IMG 20201118 WA0006

ಭೀಮಾ ಜ್ಯುವೆಲ್ಲರ್ಸ್ ಹೊಸ ಮಳಿಗೆ ಆರಂಭ….!

BUSINESS

ಕೋರಮಂಗಲ, ಹೂಡಿಯಲ್ಲಿ ಭೀಮಾ ಜ್ಯುವೆಲ್ಲರ್ಸ್ ಹೊಸ ಶೋರೂಂಗಳ ಶುಭಾರಂಭ

ಬೆಂಗಳೂರು, ನವೆಂಬರ್ 18, 2020:ಚಿನ್ನಾಭರಣಗಳಲ್ಲಿ ಅತ್ಯುತ್ತಮ ಹೆಸರನ್ನು ಹೊಂದಿರುವ ಭೀಮಾ ಜ್ಯುವೆಲ್ಲರ್ಸ್ ಕಳೆದ 95 ವರ್ಷಗಳಿಂದ ಶ್ರೀಮಂತ ಕರಕುಶಲತೆ, ಪರಿಶುದ್ಧತೆ ಮತ್ತು ನಂಬಿಕೆಯ ಸಂಕೇತವಾಗಿದೆ. ಇಂತಹ ಖ್ಯಾತಿಯನ್ನು ಹೊಂದಿರುವ ಭೀಮಾ ಜ್ಯುವೆಲ್ಲರ್ಸ್ ಇಂದು ಬೆಂಗಳೂರಿನ ಕೋರಮಂಗಲ ಹಾಗೂ ಹೂಡಿಯಲ್ಲಿ ತನ್ನ ಹೊಸ ಶೋರೂಂ ಅನ್ನು ಆರಂಭಿಸಿದೆ.
ಈ ಪ್ರತಿಷ್ಠಿತ ಶೋರೂಂ ಅನ್ನು ಭೀಮಾ ಜ್ಯುವೆಲ್ಲರ್ಸ್ನ ವ್ಯವಸ್ಥಾಪಕ ನಿರ್ದೇಶಕ ಬಿ.ಕೃಷ್ಣನ್ ಮತ್ತು ಭೀಮಾ ಜ್ಯುವೆಲ್ಲರ್ಸ್ನ ನಿರ್ದೇಶಕ ವಿಷ್ಣುಶರಣ್ ಕೆ.ಭಟ್ ಅವರು ಉದ್ಘಾಟಿಸಿದರು. ಈ ಸುಂದರ ಸಮಾರಂಭಕ್ಕೆ ಹಲವಾರು ಗಣ್ಯರು ಮತ್ತು ಸಂಸ್ಥೆಯ ಸಾವಿರಾರು ಅಭಿಮಾನಿಗಳು ಮತ್ತು ಗ್ರಾಹಕರು ಸಾಕ್ಷಿಯಾದರು.

IMG 20201118 WA0004
ಕೋರಮಂಗಲದ ಹೊಸ ಶೋರೂಂ ಅತ್ಯಂತ ವಿಶಾಲವಾಗಿದ್ದು, ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ಅಗತ್ಯ ಸುರಕ್ಷತೆ ಮತ್ತು ನೈರ್ಮಲ್ಯ ಮಾನದಂಡಗಳ ಆಧಾರದಲ್ಲಿ ವಿನ್ಯಾಸಗೊಂಡಿದೆ.
•ಈ ಹೊಸ ಮಳಿಗೆಗಳು ದೊಡ್ಡ ಮಟ್ಟದ ಆಭರಣಗಳು ಮತ್ತು ವೈಯಕ್ತಿಕ ಶಾಪಿಂಗ್ ಅನುಭವವನ್ನು ಗ್ರಾಹಕರಿಗೆ ನೀಡಲಿದೆ.
•ಇಲ್ಲಿಗೆ ಆಗಮಿಸುವ ವೀಕ್ಷಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಾಲೆಟ್ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
•ತನ್ನ ಗ್ರಾಹಕರಿಗೆ ವೈವಿಧ್ಯಮಯವಾದ ಮತ್ತು ಅನನ್ಯವಾದ ಶಾಪಿಂಗ್ ಅನುಭವವನ್ನು ನೀಡುವ ನಿಟ್ಟಿನಲ್ಲಿ ಭೀಮಾ ತನ್ನ ಆವಿಷ್ಕಾರಕ ಪ್ರಯತ್ನಗಳನ್ನು ಮುಂದುವರಿಸಿದೆ. ಇದರ ಭಾಗವಾಗಿ ಕೋರಮಂಗಲದ ಶೋರೂಂನಲ್ಲಿ ಎಆರ್ ಎಕ್ಸ್ಪೀರಿಯನ್ಸ್ ಝೋನ್ ಅನ್ನು ಆರಂಭಿಸಿದ್ದು, ಗ್ರಾಹಕರು ಇಲ್ಲಿ ಎಆರ್ ತಂತ್ರಜ್ಞಾನದೊಂದಿಗೆ ವಿವಿಧ ಆಭರಣಗಳನ್ನು ಪರೀಕ್ಷಿಸಬಹುದು ಮತ್ತು ಪ್ರಯತ್ನಿಸಬಹುದು.
ಈ ಸಂದರ್ಭದಲ್ಲಿ ಮಾತನಾಡಿದ ಭೀಮಾ ಜ್ಯುವೆಲ್ಲರ್ಸ್ನ ನಿರ್ದೇಶಕ ವಿಷ್ಣುಶರಣ್ ಕೆ.ಭಟ್ ಅವರು, “ಕೋರಮಂಗಲದಲ್ಲಿ ದೊಡ್ಡ, ಉತ್ತಮ ಮತ್ತು ಪ್ರಕಾಶಮಾನವಾದ ಶೋರೂಂನೊಂದಿಗೆ ಬೆಂಗಳೂರಿನ ನಮ್ಮ ಗ್ರಾಹಕರಿಗೆ ಬ್ರ್ಯಾಂಡ್ ಭೀಮಾದ ಮ್ಯಾಜಿಕ್ ಅನ್ನು ನೀಡಲು ನಾವು ಸಂತೋಷಪಡುತ್ತಿದ್ದೇವೆ. ಕೋವಿಡ್ ಸಾಂಕ್ರಾಮಿಕದ ನಂತರ ನಮ್ಮ ಜೀವನವನ್ನು ಮೀರಿದ ಹೊಸ ಸಾಮಾನ್ಯತೆಯನ್ನು ಗಮನದಲ್ಲಿಟ್ಟುಕೊಂಡು ನಾವು ನಮ್ಮ ಗ್ರಾಹಕರಿಗೆ ವಿಶಿಷ್ಟವಾದ ಮತ್ತು ವಿಭಿನ್ನವಾದ ಶಾಪಿಂಗ್ ಅನುಭವವನ್ನು ಒದಗಿಸಲು ಪ್ರತಿಯೊಂದು ಸುರಕ್ಷತೆ ಮತ್ತು ನೈರ್ಮಲ್ಯ ಕ್ರಮಗಳನ್ನು ಕೈಗೊಳ್ಳುವತ್ತ ಗಮನಹರಿಸಿದ್ದೇವೆ. ಅತ್ಯುತ್ತಮ ಗುಣಮಟ್ಟ, ವಿನ್ಯಾಸ ಮತ್ತು ಕಾರ್ಯವೈಖರಿಯಲ್ಲಿ ಅತ್ಯುತ್ತಮವಾದುದನ್ನು ಗ್ರಾಹಕರಿಗೆ ನೀಡುವುದು ನಮ್ಮ ಧ್ಯೇಯವಾಗಿದೆ. ಬ್ರ್ಯಾಂಡ್ ಭೀಮಾದ ವಿಶಿಷ್ಟ ಮತ್ತು ವಿಭಿನ್ನ ಅನುಭವದೊಂದಿಗೆ ಗ್ರಾಹಕರಿಗೆ ಸೇವೆ ಸಲ್ಲಿಸುವುದು ನಮಗೆ ಪುಣ್ಯದ ಕೆಲಸವಾಗಿದೆ. ವಿಶ್ವದಾದ್ಯಂತ ನಮ್ಮ ಗ್ರಾಹಕರು ನಮ್ಮ ಮೇಲೆ ಇಟ್ಟಿರುವ ಆಶೀರ್ವಾದ ಮತ್ತು ನಂಬಿಕೆಯ ತಳಹದಿಯಲ್ಲಿ ನಿಂತಿರುವ ನಮ್ಮ ಶ್ರೀಮಂತ ಪರಂಪರೆಯ ಬಗ್ಗೆ ನಮಗೆ ಹೆಮ್ಮೆ ಎನಿಸುತ್ತಿದೆ’’ ಎಂದರು.

IMG 20201118 WA0003
ಇದಲ್ಲದೇ, ಹಬ್ಬದ ಸಮಯದಲ್ಲಿ ಭೀಮಾ ಜ್ಯುವೆಲ್ಲರ್ಸ್ ಭೀಮಾ ಸೂಪರ್ ಸರ್ಪೈಸ್ ಎಂಬ ಉದ್ಘಾಟನಾ ಸೀಮಿತ ಅವಧಿಯ ಆಫರ್ ಅನ್ನು ತನ್ನ ಗ್ರಾಹಕರಿಗೆ ನೀಡುತ್ತಿದೆ. ಈ ಆಫರ್ ಬೆಂಗಳೂರು ನಗರದ ಗ್ರಾಹಕರಿಗಾಗಿ ಇದ್ದು, ಅವರ ಪ್ರತಿಯೊಂದು ಖರೀದಿ ಮೇಲೆ ಹಾಕುವ ಹಣಕ್ಕೆ ಹೆಚ್ಚು ಮೌಲ್ಯವನ್ನು ತಂದುಕೊಡಲಿದೆ.
2020 ರ ನವೆಂಬರ್ 18 ರಿಂದ 20 ರವರೆಗಿನ ಅವಧಿಯಲ್ಲಿ ಭೀಮಾದಲ್ಲಿ ಖರೀದಿಸುವ ಗ್ರಾಹಕರಿಗೆ ಈ ಕೆಳಗಿನ ಪ್ರಯೋಜನಗಳು ಸಿಗಲಿವೆ:
• ಚಿನ್ನಾಭರಣಗಳ ಮೇಕಿಂಗ್ ಚಾರ್ಜ್ ಮೇಲೆ ಶೇ.70 ರವರೆಗೆ ಕಡಿತ,
• ವಜ್ರಾಭರಣದ ಪ್ರತಿ ಕ್ಯಾರೆಟ್ ಮೇಲೆ 13,000 ರೂಪಾಯಿವರೆಗೆ ರಿಯಾಯ್ತಿ ಮತ್ತು
• ಬೆಳ್ಳಿ ಆಭರಣಗಳ ಮೇಕಿಂಗ್ ಚಾರ್ಜ್ನಲ್ಲಿ ಶೇ.30 ರಷ್ಟು ಕಡಿತ.
ಇದರ ಜತೆಗೆ, ಗ್ರಾಹಕರು ಒಂದು ಚಿನ್ನದ ನಾಣ್ಯವನ್ನು ಉಚಿತವಾಗಿ ಪ್ರತಿ 50,000 ರೂಪಾಯಿಯ ಖರೀದಿ ಮೇಲೆ ಪಡೆಯಬಹುದು. ಲಕ್ಕಿ ಡ್ರಾ ಬಂಪರ್ ಬಹುಮಾನಗಳ ಅಂಗವಾಗಿ, ಗ್ರಾಹಕರು 12 ಹುಂಡೈ ವೆನ್ಯು ಕಾರುಗಳು ಮತ್ತು 57 ಹೊಂಡಾ ಆಕ್ಟಿವಾ ಸ್ಕೂಟರ್ಗಳನ್ನು ಗೆಲ್ಲಬಹುದು.
ಗ್ರಾಹಕರ ಸಂತೋಷವನ್ನು ಖಾತರಿಪಡಿಸುವ ಭೀಮಾ ತನ್ನ ಎಲ್ಲಾ ಗ್ರಾಹಕರಿಗೆ ಬೆಳಗ್ಗೆ 10 ರಿಂದ ಸಂಜೆ 7 ಗಂಟೆಯವರೆಗೆ ಟೋಲ್ ಫ್ರೀ ಸಹಾಯವಾಣಿ (1800-121-9076) ರಲ್ಲಿ ಸೇವೆಗಳ ಕುರಿತ ಮಾಹಿತಿಗಳನ್ನು ನೀಡಲಿದೆ.
ಕೋರಮಂಗಲ ಮತ್ತು ಹೂಡಿಯಲ್ಲಿನ ಹೊಸ ಸ್ಟೋರ್ಗಳಲ್ಲಿ ಈ ಕೆಳಗಿನ ಆಕರ್ಷಕ ಆಭರಣಗಳ ಸಂಗ್ರಹಗಳು ಲಭ್ಯವಿವೆ:

• ಚಿನ್ನ
• ವಜ್ರ
• ಪ್ಲಾಟಿನಂ
• ಬೆಳ್ಳಿ ಆಭರಣ ಹಾಗೂ ಆರ್ಟಿಕಲ್ಗಳು
• ಸಾಂಪ್ರದಾಯಿಕ
• ಜೆಮ್ಸ್ಟೋನ್
• ಇದಲ್ಲದೇ, ಪುರುಷರು ಮತ್ತು ಮಕ್ಕಳ ಸಂಗ್ರಹವನ್ನೂ ಒಳಗೊಂಡಿವೆ.

ಭೀಮ ಜ್ಯು ವೆಲರ್ಸ್ ಸಂಸ್ಥೆ ಯು, ಸಾಮಾಜಿಕ ಕಳಕಳಿಹೊಂದಿದ್ದು , ಸಮಾಜಕ್ಕಾ ಗಿ ಏನಾದರುಕೊಡುಗೆ ನೀಡಬೇಕೊಂಬಹಂಬಲದೊಂದಿಗೆ , ಭೀಮ ಫೊಂಡೇಷನ್ ನಮೂಲಕ ಅನೇಕ ಸಮಾಜಮುಖಿ ಕ್ಕರ್್ಕರ ಮಗಳನ್ನು ಹಲವಾರು ವಷ್ಗಳಿೊಂದ ನಡೆಸುತ್ತಾ ಬಂದಿದೆ. ಈಗ ನಮಮ ಕೊೀರಮಂಗಲ ಹಾಗೂಹೂಡಿ ಶಾಖೆರ್ ಶುಭಾರಂಭದ ಸಂದಭ್ದಲ್ಲಿ, ಹೆಸರೊಂತ ಸಂಸ್ಥೆಯಾದ ಅದಮು ಚೇತನದೊಂದಿಗೆ ಕೈ ಜೀಡಿಸಿದೆು ೀವೆಹಾಗೂಭೀಮ ಫೊಂಡೇಷನ್ ವತಿಯೊಂದರೂ. 500000 ದ ದೇಣಿಗೆರ್ನ್ನು ಅದಮು ಚೇತನದ ವಿವಿಧ ಕ್ಕರ್್ಕರ ಮಗಳಿಗೆ ನೀಡಲಾಗುತಿಾ ದೆ.