IMG 20211019 WA0027

ಪಾವಗಡ: ಪೌರಕಾರ್ಮಿಕರಿಗೆ ನವರಾತ್ರಿಯ ವಿಶೇಷ ಉಡುಗೊರೆ ವಿತರಣೆ….!

DISTRICT NEWS ತುಮಕೂರು

ಶ್ರೀರಾಮಕೃಷ್ಣ ಸೇವಾಶ್ರಮ ಪಾವಗಡ ಇವರು ಇನ್ಫೋಸಿಸ್ ಫೌಂಡೇಶನ್ ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಹಕಾರದೊಂದಿಗೆ ಪೌರಕಾರ್ಮಿಕರಿಗೆ ನವರಾತ್ರಿಯ ವಿಶೇಷ ಉಡುಗೊರೆ ನೀಡಿರುವ ಬಗ್ಗೆ.ಪ್ರತಿವರ್ಷದಂತೆ ಈ ವರ್ಷವೂ ಸಹ ಪಟ್ಟಣದ ಎಲ್ಲಾ ಪೌರಕಾರ್ಮಿಕರಿಗೆ ಹಾಗೂ ಪುರಸಭೆಯ ನೌಕರರಿಗೆ ಜಪಾನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ ಹೊಸ ಸೀರೆ, ಪಂಚೆ,ಹಾಗೂ ದಿನಸಿ ಕಿಟ್ಗಳನ್ನುವಿತರಿಸಲಾಯಿತು

ಈ ಕಾರ್ಯಕ್ರಮಕ್ಕೆ ಪುರಸಭೆಯ ಮುಖ್ಯಾಧಿಕಾರಿ ಶ್ರೀಮತಿ ಅರ್ಚನ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು ಈ ಕಾರ್ಯಕ್ರಮದಲ್ಲಿ ಕೌನ್ಸಿಲರ್ ಆದ ಸುದೇಶ್ ಬಾಬು. ಆಶ್ರಮದ ಸಂಯೋಜಕರಾದ ಲೋಕೇಶ್ ದೇವರಾಜ್ ಮನು ಮಹೇಶ್ ಹಾಗೂ.ಆರೋಗ್ಯ ನಿರೀಕ್ಷಕರಾದ ಶಂಶುದ್ದೀನ್ ಭಾಗವಹಿಸಿದ್ದರು. ಈ ಕಾರ್ಯಕ್ರಮ ಕುರಿತು ಜಪಾನಂದ ಸ್ವಾಮೀಜಿ ಅವರು ಮಾತನಾಡುತ್ತಾ ಪೌರಕಾರ್ಮಿಕರಿಗೆ ವಿಶೇಷವಾದ ಆರೋಗ್ಯ ಭಾಗ್ಯದ ಕಾರ್ಡನ್ನು ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರ ವತಿಯಿಂದ ನೀಡಲಾಗುವುದು ಎಂದು ಘೋಷಿಸಿದರು.

ಈ ಸಂದರ್ಭದಲ್ಲಿ ಪುರಸಭೆಯ ಮುಖ್ಯ ಅಧಿಕಾರಿಗಳಾದ ಶ್ರೀಮತಿ ಅರ್ಚನಾ ರವರು ಮಾತನಾಡುತ್ತಾ ಸ್ವಾಮೀಜಿ ಅವರ ಅಮೂಲ್ಯ ಕಾರ್ಯಕ್ರಮಕ್ಕೆ ಪುರಸಭೆಯಿಂದ ಸಂಪೂರ್ಣ ಸಹಕಾರ ನೀಡಲಾಗುತ್ತದೆ ಎಂದು ತಿಳಿಸಿದರು