IMG 20210610 WA0013

ಪಾವಗಡ: ನಂದಮೂರಿ ಬಾಲಕೃಷ್ಣ ಹುಟ್ಟು ಹಬ್ಬ ಆಚರಣೆ….!

DISTRICT NEWS ತುಮಕೂರು

ಗಿಡ ನೆಡುವ ಮೂಲಕ ನಂದಮೂರಿ ಬಾಲಕೃಷ್ಣ ಅವರ ಹುಟ್ಟು ಹಬ್ಬ ಆಚರಣೆ

ಪಾವಗಡ:  ಗಿಡ ನೆಡುವ ಮೂಲಕ ‌ನಂದಮೂರಿ ಬಾಲಕೃಷ್ಣ ಅವರ ಹುಟ್ಟು ಹಬ್ಬವನ್ನು ವಿಶೇಷವಾಗಿ ಆಚರಿಸಿಕೊಂಡರು.

ನಂದಮೂರಿ ಬಾಲಕೃಷ್ಣ ಅವರ ಹುಟ್ಟು ಹಬ್ಬದ ಪ್ರಯುಕ್ತ ಪಾವಗಡ ಶಾಂತಿ ಮೆಡಿಕಲ್ಸ್ ದೇವರಾಜು ಗಂಗಿನೇನಿ ಮತ್ತು ಕಾರ್ತಿಕೇಯ ಗಂಗಿನೆನಿ ಅವರು ಹಸಿರು ಉಳಿಸಲು ಗಿಡ ಮರ ಬೆಳೆಸಲು ಪರಿಸರದ ಬಗ್ಗೆ ಜಾಗೃತಿ ಮೂಡಿಸಲು ಹೀಗೆ ವಿನೂತನ ರೀತಿಯಲ್ಲಿ ಹುಟ್ಟು ಹಬ್ಬ ಆಚರಿಸುತ್ತಿರುವುದು ಮಾದರಿಯಾಗಿದೆ.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ  ಡಾಕ್ಟರ್ ಜಿ. ವೆಂಕಟರಾಮಯ್ಯ, ಮಾತನಾಡಿ ಗಿಡಗಳನ್ನ ಬೆಳೆಸಿ ಮರಗಳನ್ನ ಉಳಿಸಿದರೆ, ಮಳೆ ಬರಲು ಅವಕಾಶ ಇರುತ್ತದೆ  ಎಂದರು.

ಆಂಧ್ರದ ಮಾಜಿ ಮುಖ್ಯಮಂತ್ರಿ ದಿವಂಗತ ಎನ್ .ಟಿ ರಾಮರಾವ್ ಅವರ ಪುತ್ರ ತೆಲುಗಿನ ಸೂಪರ್ ಸ್ಟಾರ್ ನಟ, ಹಿಂದೂಪುರ ಶಾಸಕ ನಂದಮೂರಿ ಬಾಲಕೃಷ್ಣ(ಬಾಲಯ್ಯ) ಅವರ 61 ನೇ ಹುಟ್ಟು ಹಬ್ಬದ ಶುಭಾಶಯಗಳು ಹಾಗೂ ಪರಿಸರ ಉಳಿಸಿ ಬೆಳೆಸಿ ಮರ ಗಿಡ ನೆಡುವ ಮೂಲಕ ಜೊತೆಗೆ ಬೆಳೆಗಳಾಗಿ ಸಮೃದ್ಧಿ ಜೀವನ ಮಾಡಲು ಅನೂಕೂಲಕರವಾಗಿರುತ್ತದೆ.

ಪ್ರತಿಯೊಬ್ಬರು ತಮ್ಮ ಹುಟ್ಟು ಹಬ್ಬಗಳಿಗೆ ಹಾಗೂ ಇತರೆ ಕಾಯಕ್ರಮಗಳಿಗೆ ಗಿಡಗಳನ್ನು ನೆಟ್ಟುವ ಕಾರ್ಯ ಕ್ರಮ ಹಮ್ಮಿಕೊಳ್ಳುವುದು ರೂಢಿಸಿಕೊಳ್ಳಬೇಕು ಗಿಡಗಳನ್ನ ನೆಟ್ಟಿ ಪರಿಸರವನ್ನು ಕಾಪಾಡಬೇಕೆಂದು ಮನವಿ

ಯಾರೇ ಆಗಲಿ ಗಿಡ ಮರಗಳನ್ನ ಕಡಿಯಬಾರದು ಅತಂಹವರನ್ನ ನಾನು ವಿರೋದಿಸುತ್ತೇನೆ. ಪರಿಸರ ಪ್ರೆಮಿಗಳನ್ನ ಪ್ರೀತಿಸುತ್ತೆನೆ ಎಂದರು. ಪುರಸಭೆ ಮಾಜಿ ಅಧ್ಯಕ್ಷ ರಾದ ಮಾನಂ ವೆಂಕಟಸ್ವಾಮಿ, ಡಾ.ಧೀರಜ್ ಕುಮಾರ್ ರೆಡ್ಡಿ
ಪಾವಗಡ ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ ಲಕ್ಷ್ಮೀ ಕಾಂತ್ ಪುರಸಭೆ ಅದ್ಯಕ್ಷರು ರಾಮಾಂಜಿನಪ್ಪ, ಸದಸ್ಯ ರವಿ, ಗೊರ್ತಿ ನಾಗರಾಜು. ಮುಖಂಡರಾದ ಪರಿಟಾಲ ವೆಂಕಟೇಶ್. ತರಕಾರಿ ಕೃಷ್ಣಮೂರ್ತಿ. .ಸುಬ್ರಹ್ಮಣ್ಯಂ. ವೀರಭದ್ರಪ್ಪ. ಪ್ರತಾಪ್. ಶಮಿ . ಹೂವಿನ ನಾಗರಾಜು.
ಕಾರ್ತಿಕ್ ರಾಜು. ಎನ್ ಟಿ ಆರ್ ಯೂತ್ ಐಕಾನ್ ಅದ್ಯಕ್ಷರು ಅನಿಲ್ ಕುಮಾರ್, ಶ್ರೀನಿವಾಸ್ ನಾಯಕ, ಲೆಜೆಂಡ್ ರಾಜು, ಅನಿಲ್ ಯಾದವ್, ವೀರ, ಮಂಜುನಾಥ್, ಪ್ರತಾಪ್,ಸೋಮು, ಮುಂತಾದವರು ಪಾಲ್ಗೊಂಡಿದ್ದರು

ವರದಿ: ಬುಲೆಟ್ ವೀರಸೇನಯಾದವ್