IMG 20220213 161221 scaled

ರಸ್ತೆ ಅಪಘಾತದಲ್ಲಿ ರೈತ ನ ಸಾವು…!      

DISTRICT NEWS ತುಮಕೂರು

ರಸ್ತೆ ಅಪಘಾತದಲ್ಲಿ ರೈತ ನ ಸಾವು.                              ಪಾವಗಡ. ತಾಲೂಕಿನ ದೊಮ್ಮತಮರಿಗೆ ಎರಡು ಕಿಲೋಮೀಟರ್ ದೂರದಲ್ಲಿರುವ ಚೆರುಕೂರು  ಎಂಬ ಗ್ರಾಮದ ಬಳಿ ರಸ್ತೆ ಅಪಘಾತವಾಗಿ ರೈತನೊಬ್ಬ ಮೃತಪಟ್ಟಿರುವ ಘಟನೆ ಶನಿವಾರ ರಾತ್ರಿ ಸುಮಾರು 8.20 ರಲ್ಲಿ  ನಡೆದಿದೆ.   ರೊದ್ದಂ   ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇಸು ದಾಖಲಾಗಿದೆ, ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.                                              ಮೃತ ರೈತ ಚೆರುಕೂರು ಗ್ರಾಮದ ಕೆ ಮೈಲಾರಿ(45) ಎಂದು ತಿಳಿದುಬಂದಿದೆ. ಮೃತರಿಗೆ ಒಬ್ಬ ಮಗ, ಒಬ್ಬ ಮಗಳು ಇದ್ದಾರೆ ಎಂದು ಗ್ರಾಮಸ್ಥರು ತಿಳಿಸಿದರು.   ದೊಮ್ಮತಮರಿಯಿಂದ ಪೆನುಗೊಂಡ ರಸ್ತೆ ಮಾರ್ಗವಾಗಿ ಭಾರಿ ವಾಹನಗಳು ಸಂಚಾರ ಮಾಡುತ್ತಿದ್ದು, ರಸ್ತೆಗಳಲ್ಲಿ ದೊಡ್ಡ ಗುಂಡಿಗಳು ಬಿದ್ದಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.              ರೈತರು ಗ್ರಾಮದ ಸುತ್ತಲೂ ಇರುವ ಜಮೀನುಗಳಲ್ಲಿ ಕಡಲೆ ಗಿಡಗಳನ್ನು  ಹಾಕಿದ್ದು, ಅವುಗಳನ್ನು ಮೇಯಲು ಜಿಂಕೆಗಳು ಇಡೀ ರಾತ್ರಿ ಹೊಲಗಳಿಗೆ ಬರುತ್ತಿದ್ದು, ರೈತರು ಬೆಳೆಯನ್ನು ರಕ್ಷಿಸಿಕೊಳ್ಳಲು ರಾತ್ರಿಯೆಲ್ಲಾ ಜಾಗರಣೆ ಇರಬೇಕಾದಂತಹ ಪರಿಸ್ಥಿತಿ ಉಂಟಾಗಿದೆ ಎಂದು ಗ್ರಾಮಸ್ಥ ಅಂಜಿನಪ್ಪ ತಿಳಿಸಿದರು.     

IMG 20220213 161221

                      ಮೃತ ರೈತನು ರಾತ್ರಿ ಊಟ ಮುಗಿಸಿಕೊಂಡು ಕಡಲೆಕಾಯಿ ಗಿಡಗಳಿಗೆ ಕಾವಲು ಕಾಯುವುದಕ್ಕಾಗಿ, ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದಾಗ ಅಪಘಾತ ಸಂಭವಿಸಿ ಮೃತಪಟ್ಟಿರುವುದು ದುರದೃಷ್ಟಕರ ಸಂಗತಿಯಾಗಿದೆ ಎಂದು ಗ್ರಾಮದ ನಿವಾಸಿ ಶ್ರೀನಿವಾಸ ತಿಳಿಸಿದರು.                      ಸಂಬಂಧಪಟ್ಟ ಇಲಾಖೆಯವರು ರಸ್ತೆ ದುರಸ್ತಿ ಕಾರ್ಯಗಳನ್ನು ಶೀಘ್ರವಾಗಿ ಕೈಗೊಂಡು ಜನರ ಪ್ರಾಣವನ್ನು ಉಳಿಸುವ ಕೆಲಸವನ್ನು ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು.

ವರದಿ: ಶ್ರೀನಿವಾಸುಲು ಎ