IMG 20250620 WA0033

ಪಾವಗಡ : “ಲೋಕಾ’ ದಾಳಿ ” ಎಲ್ಲಮ್ಮ – ರಾಧಮ್ಮ “ …..!

DISTRICT NEWS ತುಮಕೂರು

 ಯಾವ ಪುರುಷಾರ್ಥ  ಕ್ಕೆ ಲೋಕಾ ದಾಳಿ…..?

  • ರಾಧಮ್ಮ ಅದೃಷ್ಯ 
  • ಮಧ್ಯವರ್ತಿಗಳ ಹಾವಳಿ
  • ರೈತರ ಜಮೀನು ಅಡಮಾನಕ್ಕೂ ಲಂಚ

ಪಾವಗಡ:  ಉಪ ನೋಂದಣಾಧಿಕಾರಿಗಳ ಕಚೇರಿ ಮೇಲೆ ತುಮಕೂರು ಲೋಕಾಯುಕ್ತ ಅಧಿಕಾರಿಗಳ ತಂಡ  ಶುಕ್ರವಾರ ದಾಳಿ ನಡೆಸಿದೆ.

ಕಚೇರಿಯಲ್ಲಿ ಲಂಚಾವತಾರ ತಾಂಡವಾಡುತ್ತಿದೆ, ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ ಎಂದು ಸಾರ್ವಜನಿಕರಿಂದ ಬಂದ ದೂರಿನ ಹಿನ್ನೆಲೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಕಚೇರಿಯ ಒಳಗೆ ಓಡಾಡಿ ಅಲ್ಲಲ್ಲಿ ಇದ್ದ ಕಡತಗಳನ್ನು ಪರಿಶೀಲನೆ ನಡೆಸಿ,  ಪ್ರಭಾರ  ಉಪನೋಂದಣಾಧಿಕಾರಿ ನಾಗರಾಜ್  ಹಾಗೂ ಕಚೇರಿ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡರು.

ರಾಧಮ್ಮ ಅದೃಷ್ಯ :

ಪಾವಗಡ ಉಪನೊಂದಾಣಿ ಕಚೇರಿಯ ಲಂಚಾವತಾರದ ಮತ್ತು ಮದ್ಯವರ್ತಿಗಳ ಹಾವಳಿಯ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನಲೆಯಲ್ಲಿ ಲೋಕಾ ದಾಳಿ ಯ ವಾಸನೆ ಮುಂಚೆ ಸಿಕ್ಕಿತ್ತು ಎಂಬ ಗುಸು-ಗುಸು  ಮಾತುಗಳು   ಉಪ ನೋಂದಣಾಧಿಕಾರಿಗಳ ಕಚೇರಿಯ ಪಡಸಾಲೆ ಯಲ್ಲಿ ಕೇಳಿ ಬರುತ್ತಿತ್ತು. ಕಾರಣ ಇಷ್ಟೆ ದಾಳಿ ಹಿಂದಿನ ದಿನದಿಂದ ರಜೆ ಮೇಲೆ ತೆರಳಿದ್ದಾರಂತೆ ರಾದಮ್ಮ…..?

ಇತ್ತೀಚಿನ ದಿನಗಳಲ್ಲಿ ಲೋಕಾ ಅಧಿಕಾರಿಗಳ  ಮೇಲು ಅಪವಾದಗಳ ತೂಗು ಕತ್ತಿ ನೇತಾಡುತ್ತಿರುವುದೆ ಈ ಅನುಮಾನಗಳಿಗೆ ಕಾರಣ ಎಂಬ ಅಂಶ ಸಾರ್ವಜನಿಕ ವಲಯದಲ್ಲಿ ಕೇಳುಬರುತ್ತಿದೆ.IMG 20250620 WA0034

ಮಧ್ಯವರ್ತಿಗಳ ಹಾವಳಿ :

ಪಾವಗಡ ಉಪನೊಂದಾಣಿ ಕಚೇರಿಲ್ಲಿ ಮಧ್ಯವರ್ತಿಗಳಿಲ್ಲದೆ ಏನು ಕೆಲಸ ನಡೆಯುವುದಿಲ್ಲ. ಉಪನೊಂದಾಣಿ ಅಧಿಕಾರಿ ಮತ್ತು ಸಿಬ್ಬಂದಿಗೆ ಲಂಚದ ಊಟ ಬಡಿಸುವ ಕೆಲಸವನ್ನು  ಮಧ್ಯವರ್ತಿಗಳು ಮಾಡುತ್ತಾರೆ. ಸೈಟ್‌, ಜಮೀನು, ಅಡಮಾನ ನೊದಾವಣೆಗೆ ಲಂಚ  ಧರಗಳ ಪಟ್ಟಿ ಮಧ್ಯವರ್ತಿಗಳ ಬಳಿ ಇರುತ್ತದೆ,

ಕಾವೇರಿ ತಂತ್ರಾಶದಲ್ಲಿ ಮಾಹಿತಿಯನ್ನು ಮೊದಲು ತುಂಬಬೇಕು ನಂತರ ಅನುಮೋದನೆ ಬರುತ್ತದೆ ನಂತರ ಸರ್ಕಾರಿ ಶುಲ್ಕವನ್ನು ಸಾರ್ವಜನಿಕರು ಪಾವತಿಸಬೇಕು ಆ ಸಂದರ್ಭದಲ್ಲಿ ಸರ್ಕಾರಿ ಶುಲ್ಕ ದ ಜೊತೆ ರಾಧಮ್ಮನ ಕಚೇರಿಯ ಶುಲ್ಕ ಮತ್ತು ಮಧ್ಯವರ್ತಿ ಕಾಣಿಕೆ ಯನ್ನು ಸೇರಿಸಿ ಸಾರ್ವಜನಿಕರಿಂದ ವಸೂಲಿ ಮಾಡುತ್ತಾರೆ.

ಇಲ್ಲಿ ರಾದಮ್ಮ ನ ಕಚೇರಿ ಗೆ  ಬಹು ಪಾಲು ಮಧ್ಯವರ್ತಿಗಳಿದ ಹಣ ತಲಪುತ್ತದೆ. ಇಲ್ಲಿ ಉಪನೊಂದಾವಣೆ ಗೆ ಅಧಿಕಾರಿ – ಡಾಟಾ ತುಂಬುವ ಸಿಬ್ಬಂದಿ ಮತ್ತು ಅಂತಿಮ ವಾಗಿ ಸಹಿ ಪಡೆಯುವ ಸಿಬ್ಬಂದಿಗೂ ಹಣ ನೀಡಬೇಕು. ಎಂಬ ಮಾಹಿತಿಯನ್ನು ಹೆಸರು ಹೇಳಲು ಇಚ್ಚಿಸದ ಮಧ್ಯವರ್ತಿ  ಸಪ್ತಸ್ವರಕ್ಕೆ ಇಂಚು- ಇಂಚು ಮಾಹಿತಿ ನೀಡಿದರು.

ರೈತರ ಜಮೀನು ಅಡಮಾನಕ್ಕೂ ಲಂಚ :

ಹವಮಾನ ವೈಪರಿತ್ಯ ಬೆಳೆದ ಬೆಳೆಗೆ ಧರ ಸಿಗದೆ ರೈತರು ಕಂಗಾಲಾದ ಇಂತಹ ಸಂಕಷ್ಟ ದಲ್ಲಿರುವ ಅನ್ನದಾತನ್ನು ಬಿಡುವುದಿಲ್ಲ ರಾಧಮ್ಮನ ಕಚೇರಿ. ರೈತರು ಜಮೀನಿನ ಬೆಳೆ ಸಾಲ ಪಡೆಯಬೇಕಾದರೆ ಜಮೀನು ಅಡಮಾನ  (ಮಾಂಟ್ಗೇಜ್) ಮಡಿಸಬೇಕು ಈ ಪ್ರಕ್ರಿಯೆಗೂ  ಸರಕಾರಿ ಶುಲ್ಕ ಜೊತೆ ರಾಧಮ್ಮನ ಕಚೇರಿ ಶುಲ್ಕ ವನ್ನು ಅನ್ನದಾತರು ನೀಡಬೇಕು. ರೈತರಿಗೆ ಮಧ್ಯವರ್ತಿಗಳು ಧರ ಪಟ್ಟಿ ನೀಡುತ್ತಾರೆ ಅದರಂತೆ ಪಾವತಿಸಬೇಕು. ರೈತರು ಅಡಮಾನ ತೆಗೆಸಲು ಸರಕಾರಿ ಶುಲ್ಕ ಜೊತೆ ರಾಧಮ್ಮನ ಕಚೇರಿ ಶುಲ್ಕ ನೀಡಬೇಕು. ಇಲ್ಲವಾದರೆ ರೈತರ ಪೈಲ್‌ ಮುಂದಕ್ಕೆ ಹೋಗುವುದಿಲ್ಲ ಎಂಬ ಮಾತುಗಳನ್ನು ಮಧ್ಯವರ್ತಿಗಳು ರೈತರಿಗೆ ತಿಳಿಸುತ್ತಾರೆ ಈ ಅಂಶಗಳನ್ನು ನೊಂದ ಅನ್ನದಾತರು ಸಪ್ತಸ್ವರದೊಂದಿ ಗೆ ಅಂಚಿಕೊಂಡರು.

 ಯಾವ ಪುರುಷಾರ್ಥ ಕ್ಕೆ ಲೋಕಾ ದಾಳಿ…..?

 ನೊಂದಾವಣೆ ಕಚೇರಿಯಲ್ಲಿ ಲಂಚಾವತಾರ ತಾಂಡವಾಡುತ್ತಿದೆ, ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ ಎಂದು ಸಾರ್ವಜನಿಕರಿಂದ ಬಂದ ದೂರಿನ ಹಿನ್ನೆಲೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಕಚೇರಿಯ ಒಳಗೆ ಓಡಾಡಿ ಅಲ್ಲಲ್ಲಿ ಇದ್ದ ಕಡತಗಳನ್ನು ಪರಿಶೀಲನೆ ನಡೆಸಿ,  ಪ್ರಭಾರ  ಉಪನೋಂದಣಾಧಿಕಾರಿ ನಾಗರಾಜ್  ಹಾಗೂ ಕಚೇರಿ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡರು.IMG 20250620 WA0035

ಸಾರ್ವಜನಿಕರ ಕೆಲಸ ಕಾರ್ಯಗಳು ಸರಿಯಾಗಿ ನಡೆಯುತ್ತಿಲ್ಲ. ಲಂಚ ಇಲ್ಲದೆ ಯಾವುದೇ ಕೆಲಸಗಳು ಆಗುವುದಿಲ್ಲ. ಜೊತೆಗೆ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು, ಇದರಲ್ಲಿ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಕೆಲವರು ಶಾಮೀಲಾಗಿದ್ದಾರೆ, ರಜಾ ದಿನಗಳಲ್ಲಿಯೂ ಸಹ  ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ಎಂದು   ರೈತ ಸಂಘದ ಜಿಲ್ಲಾ ಕಾರ್ಯದರ್ಶಿ  ರಾಮಾಂಜಿನಿ, ರವಿ,ರಮೇಶ್ ಗೋವಿಂದಪ್ಪ  ಲೋಕಾಯುಕ್ತರಿಗೆ ದೂರು ನೀಡಿದರು

ಇಲ್ಲಿನ ಲಂಚಾವತಾರದ ಕೇಂದ್ರ ಬಿಂದು ರಾಧಮ್ಮ ಇಲ್ಲದ  ಕಚೇರಿ ಮೇಲೆ ಲೋಕಾದಾಳಿ ಯ ಪುರುಷಾರ್ಥವಾದರು ಏನು ….?   ನಾಳೆಯಿಂದ “ಯಥಾ ರಾಜಾ ತಥಾ ಪ್ರಜಾ” ಎಂಬತ್ತೆ ಇರುತ್ತದೆ ರಾಧಮ್ಮ ನ ಕಚೇರಿ ಎನ್ನುತ್ತಾರೆ ಜನರು….

ತುಮಕೂರು ಲೋಕಾಯುಕ್ತ ಸಬ್ ಇನ್ಸ್ಪೆಕ್ಟರ್  ರಾಜೀವ್, ನೇತೃತ್ವದಲ್ಲಿ  ಲೋಕಾಯುಕ್ತ ಅಧಿಕಾರಿಗಳಾದ  ನರಸಿಂಹ, ರಾಘವೇಂದ್ರ, ಮಹೇಶ್ ದಾಳಿಯಲ್ಲಿ ಪಾಲ್ಗೊಂಡಿದ್ದರು.

ವರದಿ : ಶ್ರೀನಿವಾಸಲು ಎ

Leave a Reply

Your email address will not be published. Required fields are marked *