IMG 20200601 WA0044

ನೀರಿಲ್ಲದೆ ಬತ್ತಿದ  ಬೋರ್ ವೆಲ್  , ಸಾಲಕ್ಕೆ ಹೆದರಿ ರೈತ ಆತ್ಮಹತ್ಯೆ 

DISTRICT NEWS ಚಿಕ್ಕಬಳ್ಳಾಪುರ

, ಸಾಲಕ್ಕೆ ಹೆದರಿ ರೈತ ಆತ್ಮಹತ್ಯೆ, ಮೂರು ಬೋರ್ ವೆಲ್ ಕೊರೆಸಿ ಸಾಲಕ್ಕೆ ಹೆದರಿ ಆತ್ಮಹತ್ಯೆ.

ದೊಡ್ಡಬಳ್ಳಾಪುರ  : ಸಾಲ ಮಾಡಿ ಎರಡು ತಿಂಗಳಲ್ಲಿ ಮೂರು ಬೋರ್ ವೆಲ್  ಕೊರೆಸಿದ್ದ ಮೂರು ಬೋರ್ ವೆಲ್ ವಿಫಲವಾದ ಹಿನ್ನೆಲೆ,  ಸಾಲಕ್ಕೆ  ಹೆದರಿದ  ತೋಟದಲ್ಲಿ  ವಿಷ  ಕುಡಿದು ಆತ್ಮ ಹತ್ಯೆಗೆ ಶರಣಾಗಿದ್ದಾನೆ.

IMG 20200601 WA0043

ದೊಡ್ಡಬಳ್ಳಾಪುರ ತಾಲೂಕಿನ  ಆಚಾರಲಹಳ್ಳಿಯ ರೈತ ಚಂದ್ರಶೇಖರ (41) ಆತ್ಮಹತ್ಯೆಗೆ ಶರಣಾದ ರೈತ, ಮೃತ ವ್ಯಕ್ತಿ  ಒಂದುವರೆ ಎಕರೆ  ಸ್ವಂತ ಜಮೀನು ಮೂರು ಎಕರೆ ಗುತ್ತಿಗೆ  ಜಮೀನಿನಲ್ಲಿ ರೇಷ್ಮೆ,  ಮತ್ತು  ಹೂ ಬೆಳೆಯುತ್ತಿದ್ದರು, ಎರಡು ತಿಂಗಳ ಅಂತರದಲ್ಲಿ ಮೂರು ಬೋರ್ ವೆಲ್ ಕೊರೆಸಿದ್ದರು, ಮೂರು ಬೋರ್ ವೆಲ್  ನಲ್ಲಿ ನೀರು ಬತ್ತಿ ಹೋಗಿದ್ವು, ಬೋರ್ ವೇಲ್  ಗಾಗಿ 3 ಲಕ್ಷ ಸೆರಿದಂತೆ ಒಟ್ಟು 8 ಲಕ್ಷ ಬ್ಯಾಂಕ್  ಮತ್ತು  ಕೈ ಸಾಲ ಮಾಡಿದ್ದರು, ವಿಫಲಗೊಂಡ ಬೋರ್ ವೆಲ್ ನಿಂದ ಸಾಕಷ್ಟು  ನೊಂದಿದ್ದ  ರೈತ ಸಾಲಕ್ಕೆ  ಹೆದರಿ ತನ್ನ  ತೋಟದಲ್ಲಿ  ವಿಷ ಕುಡಿದು ಆತ್ಮ ಹತ್ಯೆಗೆ ಶರಣಾಗಿದ್ದಾನೆ, ಮೃತ ವ್ಯಕ್ತಿ  ಹೆಂಡತಿ ಇಬ್ಬರು ಪುತ್ರಿಯರು ಒಬ್ಬ ಪುತ್ರನನ್ನ ಅಗಲಿದ್ದಾರೆ, ದೊಡ್ಡಬಳ್ಳಾಪುರ  ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿರುತ್ತದೆ.

ವರದಿ- ಅರುಣ್ ಕುಮಾರ್, ಚಿಕ್ಕಬಳಳಾಪುರ