IMG 20210721 WA0005

ಪಾವಗಡ: ಸ್ವಸಹಾಯ ಸಂಘಗಳಿಗೆ ಲಾಭಾಂಶ ವಿತರಣೆ….!

DISTRICT NEWS ತುಮಕೂರು

ಲಾಭಾಂಶ ಹಣ ಸಂಘಗಳಿಗೆ

ವೈ.ಎನ್.ಹೊಸಕೋಟೆ : ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ವೈ.ಎನ್.ಹೊಸಕೋಟೆ ವಲಯದ ಲಾಭಾಂಶವನ್ನು ತಮ್ಮ ಯೋಜನೆಯಡಿಯ ಸ್ವಸಹಾಯ ಸಂಘಗಳಿಗೆ ಬುಧವಾರದಂದು ವಿತರಿಸಲಾಯಿತು.

ಗ್ರಾಮದ ಕನ್ಯಕಾಪರಮೇಶ್ವರಿ ದೇವಸ್ಥಾನ ರಸ್ತೆಯಲ್ಲಿರುವ ಶ್ರೀರಾಮ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಲಯದ ಮೇಲ್ವಿಚಾರಕ ರಮೇಶ್ ಮಾತನಾಡಿ ಈ ವಲಯದಲ್ಲಿ 181 ಸ್ವಸಹಾಯ ಸಂಘಗಗಳಿದ್ದು, ಅವುಗಳ ವ್ಯವಹಾರದಿಂದ 13 ಲಕ್ಷ ಹಣ ಲಾಭಾಂಶವಾಗಿ ಬಂದಿದೆ. ಹಾಗಾಗಿ ಆ ಹಣವನ್ನು ಅವೇ ಸ್ವಸಹಾಯ ಸಂಘಗಳಿಗೆ ನೀಡಲಾಗುತ್ತಿದೆ. ಅದರಂತೆ ವೈ.ಎನ್.ಹೊಸಕೋಟೆ ಟೌನಿನಲ್ಲಿ 22 ಸ್ವಸಹಾಯ ಗುಂಪುಗಳಿದ್ದು, 6 ಲಕ್ಷ ರೂಪಾಯಿಗಳ ಲಾಭಾಂಶವನ್ನು ಅವುಗಳಿಗೆ ನೀಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಒಕ್ಕೂಟಗಳ ಅಧ್ಯಕ್ಷರಾದ ಚಂದ್ರಕಳಾ ಗ್ರಾಮಪಂಚಾಯಿತಿ ಸದಸ್ಯ ಅನಿಲ್ ಕುಮಾರ್ ತಾಲ್ಲೂಕು ಯೋಜನಾ ಕೃಷಿ ಅಧಿಕಾರಿ ಗೋವಿಂದು ಮತ್ತು ಸೇವಾ ಪ್ರತಿನಿಧಿಗಳು, ಸಂಘಗಳ ಸದಸ್ಯರು ಭಾಗವಹಿಸಿದ್ದರು.