IMG 20230505 WA0010

ಪಾವಗಡ:ಒಮ್ಮೆ ಆಶೀರ್ವದಿಸಿದರೆ ನಿಮ್ಮ ಕಷ್ಟಗಳಿಗೆ ಸ್ಪಂದಿಸುವೆ…!

DISTRICT NEWS ತುಮಕೂರು

ಒಮ್ಮೆ ಆಶೀರ್ವದಿಸಿದರೆ ನಿಮ್ಮ ಕಷ್ಟಗಳಿಗೆ ಸ್ಪಂದಿಸುವೆ.‌ ಕಾಂಗ್ರೆಸ್ ಅಭ್ಯರ್ಥಿ ಹೆಚ್.ವಿ ವೆಂಕಟೇಶ್.
ಪಾವಗಡ : ಶಾಸಕರಾದ ವೆಂಕಟರಮಣಪ್ಪನ ವರಿಗೂ ಪೆನ್ನೊಬನಹಳ್ಳಿ ಮತ್ತು ಗೊಲ್ಲರಹಟ್ಟಿಯಲ್ಲಿನ ಜನರ ನಡುವೆ ಅತ್ಯಂತ ಪ್ರೀತಿ ವಿಶ್ವಾಸ ಇದ್ದು, ಅದೇ ರೀತಿಯ ಪ್ರೀತಿ ವಿಶ್ವಾಸವನ್ನು ತನ್ನ ಮೇಲೆ ತೋರಿಸಬೇಕೆಂದು. ಹೆಚ್. ವಿ ವೆಂಕಟೇಶ್ ತಿಳಿಸಿದರು.
ಪಾವಗಡ ತಾಲ್ಲೂಕಿನ ಸಾಸಲಕುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೆನ್ನೊಬನಹಳ್ಳಿ ಗ್ರಾಮ ಮತ್ತು ಪೆನ್ನೊಬನಹಳ್ಳಿ ಗೊಲ್ಲರಹಟ್ಟಿಯಲ್ಲಿ ಶುಕ್ರವಾರ ಕಾಂಗ್ರೆಸ್ ಅಭ್ಯರ್ಥಿ ಹೆಚ್ ವಿ ವೆಂಕಟೇಶ್ ರವರು ಮತಯಾಚಿಸಿ ಮಾತನಾಡಿದರು.
ಗೊಲ್ಲರು ಕೊಟ್ಟ ಮಾತಿನ ರೀತಿ ನಡೆದುಕೊಳ್ಳುವ ಜನರೆಂದು ನೀವು ತೋರಿಸುವ ಪ್ರೀತಿಗೆ ಬೆಲೆ ಕಟ್ಟಲಾಗುವುದಿಲ್ಲವೆಂದರು.

IMG 20230505 WA0009


ತನ್ನ ತಂದೆ ವೆಂಕಟರಮಣಪ್ಪ ಶಾಸಕರಾಗಿ ತಾಲೂಕಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆಂದು.
ತಾನು ಸಹ ಕಷ್ಟವೆಂದು ಬಂದವರಿಗೆ ಯಾವಾಗಲೂ ಸಹ ಬರಿ ಕೈಯಿಂದ ಕಳಿಸಿಲ್ಲವೆಂದರು.ತಾನು ಸಹ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕಾಗಿ, ಹಾಸ್ಟೆಲ್ ಗಾಗಿ, ಹಾಗೂ ಶುಲ್ಕ ಭರಿಸಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಶುಲ್ಕವನ್ನು ಸಹ ಪಾವತಿ ಮಾಡುತ್ತಿದ್ದೆ ಎಂದರು. ದಯಮಾಡಿ ತಾವೆಲ್ಲರೂ ತಾಲೂಕಿನಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಬರುವುದಕ್ಕೆ ತಮ್ಮೆಲ್ಲರ ಆಶೀರ್ವಾದ ತನಗೆ ಬೇಕೆಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಕೆಪಿಸಿಸಿ ಸದಸ್ಯ ಕೆ ಎಸ್ ಪಾಪಣ್ಣ ನವರು,ಹೊಟ್ಟೆ ಈರಣ್ಣ, ಈರಣ್ಣ,ತಿಪ್ಪ ನಾಯಕ, ಗೋವಿಂದ ರೆಡ್ಡಿ, ಕೃಷ್ಣ ರೆಡ್ಡಿ, ಪ್ರತಾಪ್ ರೆಡ್ಡಿ ಸೇರಿ ಆ ಗ್ರಾಮಗಳ ಕಾಂಗ್ರೆಸ್ ಮುಖಂಡರು, ಪಕ್ಷದ ಬೆನ್ನೆಲುಬಾಗಿರುವ ಕಾರ್ಯಕರ್ತರು, ಮಹಿಳಾ ಮತದಾರರು ಉಪಸ್ಥಿತರಿದ್ದರು..