸರ್ವೇ ಕಾರ್ಯ ಆಗಿದ್ದು, ನಂತರ ಇಲ್ಲಿಯ ತನಕ ಸರ್ವೇ ಕಾರ್ಯ ನಡೆಸಿಲ್ಲವಾದ್ದರಿಂದ ಅನೇಕ ರೈತರ ಜಮೀನುಗಳಲ್ಲಿ ಗಡಿ ತಕರಾರುಗಳಿದ್ದು, ಸರ್ವೇಗೆ ಅರ್ಜಿ ಹಾಕಿದರೂ ನೆರೆ-ಹೊರೆಯವರು ತಕರಾರು ಮಾಡುತ್ತಿರುವುದರಿಂದ ಸರ್ವೇ ಕಾರ್ಯ ಇತ್ಯರ್ಥ ಆಗದೆ ರೈತರಿಗೆ ತುಂಬಾ ಕಿರುಕುಳವಾಗುತ್ತಿದೆ. ಸಾಲ ಸೌಲಭ್ಯ ಸಿಗುತ್ತಿಲ್ಲ, ಸರ್ಕಾರದ ಯೋಜನೆಗಳನ್ನು ಪಡೆಯಲು ಆಗದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ, ಆದ್ದರಿಂದ ಸರ್ಕಾರದಿಂದಲೇ ರಾಜ್ಯಾದ್ಯಂತ ಸರ್ವೇ ಅಭಿಯಾನ ಮಾಡಿಸಿ, ರೈತರಿಗೆ ಪಹಣಿ ಪತ್ರಗಳನ್ನು ಒದಗಿಸಬೇಕಾಗಿ ಮನವಿ ಮಾಡಲಾಯಿತು.
ರೇಷ್ಮೆ ಉತ್ಪನ್ನಗಳು ವಾಣಿಜ್ಯೋದ್ಯಮವಾದರೂ ಸಹ ಬೆಳೆಗಾರರು ರೈತರೇ ಆಗಿರುವುದರಿಂದ ರೇಷ್ಮೆಗೂಡಿಗೆ ಸ್ವಾಮಿನಾಥನ್ ವರದಿ ನೆಲೆಗಟ್ಟಿನಲ್ಲಿ ಬೆಂಬಲ ಬೆಲೆ ನಿಗದಿ ಮಾಡಿ ಮಾರುಕಟ್ಟೆಯ ವ್ಯತ್ಯಾಸದ ಮೊತ್ತಕ್ಕೆ ಸಬ್ಸಿಡಿ ರೂಪದಲ್ಲಿ ರೈತರಿಗೆ ಸಹಾಯಧನ ನೀಡಬೇಕಾಗಿರುತ್ತದೆ. ಕಿತ್ತೂರು ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗಗಳಲ್ಲಿ ಕಂದಾಯ ಇಲಾಖೆಯ ಹಲವಾರು ಹಳೆಯ ದಾಖಲಾತಿಗಳು ದೇವÀನಾಗರಿಕ ಲಿಪಿಯಲ್ಲಿ ದಾಖಲಾಗಿದ್ದು, ಇತ್ತೀಚಿಗೆ ಈ ಲಿಪಿಯನ್ನು ಓದುವರ ಸಂಖ್ಯೆ ವಿರಳವಾಗಿರುವುದರಿಂದ ರೈತರಿಗೆ ಹಳೆಯ ದಾಖಲೆಗಳಲ್ಲಿರುವುದನ್ನು ಓದಲು ತುಂಬಾ ತೊಂದರೆ ಆಗುತ್ತಿದೆ. ಆದ್ದರಿಂದ ಸರ್ಕಾರವೇ ದೇವನಾಗರಿಕ ಲಿಪಿಯಲ್ಲಿರುವ ಎಲ್ಲಾ ದಾಖಲಾತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿಸಿ, ಗಣಕೀಕರಣ ಮಾಡಿಸಿಕೊಡಬೇಕೆಂದು ವಿನಂತಿಸಲಾಯಿತು.
ರೈತರ ಬೆಳೆಗೆ ಆಕಸ್ಮಿಕ ಬೆಂಕಿ ಬಿದ್ದು, ಬೆಳೆ ನಾಶವಾದ ರೈತರಿಗೆ ಹಳೇ ಕಾನೂನಿನಡಿಯಲ್ಲಿ ಅತ್ಯಂತ ಕಡಿಮೆ ಪರಿಹಾರ ಮೊತ್ತ ಇದ್ದು ರೈತರಿಗೆ ಗರಿಷ್ಠ ಪರಿಹಾರ ಸಿಗುವಂತೆ ಮಾಡಬೇಕಾಗಿದೆ. ಬಳ್ಳಾರಿ ಜಿಲ್ಲೆಯ ಹಗರಿ ಕೃಷಿ ವಿಜ್ಞಾನ ಕೇಂದ್ರವನ್ನು ಕೃಷಿ ವಿಶ್ವವಿದ್ಯಾಲಯವನ್ನಾಗಿ ಮಾಡಬೇಕೆಂದು ಅನೇಕ ವರ್ಷUಳಿಂದ ಇರುವ ಜಿಲ್ಲೆಯ ಜನತೆಯ ಬೇಡಿಕೆಯನ್ನು ಈಡೇರಿಸುವುದರ ಮುಖಾಂತರ ಈ ಭಾಗದ ರೈತರಿಗೆ ಅನೂಕೂಲ ಮಾಡಬೇಕಾಗಿ ವಿನಂತಿಸಲಾಯಿತು.
ಗರಿಷ್ಠ ಪ್ರಮಾಣದ ಎಥನಾಲ್ ಉತ್ಪಾದನೆಯನ್ನು ಕಡ್ಡಾಯ ಮಾಡಿ, ಪ್ರೆಟೋಲ್‍ಗೆ ಮಿಶ್ರಣ ಮಾಡಿ ಪೆಟ್ರೋಲ್ ಬೆಲೆಗಳು ಸಾರ್ವಜನಿಕರಿಗೆ ಹೊರೆಯಾಗುವುದನ್ನು ತಪ್ಪಿಸಿ, ಈ ಮೂಲಕ ಕಬ್ಬು ಬೆಳೆಗಾರರಿಗೆ ಹೆಚ್ಚಿನ ಬೆಲೆ ದೊರೆಯಲು ಸಹಾಯಕವಾಗುತ್ತದೆ. ಬೇವು, ಹೊಂಗೆ, ಹಿಪ್ಪೆ ಮರಗಳನ್ನು ಎಲ್ಲಾ ದರ್ಜೆಯ ರಸ್ತೆಗಳ ಬದಿಗಳಲ್ಲಿಯೂ, ಕೆರೆಗಳ ಏರಿ, ಗುಂಡು ತೋಪು, ಕಾಲುವೆಗಳ ಪಕ್ಕದಲ್ಲಿ ಪೂರ್ಣ ಪ್ರಮಾಣದಲ್ಲಿ ಬೆಳೆಸಿ, ಇವುಗಳ ಬೀಜಗಳಿಂದ ಡೀಸೆಲ್, ಆಯಿಲ್‍ಗಳಿಗೆ ಪರ್ಯಾಯ ಇಂಧನಗಳನ್ನು ಉಪಯೋಗಿಸಿ ಆತ್ಮ ನಿರ್ಭರ ನೀತಿಯನ್ನು ಯುದ್ಧ ಸನ್ನದ್ದ ಸ್ಥಿತಿಯಲ್ಲಿ ಕೈಗೊಳ್ಳಬೇಕಾಗಿದೆ. ಇದರಿಂದ ಇಡೀ ದೇಶ ಹಸಿರುಮಯವಾಗಿ ಪರಿಸರ ಮಾಲಿನ್ಯ ತಪ್ಪಿಸಬಹುದಾಗಿದೆ ಎಂದು ತಿಳಿಸಲಾಯಿತು.
ತರಕಾರಿ ಮತ್ತು ಹಣ್ಣು-ಹಂಪಲಗಳನ್ನು ರೈತರು ದಾಸ್ತಾನು ಮಾಡಲು ಸಾಕಷ್ಟು ಶೈತ್ಯಾಗಾರಗಳನ್ನು ನಿರ್ಮಿಸಬೇಕಾಗಿದೆ. ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಮೈಸೂರು ಜಿಲ್ಲೆಗಳಲ್ಲಿ ಪ್ರಾಣಿ ಮಾನವ ಸಂಘರ್ಷದಿಂದ ರೈತರು ಬೆಳೆಗಾರರು ತೀರ್ವ ಸಂಕಷ್ಟ ಎದುರಿಸುತ್ತಿದ್ದಾರೆ. ಅವರಿಗೆ ವೈಜ್ಞಾನಿಕ ರೀತಿಯಲ್ಲಿ ಅವರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಸಂತ್ರಸ್ಥರಿಗೆ ಮತ್ತು ನೊಂದವರಿಗೆ ಪರಿಹಾರದ ಮೊತ್ತವನ್ನು ಹೆಚ್ಚಿಸಬೇಕೆಂದು ಮನವಿ ಮಾಡಿಕೊಳ್ಳುತ್ತೇವೆ. ಅಲ್ಲದೆ, ರಾಜ್ಯಾದ್ಯಂತ ಜನತೆಯ ಆರೋಗ್ಯದ ಹಿತ ದೃಷ್ಟಿಯಿಂದ ಸಾವಯವ ಕೃಷಿಗೆ ಹೆಚ್ಚು ಆದ್ಯತೆ ನೀಡಿ ಸಾವಯವ ಕೃಷಿಯನ್ನು ಗ್ರಾಮಮಟ್ಟದಲ್ಲಿ ಅನುμÁ್ಠನ ಮಾಡಬೇಕಾಗಿ ಮನವಿ ಮಾಡಿಕೊಳ್ಳುತ್ತೇವೆ.
ತುಮಕೂರಿನಲ್ಲಿರುವ ಬೈಪ್ ಸಂಸ್ಥೆಯಲ್ಲಿ ದೇಸೀಯ ಹಸುಗಳ ತಳಿಯ ಅಭಿವೃದ್ಧಿಗಾಗಿ ವಿಶೇಷ ಆದ್ಯತೆ ನೀಡಬೇಕೆಂದು ಕೋರುತ್ತೇವೆ. ರಾಜ್ಯದಲ್ಲಿನ ಹಾಪ್‍ಕಾಮ್ಸ್ ಮಳಿಗೆಗಳಲ್ಲಿ ಸಾವಯವ ಹಣ್ಣು ಮತ್ತು ತರಕಾರಿಗಳನ್ನು ಪ್ರತ್ಯೇಕವಾಗಿ ಮಾರಾಟ ಮಾಡಲು ಅವಕಾಶ ಮಾಡಿಕೊಡಬೇಕಾಗಿ ಕೋರಲಾಯಿತು.
ಈ ನಿಯೋಗದಲ್ಲಿ ರೈತ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಶಿವಪ್ರಸಾದ್, ಉಪಾಧ್ಯಕ್ಷರಾದ ಶ್ರೀ ಲೋಕೇಶ್ ಗೌಡ, ಶ್ರೀ ಷಣ್ಮುಖ ಗುರಿಕ್ಕಾರ, ಶ್ರೀ ನಂಜುಂಡೇಗೌಡ, ರಾಜ್ಯ ಕಾರ್ಯದರ್ಶಿಗಳಾದ ಶ್ರೀ ಪ್ರಸನ್ನ ಕೆರೆಕಾಯಿ, ರಾಜ್ಯ ಖಜಾಂಚಿ ಶ್ರೀ ಲಲ್ಲೇಶ್ ರೆಡ್ಡಿ, ಪದಾಧಿಕಾರಿಗಳು ಇದ್ದರು.