IMG 20200606 WA0070

ಚಿಕ್ಕಬಳ್ಳಾಪುರ: ಕೊರೋನ ವಾರಿಯರ್ಸ್‌ ಗೆ ಅಭಿನಂದನೆ…!

ಚಿಕ್ಕಬಳ್ಳಾಪುರ DISTRICT NEWS

ಚಿಕ್ಕಬಳ್ಳಾಪುರ :- ಜಿಲ್ಲಾ ನಾಗರೀಕರು ಇಂದು ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಕೊರೋನ ವಾರಿಯರ್ಸ್‌ ಅಭಿನಂದನಾ ಕಾರ್ಯಕ್ರಮವನ್ನು ಮಾನ್ಯ ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಕೆ.ಸುಧಾಕರ್ ರವರು ಉದ್ಘಾಟಿಸಿರುತ್ತಾರೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೊರೋನ ನಿಯಂತ್ರಣ ಕಾರ್ಯದಲ್ಲಿ ತೊಡಗಿಸಿಕೊಂಡು ಅತ್ಯುತ್ತಮ ಕಾರ್ಯನಿರ್ವಸಿದ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಹಾಗೂ ಪೌರಾಡಳಿತ ಅಧಿಕಾರಿ/ನೌಕರರು ವಿಶೇಷವಾಗಿ ಪೌರಕಾರ್ಮಿಕರ ಕಾರ್ಯವೈಖರಿಯನ್ನು ಮಾನ್ಯ ಸಚಿವರು ಶ್ಲಾಘಿಸಿರುತ್ತಾರೆ.

IMG 20200606 WA0077

ಜಿ.ಪಂ.ಅಧ್ಯಕ್ಷರಾದ ಎಂ.ಬಿ.ಚಿಕ್ಕನರಸಿಂಹಯ್ಯ, ಜಿಲ್ಲಾಧಿಕಾರಿ ಆರ್.ಲತಾ, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಫೌಜಿ಼ಯಾ ತರನ್ನಮ್, ಹಾಗೂ ಇನ್ನಿತರ ಜಿಲ್ಲಾ ಮಟ್ಟದ ಅಧಿಕಾರಿಗಳು, ನಾಗರೀಕರ ಪರವಾಗಿ ಜಯರಾಂ, ಕೋಡಿರಂಗಪ್ಪ, ಪೆರಿಕಲ್ ಮಂಜುನಾಥ್, ಮೊಬೈಲ್ ಬಾಬು, ರಾಮು, ಇನ್ನೂ ಮುಂತಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.