IMG 20230525 WA0006

Karnataka :ವಿಧಾನಸಭಾ ಸಭಾಧ್ಯಕ್ಷರಾಗಿ ಯು.ಟಿ.ಖಾದರ್ ಫರೀದ್ ಅವಿರೋಧವಾಗಿ ಆಯ್ಕೆ…!

POLATICAL STATE

ವಿಧಾನಸಭಾ ಸಭಾಧ್ಯಕ್ಷರಾಗಿ ಯು.ಟಿ.ಖಾದರ್ ಫರೀದ್ ಅವಿರೋಧವಾಗಿ ಆಯ್ಕೆ

ಬೆಂಗಳೂರು : ಇಂದು ನಡೆದ 16 ನೇ ವಿಧಾನಸಭೆ ಅಧಿವೇಶನದಲ್ಲಿ ಸಭಾಧ್ಯಕ್ಷರ ಸ್ಥಾನಕ್ಕೆ ಯು.ಟಿ. ಖಾದರ್ ಫರೀದ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚಿಸಿದರು. ಮಾನ್ಯ ಮುಖ್ಯಮಂತ್ರಿಗಳ ಸೂಚನೆಯನ್ನು ಉಪ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರು ಅನುಮೋದಿಸಿದರು.

ಯು.ಟಿ.ಖಾದರ್ ಫರೀಧ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿರುವುದನ್ನು ಹಂಗಾಮಿ ಸಭಾಧ್ಯಕ್ಷರಾದ ಆರ್. ವಿ. ದೇಶಪಾಂಡೆ ಅವರು ಅಂಗೀಕರಿಸಿದರು.

IMG 20230525 WA0025

ಎಲ್ಲಾ ಸದಸ್ಯರಿಗೂ ಧನ್ಯವಾದ ಸಲ್ಲಿಸಿದ ನೂತನ ಸಭಾಧ್ಯಕ್ಷ ಯು.ಟಿ. ಖಾದರ್


ನನಗೆ ಸ್ಪೀಕರ್ ಸ್ಥಾನ ನೀಡಿದ್ದಕ್ಕಾಗಿ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರಿಗೆ, ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ರವರಿಗೆ ಹಾಗೂ ವಿರೋಧ ಪಕ್ಷದ ನಾಯಕರಿಗೆ, ಎ.ಐ.ಸಿ.ಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆರವರಿಗೆ, ಕಾಂಗ್ರೇಸ್‍ನ ನಾಯಕರಾದ ರಾಹುಲ್ ಗಾಂಧಿ ರವರಿಗೆ, ಎ.ಐ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಕಾಂಗ್ರೇಸ್‍ನ ರಾಜ್ಯ ಉಸ್ತುವಾರಿಗಳಾದ ಸುರ್ಜೆವಾಲ ರವರಿಗೆ ಧನ್ಯವಾದಗಳನ್ನು ಅರ್ಪಿಸಿ ಈ ಸ್ಥಾನವು ನನಗೆ ದೊರೆತಿರುವುದು ನನ್ನ ಸೌಭಾಗ್ಯವೆಂದು ಸದನದಲ್ಲಿ ತಿಳಿಸಿದರು.

ಅವಿರೋಧವಾಗಿ ಆಯ್ಕೆ ಮಾಡಿದ ಹಿರಿಯ ಹಾಗೂ ಕಿರಿಯ ಸದಸ್ಯರು, ತಂದೆ ತಾಯಿಗಳು, ನನ್ನ ಮತಕ್ಷೇತ್ರದ ಮತದಾರರು, ವಿದ್ಯಾರ್ಥಿ ಜೀವನ, ರಾಜಕೀಯ ಜೀವನ, ರೂಪಿಸಿಕೊಟ್ಟ ಹಲವು ಗಣ್ಯ ವ್ಯಕ್ತಿಗಳಾದ ಜನಾರ್ಧನ್ ಪೂಜಾರಿ, ಆಸ್ಕರ್ ಫನಾರ್ಂಡಿಸ್, ವೀರಪ್ಪ ಮೊಯಲಿ, ವ್ಯಕ್ತಿತ್ವ ರೂಪಿಸಿಕೊಟ್ಟ ಗಜಾನಂದ ಪಂಡಿತ್, ಜಯರಾಮಶೆಟ್ಟಿ ಇನ್ನಿತರ ಗಣ್ಯರು ನನಗೆ ಪ್ರೇರಣೆ ನೀಡಿದ್ದನ್ನು ಸ್ಮರಿಸಿಕೊಳ್ಳುತ್ತಾ ಅವರಿಗೆಲ್ಲ ತಮ್ಮ ಧನ್ಯವಾದಗಳನ್ನು ಅರ್ಪಿಸಿದರು.

ಸಂವಿಧಾನ ರಚಿಸಿದ ಡಾ: ಬಿ.ಆರ್. ಅಂಬೇಡ್ಕರ್, ಸ್ವಾತಂತ್ರ್ಯ ತಂದುಕೊಟ್ಟ ಗಾಂಧೀಜಿ, ಮೌಲ್ಯಗಳನ್ನು ಎತ್ತಿ ತೋರಿಸಿದ ಜವಾಹರಲಾಲ ನೆಹರು ಇವರುಗಳನ್ನು ಸದನಲ್ಲಿ ಸ್ಮರಿಸಿ, ಎರಡು ಬಾರಿ ಅಧ್ಯಕ್ಷರಾದ ತುಳುನಾಡಿನ ವೈಕುಂಠ ಬಾಳಿಗ, ವಿಶ್ವೇಶ್ವರ ಹೆಗಡೆ ಕಾಗೇರಿ ಇವರುಗಳು ಮಾಡಿರುವ ಕೆಲಸಗಳನ್ನು ಸ್ಮರಿಸಿ ಕಾರ್ಯ ನಿರ್ವಹಿಸುತ್ತೇನೆಂದು ತಿಳಿಸಿದರು.

12ನೇ ಶತಮಾನದಲ್ಲಿ ಅನುಭವ ಮಂಟಪ ದಿಂದ ಈಗಿನ ಸಂವಿಧಾನ ಕೊಡುವ ಮೌಲ್ಯಗಳು ಮುಖ್ಯ, ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿಯಲು ಕ್ರಮ ಕೈಗೊಳ್ಳುತ್ತೇನೆ. ಸದನದ ನಾಯಕರಿಗೆ, ಉಪನಾಯಕರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಾ, ಸದನದಲ್ಲಿ ತಾತ್ವಿಕ ಅಭಿಪ್ರಾಯ ಭೇದ, ಇಲ್ಲಿ ಮಂಡಿಸುವ, ಚರ್ಚಿಸುವ ವಿಷಯಗಳು ನಾಡಿನ ಜನತೆಗೆ ಒಳಿತಾಗಬೇಕು.

IMG 20230525 WA0026

ಈ ರಾಜ್ಯದ ಜನತೆ ಆಯ್ಕೆ ಮಾಡಿರುವ ಪ್ರತಿನಿಧಿಗಳು ಸಶಕ್ತವಾಗಿ ಕಾರ್ಯ ನಿರ್ವಹಿಸಿ, ಈ ಸದನದಲ್ಲಿ ಹಿರಿಯ ಸದಸ್ಯರು, ಅನುಭವಿ, ಉತ್ಸಾಹಿ ಯುವಕರು ಹಲವರು ಈ ಸದನದ ಸದಸ್ಯರಾಗಿ ಆಯ್ಕೆಯಾಗಿ ಬಂದಿದ್ದಾರೆ. ಪಕ್ಷಭೇಧ ಮರೆತು ಸಶಕ್ತವಾಗಿ ಕಾರ್ಯನಿರ್ವಹಿಸುವುದಲ್ಲದೇ, ಒಬ್ಬ ಕಸ್ಟೋಡಿಯನ್ ಆಗಿ ಕಾರ್ಯನಿರ್ವಹಿಸುವುದು ನನ್ನ ಕರ್ತವ್ಯವೆಂದು ತಿಳಿಸಿ ಕಾನೂನು ಪದವಿ ಪಡೆದಿರುವ ನಾನು ಸಂವಿಧಾನ ಬದ್ದವಾಗಿ ಕರ್ತವ್ಯ ನಿರ್ವಹಿಸುತ್ತೇನೆ ಎಂದು ತಿಳಿಸಿದರು.

ಹೊಸದಾಗಿ ಆಯ್ಕೆಯಾಗಿ ಬಂದಿರುವ ಕಿರಿಯ ಸದಸ್ಯರು ಹಿರಿಯರ ಅನುಭವದ ಮಾತುಗಳನ್ನು ಆಲಿಸಿ ಗ್ರಹಿಸಬೇಕು. ರೂಲ್ಸ್‍ಬುಕ್ಸ್‍ಗಳನ್ನು ಓದಿ ತಿಳಿದುಕೊಳ್ಳಬೇಕು. ಡಾ: ಬಿ.ಆರ್. ಅಂಬೇಡ್ಕರ್ ರವರು ಹೇಳಿರುವಂತ “ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು” ಸರಿಯಾದ ಭವಿಷ್ಯ ನಿರ್ಮಾಣ ಮಾಡಲು ಇತಿಹಾಸ ಓದಬೇಕು. ಗ್ರಂಥಾಲಯದ ಪ್ರಯೋಜನ ಪಡೆದುಕೊಳ್ಳಬೇಕು. ಸಂವಿಧಾನ ಸರ್ವಗ್ರಂಥ. ಈ ಗ್ರಂಥದ ಮೌಲ್ಯಗಳನ್ನು ಅರಿತು ಅದರಂತೆ ಕರ್ತವ್ಯ ನಿರ್ವಹಿಸಲು ಪ್ರಯತ್ನಪಡುವ್ಯದಾಗಿ ತಿಳಿಸಿದರು. ಎಲ್ಲಾ ಪಕ್ಷದ ಅಭಿಪ್ರಾಯಗಳಿಗೆ ಗೌರವ ಕೊಡುತ್ತೇನೆ. ಕರ್ನಾಟಕದ ಸ್ಪೀಕರ್ ಕರ್ನಾಟಕದ ನಾಡಗೀತೆಯಾದ ಕುವೆಂಪು ರಚಿತ “ಜಯ ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ” ಎಂಬ ನಾಣ್ನುಡಿಯಂತೆ ಕರ್ನಾಟಕದ ಪಾಲು ಹೆಚ್ಚಾಗಿರಲಿ ಎಂದು ಬಯಸುತ್ತೇನೆ ಎಂದು ಸದನದಲ್ಲಿ ತಿಳಿಸಿದರು.

IMG 20230525 WA0020

ಜನಪ್ರತಿನಿಧಿಗಳಿಗೆ ಸರ್ಕಾರದ ಸ್ಥಿತಿಗತಿಗಳನ್ನು ಮುಟ್ಟಿಸುವಲ್ಲಿ ಪತ್ರಿಕಾರಂಗದ ಕಾರ್ಯ ಕೂಡ ಅತ್ಯವಶ್ಯ. ಮಾಧ್ಯಮ ವಲಯ ವೀವ್ಸ್ ಅಲ್ಲದೇ ಜನತೆಗೆ ನೀವ್ಸ್ ಮುಟ್ಟುವಂತೆ ಕರ್ತವ್ಯ ನಿರ್ವಹಿಸಬೇಕು, ಜನಪರ ಕಾರ್ಯದಲ್ಲಿ ಪತ್ರಿಕಾ ರಂಗದ ಜವಬ್ದಾರಿ ಹೆಚ್ಚು ಇದೆ. ಸರ್ಕಾರದ ಜನಪರ ಕಾರ್ಯಗಳನ್ನು ಸರಿಯಾದ ಸಮಯದಲ್ಲಿ ಜನರಿಗೆ ಮುಟ್ಟಿಸುವ ಕಾರ್ಯವನ್ನು ಮಾಧ್ಯಮ ರಂಗ ನಿರ್ವಹಿಸಬೇಕು ಎಂದು ಸದನದಲ್ಲಿ ಹೇಳಿದರು.

ದಿನಾಂಕ: 24-05-2023ರಂದು 16ನೇ ವಿಧಾನಸಭೆಯಲ್ಲಿ ನನ್ನನ್ನು ಸಭಾಧ್ಯಕ್ಷನನ್ನಾಗಿ ಮಾಡಿದ ಎಲ್ಲಾ ಸದಸ್ಯರಿಗೂ ಧನ್ಯವಾದಗಳನ್ನು ತಿಳಿಸಿ, ಸದನ ನಡೆಸಲು ಅವಕಾಶ ಕಲ್ಪಿಸಿದ ಮಾನ್ಯ ಮುಖ್ಯಮಂತ್ರಿಗಳಿಗೆ, ಉಪಮುಖ್ಯಮಂತ್ರಿಗಳಿಗೆ, ವಿರೋಧ ಪಕ್ಷದ ನಾಯಕರಿಗೆ, ಹಿರಿಯ ಕಿರಿಯ ಸದಸ್ಯರಿಗೆ, ಮಾಧ್ಯಮ ಮಿತ್ರರಿಗೆ, ಸಚಿವಾಲಯದ ಸಿಬ್ಬಂದಿಗಳಿಗೆ ವಂದನೆಗಳನ್ನು ಸಲ್ಲಿಸಿ, ಸದನವನ್ನು ಅನಿರ್ಧಿಷ್ಟ ಕಾಲದವರೆಗೆ ಮುಂದೂಡಿದರು.