pro

ಜೆಡಿ ಎಸ್ : ಸೋತರೂ ಗೆದ್ದರೂ ಪಕ್ಷದಲ್ಲಿ ಇರ್ತೀನಿ ಅನ್ನೋರಿಗೆ ಟಿಕೆಟ್..!

POLATICAL STATE

ಬೆಂಗಳೂರು:-  ಜೆಡಿಎಸ್ ಕಚೇರಿಯಲ್ಲಿ ನಡೆದ ಮಹಿಳಾ ಸಮಾವೇಶದ ನಂತರ ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡರು ಮಾದ್ಯಮ ಕ್ಕೆ ನೀಡಿದ ಪ್ರತಿಕ್ರಿಯೆ.

ನಾನು ಸಿಎಂ ಆದಾಗಿನಿಂದಲೇ ಲೀಲಾದೇವಿ ಆರ್ ಪ್ರಸಾದ್ ಹೇಳ್ತಾ‌ ಇದ್ದರು ಹೆಣ್ಣು ಮಕ್ಕಳಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕು ಅಂತಿದ್ರು. ಅಂದು ನಾವು ಒಂದು ಸಭೆ ಮಾಡಿ ಹೆಣ್ಣು ಮಕ್ಕಳಿಗೆ ನೀಡಬೇಕಾದ ಸೌಲಭ್ಯದ ಬಗ್ಗೆ ಚರ್ಚೆ ಮಾಡಿದ್ವಿ ಅದನ್ನೇ ಚುನಾವಣಾ ಪ್ರಣಾಳಿಕೆ ಮಾಡಿಕೊಂಡ್ವಿ
ಹೆಣ್ಣು ಮಕ್ಕಳಿಗೆ ಮೀಸಲಾತಿ ತರುವ ಬಗ್ಗೆ ಹೋರಾಟ ಮಾಡಿದ್ವಿ ಕೆಲವು ರಾಜಕೀಯ ಪಕ್ಷಗಳು ಇದನ್ನು ವಿರೋಧ ಮಾಡಿದವು ನಾವು ಸ್ಥಳೀಯ ಸಂಸ್ಥೆ ಗಳ ಚುನಾವಣೆಯಲ್ಲಿ ಹೆಣ್ಣು ಮಕ್ಕಳಿಗೆ ಮೀಸಲಾತಿ ತಂದೆವು.

ಯಾರು ಪಕ್ಷಕ್ಕೆ ನಿಷ್ಠೆಯಿಂದ ಇರ್ತಾರೋ ಅಂತಹವರನ್ನು ಗುರುತಿಸುವ ಕೆಲಸ ಮಾಡಬೇಕು. ಸೋತರೂ ಗೆದ್ದರೂ ಪಕ್ಷದಲ್ಲಿ ಇರ್ತೀನಿ ಅನ್ನೋರಿಗೆ ಟಿಕೆಟ್ ಕೊಡಬೇಕು
ನಾನು ಕುಳಿತುಕೊಳ್ಳುವವನಲ್ಲ ಹೋರಾಟ ಮಾಡುವವನು.
ಈ ಪಕ್ಷದ ಬಗ್ಗೆ ಲಘುವಾಗಿ ಮಾತನಾಡುವರು ಇದ್ದಾರೆ
ಬೆಂಗಳೂರಿನ ಕೊಳಚೆ ಪ್ರದೇಶಗಳಿಗೆ ನೋಡಿಕೊಂಡು ಬಂದವರ್ಯಾರೂ ಸಿಎಂ ಆಗಿಲ್ಲ ಆದರೆ ನಾನು ಪ್ರತಿಯೊಂದು ಕೊಳಚೆ ಪ್ರದೇಶಗಳಿಗೆ ಭೇಟಿ ಕೊಟ್ಟಿದ್ದೇನೆ
ಪ್ರತಿ ಮನೆಗೂ ಅಕ್ಕಿ , ಸೀಮೆ ಎಣ್ಣೆ ಕೊಟ್ಟಿದ್ದೇನೆ

ಕಾಂಗ್ರೆಸ್ ನವರು ಏನು ಮಾತಾಡ್ತಾರೆ ಎಲ್ಲಾ ಗೊತ್ತಿದೆ.
ನಾವು ಎಲ್ಲಾ 224 ಕ್ಷೇತ್ರಗಳಿಗೆ ಅಭ್ಯರ್ಥಿ ಹಾಕ್ತೀವಿ
ಸೋತರೂ ಗೆದ್ದರೂ ತಲೆ ಕೆಡಿಸಿಕೊಳ್ಳಲ್ಲ.
ಇಲ್ಲಿ ದೇವೇಗೌಡರಿಂದ ಅಥವಾ ಕುಮಾರಸ್ವಾಮಿಯಿಂದ ಪಕ್ಷ ಉಳಿಯೋದಲ್ಲ ಕಾರ್ಯಕರ್ತರಿಂದ ಉಳಿಯಬೇಕಿದೆ
ನಮ್ಮಲ್ಲಿ ಲಕ್ಷಾಂತರ ಕಾರ್ಯಕರ್ತರು ಇದ್ದಾರೆ ಪಕ್ಷ ಉಳಿಸುತ್ತಾರೆ ಎಂಬ ಭರವಸೆ ಇದೆ

ಮುಂದಿನ ಚುನಾವಣೆಯಲ್ಲಿ ನಾನು ಯಾರ ಒತ್ತಡಕ್ಕೂ ಮಣಿಯುವುದಿಲ್ಲ ಒತ್ತಡ ತಂದರೂ ಬಿ ಫಾರ್ಮ್ ಕೊಡಲ್ಲ ಕಾರ್ಯಕರ್ತರು ಯಾರು ಚೆನ್ನಾಗಿ ಕೆಲಸ ಮಾಡ್ತಾರೋ ಅವರಿಗೆ ಕೊಡ್ತೀನಿ

ನಾನು ಪ್ರಾಮಾಣಿಕವಾಗಿ ಶಕ್ತಿ ಮೀರಿ ಕೆಲಸ ಮಾಡ್ತೀನಿ
ಯಾವ ಸಮುದಾಯದವರನ್ನು ಕೈ ಬಿಡಲ್ಲ
ನಮಗೆ ಎಲ್ಲರೂ ಒಂದೇ ಯಾರನ್ನು ಕೈ ಬಿಡಲ್ಲ ಎಂದು ಮಾಜಿ  ಪ್ರಧಾನ  ಮಂತ್ರಿ ಹೆಚ್.ಡಿ.ದೇವೇಗೌಡ ಅವರು ಹೇಳಿದರು