cbc04590 9a3c 4033 801b 282b9f6cb5a7

ಸರಳವಾಗಿ ಬಸವೇಶ್ವರ ಜಯಂತಿ ಆಚರಣೆ

STATE Genaral

ಬೆಂಗಳೂರು ಏ ೨೬:-  ಬಸವೇಶ್ವರ ಜಯಂತಿ ಅಂಗವಾಗಿ ಬಸವ ಸಮಿತಿ ವತಿಯಿಂದ ಬಸವೇಶ್ವರ ವೃತ್ತದ ಬಳಿಯ ಬಸವ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶ್ರೀ ಜಗಜ್ಯೋತಿ ಬಸವೇಶ್ವರರ ಪುತ್ಥಳಿಗೆ ಸನ್ಮಾನ್ಯ ಮುಖ್ಯಮಂತ್ರಿಗಳು ಶ್ರೀ ಬಿ.ಎಸ್.ಯಡಿಯೂರಪ್ಪ ರವರು, ಪೂಜ್ಯ ಮಹಾಪೌರರು ಮಾಲಾರ್ಪಣೆ ಮಾಡಿ ಪುಷ್ಪನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್  ಡಿಸಿಎಂ ಗೋವಿಂದ ಕಾರಜೋಳ, ಗೃಹ ಸಚಿವ ಬಸವರಾಜ ಬೊಮ್ಮಯಿ, ಚಿತ್ರದುರ್ಗ ಮುರುಘಾ ಮಠದ ಶ್ರೀ ಶಿವಮೂರ್ತಿ ಮುರುಘಾ ರಾಜೇಂದ್ರ ಸ್ವಾಮೀಜಿಗಳು, ಬೇಲಿಮಠದ ಶ್ರೀ ಶಿವರುದ್ರ ಸ್ವಾಮೀಜಿಗಳು  ಭಾಗವಹಿಸಿದ್ದರು  

063f6d92 2abe 431a b8db ff9160ee8cb8

ಮಾಲಾರ್ಪಣೆ ನಂತರ ಕಾರ್ಯಕ್ರಮದಲ್ಲಿ  ಮುಖ್ಯಮಂತ್ರಿ ಬಿಎಸ್‌ ವೈ ಕೊರೋನಾ ಸೋಕಿನಿಂದ ದೊಟ್ಟ ಮಟ್ಟದಲ್ಲಿ ಕಾರ್ಯಕ್ರಮ ಮಾಡಲು ಆಗಿಲ್ಲ ಎಂದರು, ಲಿಂಗ, ಜಾತಿ ಬೇದವಿಲ್ಲದ ನವ ಸಮಾಜದ ಕನಸನ್ನು ೧೨ ಶತಮಾನದಲ್ಲೆ  ಬಿತ್ತಿದವರು ಬಸವಣ್ಣನವರು,ಕಾಯಕವೇ ಕೈಲಾಸ ಎಂದು  ದುಡಿಮೆಯ ಮಹತ್ವವನ್ನು ಸಾರಿದರು. ತಮ್ಮ ಸರಳ ವಚನದ ಮೂಲಕ ಸಮಾನತೆ,ದಾಸೋಹ ತತ್ವಗಳನ್ನು ಸಾರಿದವರು, ಅವರು,ಸ್ಥಾಪಿಸಿದ್ದ ಅನುಭವ ಮಂಟಪ ಸಂಸದೀಯ ವ್ಯವಸ್ಥೆಗೆ ಮೂಲ ಎಂದರು.

9f6b38ec 853b 44f5 922d bff55193a138

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್  ಮಾತನಾಡಿ  ‘ಸರ್ವರಿಗೂ ಬಸವ ಜಯಂತಿ ಶುಭಾಶಯಗಳು. ಬಸವಣ್ಣನವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆಯುತ್ತಾ, ಅವರ ನೀತಿ, ವಚನಗಳನ್ನು ನಾವು ಉಸಿರಾಡುತ್ತಿದ್ದೇವೆ. ಅವರ ನಾಡಿನಲ್ಲಿ ಹುಟ್ಟಿರೋದು ನಮ್ಮ ಭಾಗ್ಯ’ ಎಂದುರು

’12 ನೇ ಶತಮಾನದಲ್ಲಿ ಅನುಭವ ಮಂಟಪವನ್ನು ಸ್ಥಾಪಿಸಿ, ಪ್ರಜಾಪ್ರಭುತ್ವದಲ್ಲಿ ಸಂಸತ್ತಿನ ಪರಿಕಲ್ಪನೆಗೆ ಅಡಿಪಾಯ ಹಾಕಿಕೊಟ್ಟವರು ಬಸವಣ್ಣನವರು. ಅದೇ ಸಂಸತ್ ವ್ಯವಸ್ಥೆಯಲ್ಲಿ ನಾವೀಗ ಕೆಲಸ ಮಾಡುತ್ತಾ ಪ್ರಜಾಪ್ರಭುತ್ವವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ’ ಎಂದರು.

e1ff58e0 1973 4d36 ba73 deed4bb541d1

ಇದೇ ವೇಳೆ ಕೋವಿಡ್-19 ಸೋಂಕು ಹರಡುವುದನ್ನು ತಡೆಯಲು ಬಸವ ಸಮಿತಿ ವತಿಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 2.51 ಲಕ್ಷ ಚೆಕ್ ಅನ್ನು  ಮುಖ್ಯಮಂತ್ರಿಗಳಿಗೆ ನೀಡಿದರು.

.