IMG 20201124 175422

ಸಂಸತ್ ಬಜೆಟ್ ಅಧಿವೇಶನಕ್ಕೆ ಮುನ್ನ ಪ್ರಧಾನಿ ಮೋದಿ ಅವರ ಹೇಳಿಕೆ

NATIONAL

ಭಾರತದ ಉಜ್ವಲ ಭವಿಷ್ಯಕ್ಕಾಗಿ ಈ ದಶಕ ಬಹಳ ಮುಖ್ಯವಾದ್ದು….!

ನಮಸ್ಕಾರ ಸ್ನೇಹಿತರೇ,

ಈ ದಶಕದ ಮೊದಲ ಅಧಿವೇಶನ ಇಂದುಪ್ರಾರಂಭವಾಗುತ್ತಿದೆ. ಭಾರತದ ಉಜ್ವಲ ಭವಿಷ್ಯಕ್ಕಾಗಿ ಈ ದಶಕ ಬಹಳ ಮುಖ್ಯವಾದ್ದು. ಆದ್ದರಿಂದ, ಸ್ವಾತಂತ್ರ್ಯಹೋರಾಟಗಾರರು ಕಂಡ ಕನಸುಗಳನ್ನು ತ್ವರಿತವಾಗಿಈಡೇರಿಸುವ ಒಂದು ಸುವರ್ಣಾವಕಾಶ ರಾಷ್ಟ್ರಕ್ಕೆದೊರೆತಿದೆ. ಈ ದಶಕವನ್ನು ಸೂಕ್ತವಾಗಿ ಬಳಸಿಕೊಳ್ಳಬೇಕು. ಆದ್ದರಿಂದ, ಈ ಇಡೀ ದಶಕವನ್ನು ಗಮನದಲ್ಲಿಟ್ಟುಕೊಂಡುಅರ್ಥಪೂರ್ಣ ಫಲಿತಾಂಶಗಳಿಗಾಗಿ ವಿಭಿನ್ನಅಭಿಪ್ರಾಯಗಳ ಚರ್ಚೆಗಳು ನಡೆಯಬೇಕು. ಇವೆಲ್ಲಾದೇಶದ ನಿರೀಕ್ಷೆಗಳಾಗಿವೆ.

ಈ ಪವಿತ್ರ ಸಂಸತ್ತನ್ನು ಸಂಪೂರ್ಣವಾಗಿ ಬಳಸಿಕೊಳ್ಳುವಮೂಲಕ ಮತ್ತು ಪ್ರಜಾಪ್ರಭುತ್ವ ನಡವಳಿಕೆಯನ್ನುಅನುಸರಿಸುವ ಮೂಲಕ ದೇಶದ ಜನರು ನಮ್ಮೆಲ್ಲರಮೇಲೆ ಇಟ್ಟಿರುವ ಭರವಸೆ, ನಿರೀಕ್ಷೆ ಮತ್ತು ಆಕಾಂಕ್ಷೆಗಳನ್ನುಈಡೇರಿಸಲು ನಾವು ಹಿಂಜರಿಯುವುದಿಲ್ಲ ಎಂದು ನನಗೆಖಾತ್ರಿಯಿದೆ. ಎಲ್ಲಾ ಸಂಸದರು ಈ ಅಧಿವೇಶನವನ್ನುಹೆಚ್ಚು ಉತ್ಪಾದಕ ಅಧಿವೇಶನವಾಗಿಸುತ್ತಾರೆ ಎಂಬಸಂಪೂರ್ಣ ಭರವಸೆ ನನಗಿದೆ.

ಇದು ಬಜೆಟ್ ಅಧಿವೇಶನ ಕೂಡ. ಬಹುಶಃ, ಭಾರತದಇತಿಹಾಸದಲ್ಲಿ ಮೊದಲ ಬಾರಿಗೆ ನಮ್ಮ ಹಣಕಾಸುಸಚಿವರು 2020 ರಲ್ಲಿ ಪ್ರತ್ಯೇಕ ಪ್ಯಾಕೇಜ್‌ಗಳ ರೂಪದಲ್ಲಿನಾಲ್ಕೈದು ಮಿನಿ ಬಜೆಟ್‌ಗಳನ್ನು ಮಂಡಿಸಿದ್ದಾರೆ. ಅಂದರೆಒಂದು ರೀತಿಯಲ್ಲಿ, 2020 ರಲ್ಲಿ ಮಿನಿ ಬಜೆಟ್‌ಗಳಸರಣಿಯೇ ನಡೆಯಿತು. ಈ ಬಜೆಟ್ ಅನ್ನು ಆ ನಾಲ್ಕೈದುಬಜೆಟ್ ಗಳ ಸರಣಿಯ ಒಂದು ಭಾಗವಾಗಿನೋಡಲಾಗುವುದು ಎಂಬ ವಿಶ್ವಾಸ ನನಗಿದೆ.

ಮತ್ತೊಮ್ಮೆ, ನಾನು ಮತ್ತು ಉಭಯ ಸದನಗಳ ಎಲ್ಲಾಸಂಸದರು ಗೌರವಾನ್ವಿತ ರಾಷ್ಟ್ರಪತಿಯವರಮಾರ್ಗದರ್ಶನದಲ್ಲಿ, ಅವರ ಸಂದೇಶವನ್ನುಸಾಕಾರಗೊಳಿಸಲು ಬದ್ಧವಾಗಿದ್ದೇವೆ.

ತುಂಬು ಧನ್ಯವಾದಗಳು.

ಸೂಚನೆಇದು ಪ್ರಧಾನಮಂತ್ರಿಯವರ ಹಿಂದಿಭಾಷಣದ ಅಂದಾಜು ಅನುವಾದವಾಗಿದೆ.