IMG 20220412 WA0023

ಪಾವಗಡ ಬಸ್ ದುರಂತ:ಪರಿಹಾರ ಚೆಕ್ ವಿತರಣೆ

DISTRICT NEWS ತುಮಕೂರು

ಪಾವಗಡ: ಪಳವಳ್ಳಿ ಕಟ್ಟೆ ಬಸ್ ದುರಂತದಲ್ಲಿ ಮೃತಪಟ್ಟ ಕುಟುಂಬಗಳಿಗೆ ಐದು ಲಕ್ಷ ಚೆಕ್ ವಿತರಣಾ ಕಾರ್ಯಕ್ರಮ ನಡೆಯಿತು

..ಇಂದು ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದಲ್ಲಿ 19/3/22 ಶನಿವಾರದಂದು ಪಳವಳ್ಳಿ ಕಟ್ಟೆ ಮೇಲೆ ಖಾಸಗಿ ಬಸ್ ಪಲ್ಟಿಯಾಗಿ ಏಳು ಜನ ಪಟ್ಟಿದ್ದು, 35 ಜನಕ್ಕೆ ತೀವ್ರ ಗಾಯಗಳಾಗಿದ್ದವು ‌‌. ಮೃತಪಟ್ಟ ವ್ಯಕ್ತಿಗಳ ಕುಟುಂಬಗಳಿಗೆ ಸರ್ಕಾರ 5 ಲಕ್ಷ ರೂ ಪರಿಹಾರ ಘೋಷಿಸಿದ್ದು, ಇಂದು ಶಾಸಕ ವೆಂಕಟರಮಣಪ್ಪ ಮೃತ ದುರ್ದೈವಿಗಳಾದ ಅಜಿತ್, ದಾದಾವಲಿ, ಶಾನವಾಜ್, ಕಲ್ಯಾಣ್, ಅಮೂಲ್ಯ ಮತ್ತು ಅರ್ಪಿತ
ಮನೆಯವರಿಗೆ ಸರ್ಕಾರದಿಂದ ಬಿಡುಗಡೆಯಾದ 5 ಲಕ್ಷ ರೂಪಾಯಿಗಳ ಚೆಕ್ಕನ್ನು ವಿತರಿಸಿದರು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ವರದರಾಜು, ಟಿ ನರಸಿಂಹಯ್ಯ, ರಾಜಗೋಪಾಲ್ ಮತ್ತಿತರರು ಹಾಜರಿದ್ದರು

ವರದಿ:ಶ್ರೀನಿವಾಸುಲು ಎ.