865feeaa 9979 4854 9280 27568bbcf017

ಪಾವಗಡ : 48 ಆಕ್ಸಿಜನ್ ಸಿಲಿಂಡರ್ ಹಸ್ತಾಂತರ…!

DISTRICT NEWS ತುಮಕೂರು

ಪಾವಗಡ:- ತಾಲ್ಲೂಕಿನ ಕೋವಿಡ್ ರೋಗಿಗಳು ಆಕ್ಸಿಜನ್ ಸಮಸ್ಯೆಯಿಂದ ಯಾರೂ ಕೂಡ ತೊಂದರೆಗೆ ಒಳಗಾಗಿ ಪ್ರಾಣ ಕಳೆದುಕೊಳ್ಳಬಾರದು ಎಂಬ ಆಶಯದೊಂದಿಗೆ ಮುಂದೆ ಬಂದಿರುವ ತಮಟೆ ಗ್ರಾಮೀಣ ಸಬಲೀಕರಣ ಕೇಂದ್ರ ದವರು  48 ಆಕ್ಸಿಜನ್ ಸಿಲಿಂಡರ್ ಗಳನ್ನು ಪಾವಗಡ ಸರ್ಕಾರಿ ಆಸ್ಪತ್ರೆಗೆ ಕೊಡುಗೆಯಾಗಿ ನೀಡಿದ್ದಾರೆ. ಸಂಸ್ಥೆಯ ನಿರ್ಧೇಶಕರಾದ ಡಾ, ಕೆ ಬಿ ಓಬಳೇಶ್ ರವರು ಸಿಲೆಂಡರ್ಗಳನ್ನು ಹಸ್ತಾಂತಿಸಿದರು

ಈ ಸಂದರ್ಭದಲ್ಲಿ ಪಾವಗಡ ತಾಲ್ಲೂಕು ತಹಶೀಲ್ದಾರ್ ರವರಾದ ರೋಹಿಣಿ, ಸರ್ಕಾರಿ ಆಸ್ಪತ್ರೆಯ ಮುಖ್ಯಾಧಿಕಾರಿಗಾಳಾದ ಡಾ, ಕಿರಣ್ ಕುಮಾರ್ ರವರು, ತಮಟೆ ಸಂಸ್ಥೆಯ ಶಿಕ್ಷಣ ಸಂಯೋಜಕರಾದ ಗಂಗರಾಜು, ವೆಂಕಟೇಶ್, ಹಾಗೂ ಅಕ್ಷಯ್ ಕುಮಾರ್ ರವರು ಹಾಜರಿದ್ದರು. ತಹಶೀಲ್ದಾರ್ ಹಾಗೂ ಆಸ್ಪತ್ರೆಯ ಮುಖ್ಯಾಧಿಕಾರಿಗಳ ಸಮ್ಮುಖದಲ್ಲಿ ಸಂಸ್ಥೆಯ ಗಂಗರಾಜು ಉಪಸ್ಥಿತರಿದ್ದರು.

ವರದಿ: ಬುಲೆಟ್‌ ವೀರಸೇನ‌ ಯಾದವ್