IMG 20240817 WA0039

ಪಾವಗಡ : ವಿದ್ಯುತ್ ಸ್ಪರ್ಶಿಸಿ ಇಬ್ಬರು ಯುವಕರ ಸಾವು….!

DISTRICT NEWS ತುಮಕೂರು

ವಿದ್ಯುತ್ ಸ್ಪರ್ಶಿಸಿ ಒಂದೇ ಕುಟುಂಬದ ಇಬ್ಬರು ಯುವಕರ ಸಾವು.

ಪಾವಗಡ : ವಿದ್ಯುತ್ ಸ್ಪರ್ಶಿಸಿ ಒಂದೇ ಕುಟುಂಬದ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ಶುಕ್ರವಾರ ರಾತ್ರಿ ತಾಲ್ಲೂಕಿನ ಟಿ ಎನ್ ಬೆಟ್ಟದ ಹೊರವಲಯದಲ್ಲಿ ನಡೆದಿದೆ.

ಟಿ ಎನ್ ಬೆಟ್ಟದ ಅನಿಲ್ ಕುಮಾರ್ (29) ಮತ್ತು ಪುಟ್ಟರಾಜು (35) ಮೃತ ಯುವಕರು.

ಟಿ ಎನ್ ಬೆಟ್ಟದ ಸರ್ವೇ ನಂಬರ್ 293 ರ ಮೂರು ಎಕರೆ ಜಮೀನಿನಲ್ಲಿ ಶೇಂಗಾ ಭಿತ್ತನೆ ಮಾಡಿದ್ದು ಕಾಡು ಪ್ರಾಣಿಗಳ ಕಾವಲಿಗೆ ಎಂದು ಪ್ರತಿದಿನ ರಾತ್ರಿ ಹೊಲಕ್ಕೆ ಬರುತ್ತಿದ್ದರು. ನೀರು ಹಾಯಿಸುತ್ತಿದ್ದರು.. ಎಂದಿನಂತೆ ಶುಕ್ರವಾರ ರಾತ್ರಿಯೂ ಈ ನತದೃಷ್ಟ ಪುಟ್ಟರಾಜು ವಿನೊಂದಿಗೆ ಅಂಗವಿಕಲ ಅನಿಲ್ ಕುಮಾರ್ ಬಂದಿದ್ದಾನೆ…ರಾತ್ರಿ ವಿಪರೀತ ಮಳೆಯಿದ್ದು ಕಾಡುಪ್ರಾಣಿಗಳ ರಕ್ಷಣೆಗೆಂದು ತಂತಿಬೇಲಿ ಹಾಕಿದ್ದರು ಆದರೆ ವಿದ್ಯುತ್ ಸಂಪರ್ಕ ಕೊಟ್ಟಿರಲಿಲ್ಲ ..ಆದರೂ ಈ ಹುಡುಗರು ನಮಗೆ ಗೊತ್ತಿಲ್ಲದೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಂಡಿದ್ದರೇನೋ ಗೊತ್ತಿಲ್ಲ…ಎಂದು ಅವಘಡಕ್ಕೆ ತುತ್ತಾದವರ ಹೆತ್ತವರು ತಿಳಿಸಿದರು.

ವಿಷಯ ತಿಳಿದ ನಂತರ ಅರಸೀಕೆರೆ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ತಾರಾಸಿಂಗ್ ಮತ್ತು ಮುಖ್ಯಪೇದೆ ಸಿದ್ದೇಶ್ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಮೃತ ದೇಹ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರು.

ಘಟನೆಯ ನಂತರ ಸ್ಥಳಕ್ಕೆ ಬೆಸ್ಕಾಂ ಇಲಾಖೆಯ ಸಿಬ್ಬಂಧಿಗಳು ಸ್ಥಳಕ್ಕೆ ಧಾವಿಸಿ ಅನಾಹುತದ ಮಾಹಿತಿ ಪಡೆದಿದ್ದಾರೆ.
ಬಾಳಿ ಬದುಕಬೇಕಿದ್ದ ಯುವಕರು ಸಾವಿಕಿಡಾಗಿದ್ದ ವಿಷಯ ತಿಳಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು.

ವರದಿ. ಶ್ರೀನಿವಾಸಲು. A