S Suresh

ಶಿಕ್ಷಕರ ವರ್ಗಾವಣೆ ಯಥಾಸ್ಥಿತಿ ಮುಂದುವರಿಕೆ…!

Genaral STATE

ಶಿಕ್ಷಕರು ನೂತನ ವರ್ಗಾವಣೆ ನೀತಿ ರೂಪುಗೊಳ್ಳುವವರೆಗು ಪ್ರಸ್ತುತ ಸ್ಥಳದಲ್ಲೇ ಮುಂದುವರೆಸಲು ಸೂಚನೆ

ಬೆಂಗಳೂರು, ಮೇ 26 ( ಕರ್ನಾಟಕ ವಾರ್ತೆ ) ನೂತನ ಶಿಕ್ಷಕರ ವರ್ಗಾವಣಾ ನಿಯಂತ್ರಣಾ ಕಾಯ್ದೆಯ ನಿಯಮಗಳು ರೂಪುಗೊಳ್ಳುತ್ತಿದ್ದು, ಈ ನಿಯಮಗಳ ಆಧಾರದಲ್ಲಿ  ಪ್ರಸಕ್ತ ಸಾಲಿನ ಶಿಕ್ಷಕರ  ವರ್ಗಾವಣಾ ವೇಳಾಪಟ್ಟಿ ಪ್ರಕಟಿಸಬೇಕಾಗಿದೆ. ಹಾಗಾಗಿ ಪ್ರಸ್ತುತ ರಾಜ್ಯದ ವಿವಿಧ ಸರ್ಕಾರಿ ಶಾಲೆಗಳಲ್ಲಿ ನಿಯೋಜನೆ ಮೇರೆಗೆ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರನ್ನು ಹಾಗೆಯೇ ಈ ಶೈಕ್ಷಣಿಕ ಸಾಲಿನಲ್ಲಿ ಕಡ್ಡಾಯವಾಗಿ ವರ್ಗಾವಣೆಗೊಳಗಾದ ಮತ್ತು  ವರ್ಗಾವಣೆ ಹಿನ್ನೆಲೆಯಲ್ಲಿ  ಸೇವೆಯಿಂದ ಬಿಡುಗಡೆ ಹೊಂದದಿರುವ ಶಿಕ್ಷಕರನ್ನುಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳದಲ್ಲೇ ಮುಂದಿನ ಆದೇಶದವರೆಗೆ ಮುಂದುವರೆಸಬೇಕೆಂದು  ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.  ಸುರೇಶ್ ಕುಮಾರ್ ಸೂಚಿಸಿದ್ದಾರೆ.