0187d086 0c13 49d9 b42d 273fb5ea3007

ಮಂಡ್ಯ ಮೈಷುಗರ್ ಸಕ್ಕರೆ ಕಾರ್ಖಾನೆಯ ಆರಂಭ ಕ್ಕೆ ಮನವಿ…!

DISTRICT NEWS ಮಂಡ್ಯ

ಮಂಡ್ಯ ಮೇ ೨೧:-  ಮಂಡ್ಯ ಮೈಷುಗರ್ ಸಕ್ಕರೆ ಕಾರ್ಖಾನೆಯನ್ನು ಮತ್ತೆ ಸರ್ಕಾರಿ ಸ್ವಾಮ್ಯಕ್ಕೆ ಸಿಎಂ ವಹಿಸಿದ ವಿಚಾರ ಖಾಸಗೀಕರಣ ಮಾಡಿಯೇ ಕಾರ್ಖಾನೆ ಆರಂಭಕ್ಕೆ ಪರೋಕ್ಷವಾಗಿ ಸಂಸದೆ ಸುಮಲತಾ ಅಂಬರೀಶ್ ಪಟ್ಟು ಹಿಡಿದಿದ್ದಾರೆ ಎನ್ನಲಾಗುತ್ತಿದೆ

ಸಕ್ಕರೆ ಸಚಿವ ಶಿವರಾಮ್ ಹೆಬ್ಬಾರ್ ಭೇಟಿ ಮಾಡಿ ಮನವಿ ಸಲ್ಲಿಸಿದ ಸಂಸದೆ ಸುಮಲತಾ ಮೈಷುಗರ್ ವಿಚಾರದಲ್ಲಿ ಮಂಡ್ಯ ರೈತರ ಮನದಾಳವನ್ನು ಅರ್ಥೈಸಿಕೊಂಡು ನಿರ್ಧಾರಕ್ಕೆ ಬನ್ನಿ ಕಾರ್ಖಾನೆ ಆರಂಭಿಸೋದು ಸೂಕ್ಷ್ಮ ವಿಚಾರ ವಾಗಿದೆ ಎಂದಿದ್ದಾರೆ ಸಂಸದರ ಮನವಿಗೆ ಸ್ಪಂದಿಸಿರುವ ಸಚಿವರು ಕಾರ್ಖಾನೆ ಮರು ಸ್ಥಾಪನೆ ಬಗ್ಗೆ ಇನ್ನೆರಡು ದಿನದಲ್ಲಿ ಸಂಪುಟ ಸಭೆ ನಡೆಸಿ ತೀರ್ಮಾನ ತಗೆದು ಕೊಳ್ಳುವ ಭರವಸೆಯನ್ನು ಸಂಸದೆ ಸುಮಲತಾ ಅವರಿಗೆ ನೀಡಿದ್ದಾರೆ ಎನ್ನಲಾಗಿದೆ.

ಮಂಡ್ಯ ಮೈಷುಗರ್ ಸಕ್ಕರೆ ಕಾರ್ಖಾನೆಯನ್ನು ಯಾವುದೇ ಕಾರಣಕ್ಕೂ ಖಾಸಗಿಯವರಿಗೆ ನೀಡಬಾರದು ಎಂದು ಮಂಡ್ಯ ದಳಪತಿಗಳು ಪಟ್ಟು ಹಿಡಿದು, ಹೋರಾಟದ ಎಚ್ಚರಿಕೆಯನ್ನು ನೀಡಿದ್ದಾರೆ ಇತ್ತ ಮಂಡ್ಯ ಸಂಸದರು ರೈತರ ಒಳಿತಿಗಾಗಿ ಖಸಗಿಯವರಿಗೆ ನೀಡಿದರೆ ಮೇಲು ಎಂಬ ಅಭಿಪ್ರಾಯದಲ್ಲಿ ಇದ್ದಾರೆ ಎನ್ನಲಾಗುತ್ತಿದೆ. ಒಟ್ಟಾರೆ ಮಂಡ್ಯ ಮೈಷುಗರ್‌ ಕಾರ್ಖಾನೆ ವಿಷಯ ಜಿಲ್ಲೆಯಾದ್ಯಂತ ಚರ್ಚೆಯ ವಿಷಯವಾಗಿದೆ.