IMG 20240104 WA0010

ಪಾವಗಡ: ಅಪರಿಚಿತ ವಾಹನ ಡಿಕ್ಕಿ ವ್ಯಕ್ತಿ ಸಾವು…!

DISTRICT NEWS ತುಮಕೂರು

ಅಪರಿಚಿತ ವಾಹನ ಡಿಕ್ಕಿ ವ್ಯಕ್ತಿ ಸಾವು.
ಪಾವಗಡ : ಅಪರಿಚಿತ ವಾಹನ ಡಿಕ್ಕಿ ಹೊಡೆದು ಬೈಕ್ ಸವಾರನೊಬ್ಬ ಮೃತಪಟ್ಟಿರುವ ಘಟನೆ ತಾಲ್ಲೂಕಿನ
ದೋಮ್ಮತ ಮರಿ ಗ್ರಾಮದ ಬಳಿ ಬುಧವಾರ ಸಂಜೆ ನಡೆದಿದೆ.

ಮಡಕಶಿರ ತಾಲ್ಲೂಕಿನ ಆರ್ ಅನಂತಪುರ ಗ್ರಾಮದ ನಿವಾಸಿ ರಾಮಕೃಷ್ಣ (27) ಮೃತರು.
ರಾಮಕೃಷ್ಣ ತನ್ನ ಸ್ವಗ್ರಾಮವಾದ ಆರ್ ಅನಂತಪುರo ನಿಂದ ಟಿವಿಎಸ್ ನಲ್ಲಿ ದೋಮ್ಮತಮರಿಗೆ ಬರುವಾಗ ದೋಮ್ಮತಮರಿಯ ಸಪ್ಲಮ್ಮ ಗುಡಿಯ ಬಳಿ ಅಪರಿಚಿತ ವಾಹನ ಒಂದು ಡಿಕ್ಕಿಯಾಗಿ ತಲೆಗೆ ಹೆಚ್ಚಿನ ಪೆಟ್ಟಾಗಿ ರಕ್ತಸ್ರಾವದಿಂದ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆಂದು ಮೃತನ ಪತ್ನಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮೃತ ವ್ಯಕ್ತಿ ಹೆಂಡತಿ ಮತ್ತು ಒಬ್ಬ ಮಗಳನ್ನು ಅಗಲಿದ್ದಾನೆ.
ಸ್ಥಳಕ್ಕೆ ಪಾವಗಡ ಪಟ್ಟಣದ ಪೊಲೀಸರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಕೇಸ್ ದಾಖಲಿಸಿಕೊಂಡಿದ್ದಾರೆ.
ವರದಿ. ಶ್ರೀನಿವಾಸಲು. A