1e7b3fff 308f 4154 af9d 150fcbc036da

ಪಾವಗಡ : ಸಿಡಿಲು ಹೊಡೆದು ವೃದ್ದ ಸಾವು

DISTRICT NEWS ತುಮಕೂರು

ತುಮಕೂರು ಜಿಲ್ಲೆ, ಪಾವಗಡ ತಾಲ್ಲೂಕಿನ ಚಿತ್ತಗಾನ ಹಳ್ಳಿ ಗ್ರಾಮದ ಹೊರವಲಯದಲ್ಲಿ ಸಿಡಿಲು ಹೊಡೆದು ೬೯ ವರ್ಷದ ವೃದ್ದ ಸಾವು.

ಪಾವಗಡ ಜೂನ್‌ ೧೦ : ಸಿಡಿಲು ಹೊಡೆದ ಪರಿಣಾಮ ವೃದ್ದನೋರ್ವ ಸಾವನ್ನಪ್ಪಿರುವ ಘಟನೆ ಪಾವಗಡ ತಾಲ್ಲೂಕಿನ ಚಿತ್ತಗಾನಹಳ್ಳಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.

ಹನುಮಂತರಾಯಪ್ಪ (69) ಮೃತ ದುರ್ದೈವಿಯಾಗಿದ್ದಾರೆ. ಇವರು ಇಂದು ಮದ್ಯಾಹ್ನ ತಮ್ಮ ಜಮೀನಿನಲ್ಲಿರುವ ಹುಣಸೆಮರದಡಿ ವಿಶ್ರಾಂತಿ ಪಡೆಯುವ ವೇಳೆ ಮಳೆ ಬಂದ ಹಿನ್ನೆಲೆ ಸಿಡಿಲು ಹೊಡೆದಿದೆ. ಪರಿಣಾಮ ಈ ವೃದ್ದ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಮೃತರಿಗೆ ಆರು ಜನ ಮಕ್ಕಳಿದ್ದು ಅದರಲ್ಲಿ ಮೂವರು ಗಂಡು ಮಕ್ಕಳು,ಮೂವರು ಹೆಣ್ಣು ಮಕ್ಕಳನ್ನ ಅಗಲಿದ್ದಾರೆ.

ಸ್ಥಳಕ್ಕೆ ತಾಲ್ಲೂಕು ದಂಡಾಧಿಕಾರಿ ವರದರಾಜು, ಸಬ್ಇನ್ಸ್ಪೆಕ್ಟರ್ ಗುರುನಾಥ್, ರಾಜಸ್ವ ನಿರೀಕ್ಷಕ ರಾಜ್ ಗೋಪಾಲ್ ಬಂದು ಪರಿಶೀಲನೆ ನಡೆಸಿದ್ದರು.

ನಂತರ ಪ್ರತಿಕ್ರಿಯಿಸಿದ ತಾಲ್ಲೂಕು ದಂಡಾಧಿಕಾರಿ ವರದರಾಜು ರವರು ಈ ಕೂಡಲೇ ನೊಂದ ಕುಟುಂಬಕ್ಕೆ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಗ್ರಾಮ ಲೆಕ್ಕಿಗ ಗಿರೀಶ್ ಇತರರು ಇದ್ದರು

ವರದಿ: ನವೀನ್ ಕಿಲಾರ್ಲಹಳ್ಳಿ