IMG 20211207 WA0031 1

ಪಾವಗಡ: ಹಂತಕರನ್ನು ಪತ್ತೆ ಹಚ್ಚಿದ ಪೊಲೀಸರು…!

DISTRICT NEWS ತುಮಕೂರು

ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದ ಪೊಲೀಸ್ ಇಲಾಖೆ………
ಪಾವಗಡ: ತಾಲ್ಲೂಕಿನ ಬಿ.ಕೆ.ಹಳ್ಳಿ ಕ್ರಾಸ್ ಬಳಿ ಮಂಗಳವಾರ ಪ್ರಸನ್ನ ಕುಮಾರ್ (44) ಅವರನ್ನು ಹತ್ಯೆ ಮಾಡಿದ ಆರೋಪಿಯನ್ನು ಬುಧವಾರ ಪೊಲೀಸರು ಬಂಧಿಸಿದ್ದಾರೆ.
ನಾಗಲಮಡಿಕೆ ಹೋಬಳಿ ಅಪ್ಪಾಜಿಹಳ್ಳಿ ಗ್ರಾಮದ ರವಿಕುಮಾರ್(35) ಬಂಧಿತ. ಅಣ್ಣನ ಮಗಳನ್ನು ವಿವಾಹವಾಗಿದ್ದ ರವಿ ಕುಮಾರ್ ಮಗಳನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ ಎಂಬ ವಿಚಾರಕ್ಕೆ ಹತ್ಯೆಗೀಡಾಗಿರುವ ಪ್ರಸನ್ನ, ಆರೋಪಿ ನಡುವೆ ವೈಮನಸ್ಸು ಇತ್ತು. ಇದೇ ಕಾರಣಕ್ಕೆ ಹತ್ಯೆ ಮಾಡಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಪಟ್ಟಣಕ್ಕೆ ಹೋಗಿದ್ದ ಪ್ರಸನ್ನ ಕುಮಾರ್ ಮರಳಿ ಅಪ್ಪಾಜಿ ಹಳ್ಳಿಗೆ ವಾಪಸ್ಸಾಗುತ್ತಿದ್ದಾಗ ಬಿ.ಕೆ.ಹಳ್ಳಿ ಕ್ರಾಸ್ ಬಳಿಯ ತಂಗುದಾಣದಲ್ಲಿ ಕಾದು ಕುಳಿತಿದ್ದ ಆರೋಪಿ ದ್ವಿಚಕ್ರ ವಾಹನದಲ್ಲಿ ಆಗಮಿಸಿದ ಕೂಡಲೆ ಮೊದಲಿಗೆ ರಾಡ್ ನಿಂದ ಹೊಡೆದು, ಕೆಳಗೆ ಬಿದ್ದ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಪೊಲೀಸರು ಮಂಗಳವಾರದಿಂದಲೇ ತೀವ್ರ ಶೋಧ ನಡೆಸಿ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ. ಘಟನೆ ನಡೆದ ಒಂದು ದಿನದಲ್ಲಿಯೇ ಆರೋಪಿಯನ್ನು ಪತ್ತೆ ಹಚ್ಚಿದ ಪೊಲೀಸರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರ್ ವಾಡ್ ಘಟನಾ ಸ್ಥಳಕ್ಕೆ ಆಗಮಿಸಿ ಪ್ರಕರಣದ ಬಗ್ಗೆ ಮಾಹಿತಿ ಸಂಗ್ರಹಿಸಿದರು.
ಡಿ ವೈ ಎಸ್ ಪಿ ರಾಮಕೃಷ್ಣ, ಸರ್ಕಲ್ ಇನ್ ಸ್ಪೆಕ್ಟರ್ ಕಾಂತರೆಡ್ಡಿ, ಸಬ್ ಇನ್ ಸ್ಪೆಕ್ಟರ್ ರಾಜಣ್ಣ, ಸಹಾಯಕ ಸಬ್ ಇನ್ ಸ್ಪೆಕ್ಟರ್ ನರಸಿಂಹಮೂರ್ತಿ, ಲಮಾಣಿ, ಪ್ರವೀಣ್ ಭಜಂತ್ರಿ, ಸಿಬ್ಬಂದಿ ಆರೋಪಿ ಪತ್ತೆ ತಂಡದಲ್ಲಿದ್ದಾರೆ.

ವರದಿ: ಶ್ರೀನಿವಾಸುಲು ಎ