IMG 20231123 WA0009

ಪಾವಗಡ: ಅಪಘಾತ -ವಿದ್ಯಾರ್ಥಿನಿಗೆ ಪೆಟ್ಟು….!

DISTRICT NEWS ತುಮಕೂರು

ಅಪಘಾತ ಸರ್ಕಾರಿ ಮಹಿಳಾ ಪ್ರಥಮ ದರ್ಜೇ ಕಾಲೇಜಿನ ವಿದ್ಯಾರ್ಥಿನಿಗೆ ಪೆಟ್ಟು

ಪಾವಗಡ ;- ಪಟ್ಟಣದ ಶಿರಾ ರಸ್ತೆಯ ಮಾರ್ಗದ ಕುರುಬರಹಳ್ಳಿ ಗೇಟ್ ಬಳಿ ಇರುವ ಸರ್ಕಾರಿ ಮಹಿಳಾ ಪ್ರಥಮದರ್ಜೆಕಾಲೇಜಿನ ವಿದ್ಯಾರ್ಥಿನಿಯ ಮೇಲೆ ಕಾರು ಹರಿದು ತಲೆ ಮತ್ತು ಕಾಲಿಗೆ ಗಾಯಗಳಾಗಿರುವ ಘಟನೆ ಗುರುವಾರ ಜರುಗಿದೆ.
ರಾಮಯ್ಯನಪಾಳ್ಯ ಗ್ರಾಮದ ರಂಗನಾಥ್ ಎನ್ನುವ ಪುತ್ರಿ ರಾಜೇಶ್ವರಿ ಎಂಬ ವಿದ್ಯಾರ್ಥಿನಿಗೆ ಪೆಟ್ಟಾಗಿದ್ದು ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಪ್ರಥಮ ಬಿ.ಎ. ವ್ಯಾಸಾಂಗ ಮಾಡುತ್ತಿದ್ದು, ಗುರುವಾರ ಕಾಲೇಜು ಮುಗಿಸಿಕೊಂಡು ಬರುವಾಗ ಹಿಂದಿನಿAದ ಬಂದ ಕಾರು ಡಿಕ್ಕಿಯಾಗಿದ್ದು ಡಿಕ್ಕಿಯ ರಬಸಕ್ಕೆ ರಾಜೇಶ್ವರಿಯ ತಲೆ ಮತ್ತು ಕಾಲುಗಳಿಗೆ ಗಂಬೀರ ಗಾಯಗಳಾಗಿದ್ದು ತಕ್ಷಣ ಪಾವಗಡ ಸರ್ಕಾರಿ ಅಸ್ಪತ್ರೆಗೆ ರವಾನಿಸಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ತುಮಕೂರು ಜಿಲ್ಲಾ ಅಸ್ಪತ್ರೆಗೆ ರವಾನಿಸಲಾಗಿದೆ. ಕಾರಿನ ಚಾಲಕನ್ನು ಪೋಲಿಸರು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿದ್ದಾರೆ.
ಇನ್ನು ಘಟನೆ ನಡೆದ ತಕ್ಷಣ ಕಾಲೇಜಿನ ಸಿಬ್ಬಂದಿ ಮತ್ತು ವಿದ್ಯಾರ್ಥಿನಿಯರು ಹಾಗೂ ಇವರಿಗೆ ಬೆಂಬಲವನ್ನು ನೀಡಿ ವೈ.ಇ. ಆರ್. ಸರ್ಕಾರಿ ಪ್ರಥಮದರ್ಜೇ ಕಾಲೇಜಿನ ವಿದ್ಯಾರ್ಥಿಗಳು ಪಾವಗಡ ಪೋಲೀಸ್ ಠಾಣೆಗೆ ಮತ್ತು ತಹಶೀಲ್ದಾರ್ ಕಛೇರಿಗೆ ಮುತ್ತಿಗೆ ಹಾಕಿ ಕುರುಬರ ಹಳ್ಳಿ ಗೇಟ್ ಹಳ್ಳಿ ಬಳಿ ಬಸ್ ನಿಲುಗಡೆ ಮಾಡುವಂತೆ ತಹಶೀಲ್ದಾರ್ ಡಿ. ವರದರಾಜುಗೆ , ಮನವಿ ಪತ್ರ ಸಲ್ಲಿಸಿದ್ದಾರೆ,

IMG 20231123 WA0007

ಅಶ್ವಿನಿ, ರಮ್ಯಾ, ಸುರೇಖಾ, ನವ್ಯ ರಾಧ, ಮೌನ, ಶಿಲ್ಪಾ, ಚಾಯಾ, ಉಷಾ, ಭೂಮಿಕ, ವೈ ಇ ಆರ್ ಕಾಲೇಜಿನ ಅನಿಲ್ ಕುಮಾರ್, ಸುಬ್ರಮಣಿ, ನಂದೀಶ್ ನಾಯ್ಕ, ಜನಾರ್ದನ, ಆದರ್ಶ, ಮೋಹನ್,

ವರದಿ,: ನಂದೀಶ್ ನಾಯ್ಕ