IMG 20221104 WA0058

ಕರ್ನಾಟಕಕ್ಕೆ ಡಾ: ಸಿ.ಸೋಮಶೇಖರ್ ಅವರ ಕೊಡುಗೆ ಅಪಾರ…!

Genaral STATE

ಕರ್ನಾಟಕಕ್ಕೆ ಡಾ: ಸಿ.ಸೋಮಶೇಖರ್ ಅವರ ಕೊಡುಗೆ ಅಪಾರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ.

ಬೆಂಗಳೂರು, ನವೆಂಬರ್ 04:: ಕರ್ನಾಟಕಕ್ಕೆ ಡಾ: ಸಿ.ಸೋಮಶೇಖರ್ ಅವರು ದೊಡ್ಡ ಕೊಡುಗೆ ನೀಡಿದ್ದಾರೆ. ಅವರು ಸದಾಕಾಲ ಕ್ರೀಯಾಶೀಲರಾಗಿ ಕೊಡುಗೆ ನೀಡುತ್ತಿರಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ನಿವೃತ್ತ ಐಎಎಸ್‌ ಅಧಿಕಾರಿ ಡಾ: ಸಿ.ಸೋಮಶೇಖರ್ ಅವರ ಆತ್ಮಕಥನ ನೀನೊಲಿದ ಬದುಕು ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.

IMG 20221104 WA0052

ಅಧಿಕಾರಿಯಾಗಿ ಸಾಕಷ್ಟು ಜನರಿಗೆ ಸಹಾಯ ಮಾಡಿದ್ದಾರೆ. ಅಧಿಕಾರ ಇಲ್ಲದಾಗಲೂ ಅಷ್ಟೇ ನಿರಂತರವಾಗಿ ಮಾಡುತ್ತಿದ್ದಾರೆ. ಅವರು ಗಡಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದು, ಗಡಿ, ಭಾಷೆ,ಆಧ್ಯಾತ್ಮ, ವಚನ ಸಾಹಿತ್ಯದ ಬಗ್ಗೆ ಅಪಾರ ಜ್ಞಾನ, ಅನುಭವ ಇದೆ ಎಂದರು.

ಬದುಕನ್ನು ಒಲಿಸಿಕೊಂಡ ಧೀಮಂತ.
ಅವರು ಬರೆದಿರುವ ಆದರೆ, ಮುದ್ರಿಸದೇ ಇರುವ ಬರಹ ಬಹಳಷ್ಟಿದೆ. ಸೋಮಶೇಖರ್ ಅವರದ್ದು ವರ್ಣ ರಂಜಿತ ಬದುಕು. ಎಲ್ಲಾ ರಂಗದಲಿಯೂ ಬಹಳ ಆಸಕ್ತಿವುಳ್ಳವರು.
ಒಲವನ್ನು ಬದುಕಿನಲ್ಲಿ ಗಳಿಸಿಕೊಳ್ಳಬೇಕಾಗುತ್ತದೆ. ತಾಯಿ ಮಗುವಿನ ಪ್ರೀತಿಯಿಂದ ಹಿಡಿದು ಎಲ್ಲಾ ಸಂಬಂಧ ಗಳಲ್ಲಿ ಒಲವು ಪಡೆದುಕೊಳ್ಳುವುದು ಕಷ್ಟದ ಕೆಲಸ. ನಾನು ಅನ್ನುವುದು ಬಿಟ್ಟಾಗ ಒಲವು ಸಿಗುತ್ತದೆ.ಸೋಮಶೇಖರ್ ಅವರ ಬದುಕಿನಲ್ಲಿ ನಾನು ಎನ್ನುವುದು ಅತ್ಯಂತ ವಿರಳವಾಗಿ ಬಂದಿದೆ. ಯಾವುದೇ ಸ್ಥಾನಮಾನ ಸಿಕ್ಕರೂ ಜನರ ಸೇವೆ ಮಾಡಿದ್ದಾರೆ. ಅವರು ಆಧ್ಯಾತ್ಮವನ್ನು ಬಲ್ಲವರು, ಸಂಪೂರ್ಣವಾಗಿಬದುಕನ್ನು ಒಲಿಸಿಕೊಂಡು, ಗಳಿಸಿಕೊಂಡು ಸಾಕ್ಷಾತ್ಕಾರ ಮಾಡಿಕೊಂಡಿದ್ದಾರೆ‌ ಎಂದರು

IMG 20221104 WA0051

ತಾಳ್ಮೆ ಇರಬೇಕು

ತಾಳ್ಮೆ ಇದ್ದವರಿಗೆ ಬದುಕು ಒಲಿಸಿಕೊಳ್ಳಲು ಸಾಧ್ಯವಾಗುತ್ತದೆ. ಎಂದೂ ಕೂಡ ಮನುಷ್ಯ ನಿರಾಶರಾಗಬಾರದು. ಅವರು ಅಧಿಕಾರದಲ್ಲಿದ್ದಾಗ ಎಷ್ಟು ಕ್ರಿಯಾಶೀಲರಾಗಿ ಕೆಲಸ ಮಾಡಿದ್ದರೋ ಅಷ್ಟೇ ಕ್ರಿಯಾಶೀಲರಾಗಿ ಅಧಿಕಾರ ಇಲ್ಲದಾಗಲೂ ಲವಲವಿಕೆಯಿಂದ ಕೆಲಸ ಮಾಡುತ್ತಿದ್ದಾರೆ‌. ಜನಸಮೂಹವನ್ನು ಗೆದ್ದಾಗ ಇದು ಬರುತ್ತದೆ ಎಂದರು.

ಬಸವ ಪ್ರಶಸ್ತಿ ಪ್ರಾರಂಭಿಸಿದವರು
ಬಸವ ಪ್ರಶಸ್ತಿ ಪ್ರಾರಂಭಿಸಿ, ಅಧಿಕಾರಿಗಳಿಗೆ, ಸಾಹಿತ್ಯ ವರ್ಗಕ್ಕೆ, ಬೇಕಾದವರಾಗಿದ್ದಾರೆ. ಸಮಾಜಕ್ಕೆ ನಗುವನ್ನು ಹರಡುವ ಸ್ವಭಾವದವರು.
ಅವರು ಜೀವನದಲ್ಲಿ ನೋವು ಅನುಭವಿಸಿದ್ದಾರೆ‌ ಅದನ್ನು ಮನದಾಳದಲ್ಲಿ ಇಟ್ಟುಕೊಂಡು ನಮಗೆಲ್ಲಾ ಸಂತೋಷ ನೀಡಿದ್ದಾರೆ‌. ಅವರ ಆಸೆಗಳನ್ನು ಈಡೇರಿಸುವ ದಿನಗಳು ದೂರ ಇಲ್ಲ. ಬಹಳಷ್ಟು ಆತ್ಮಕಥನಗಳಲ್ಲಿ ಹೇಳಿದ್ದಕ್ಕಿಂತ ಮುಚ್ಚಿಡುವುದೇ ಹೆಚ್ಚಿರುತ್ತದೆ.
ಕನ್ನಡ ನಾಡಿಗೆ ಭಿನ್ನವಾದ, ಅಪರೂಪದ ಸಾಹಿತಿ, ಅಧಿಕಾರಿಯಾಗಿದ್ದಾರೆ.
ಸೋಮಶೇಖರ್ ತಮ್ಮ ಬದುಕಿನ ಮೌಲ್ಯ ನಿರಂತರ ಹರಡಿ.‌ ಇದೇ ಬದುಕಿನ ಬುತ್ತಿ ಎಂದರು. ಗಡಿ ಅಭಿವೃದ್ಧಿಯನ್ನು ಬಹಳಷ್ಟು ಗಟ್ಟಿಯಾಗಿ ಮಾಡಲಿ ಎಂದರು.

ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿ, ತುಮಕೂರು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಸಚಿವರಾದ ಸುನಿಲ್‌ ಕುಮಾರ್, ವಿ. ಸೋಮಣ್ಣ, ನಿ. ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಉಪಸ್ಥಿತರಿದ್ದರು.