b32b0027 09fc 4c93 952e 249a31925848

ನೂತನ ಬಿಜೆಪಿ ಸಂಸದ ಈರಣ್ಣ ಕಡಾಡಿ ಗೆ ಸನ್ಮಾನ…!

STATE Genaral

ಬೆಂಗಳೂರು ಜೂನ್‌ ೧೨:-    ಕರ್ನಾಟಕ ವಿಧಾನ ಸಭೆಯಿಂದ  ನೂತನವಾಗಿ ಬಿಜೆಪಿ ಪಕ್ಷದ  ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದ ಶ್ರೀ ಈರಣ್ಣ ಕಡಾಡಿ ಯವರನ್ನು ಇಂದು  ಶ್ರೀ. ರೇವಣಸಿದ್ದ ಶಿವಾಚಾರ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ಕೇಂದ್ರ ಕಚೇರಿಯಲ್ಲಿ ರಾಷ್ಟ್ರೀಯ ಅಧ್ಯಕ್ಷ ಪ್ರದೀಪ ಕಂಕಣವಾಡಿ ಸನ್ಮಾನಿಸಿದರು
ಈ ಸಂಧರ್ಭದಲ್ಲಿ ಅಲ್ಪಸಂಖ್ಯಾತರ ಇಲಾಖೆಯ ಅಧ್ಯಕ್ಷ ಮುಖ್ತಾರ ಪಠಾಣ, ಪುರೋಹಿತರ ಘಟಕದ ರಾಜ್ಯಾಧ್ಯಕ್ಷ ಚಂದ್ರಶೇಖರ ಕೋಡಿಕೊಪ್ಪಲು ಶಾಸ್ತ್ರೀ ಹಾಗೂ ಇನ್ನಿತರರು ಉಪಸ್ಥಿತರಿದ್ದರು