ab27cfc7 89df 49c0 ad36 d28020c9cae5

ಪಾವಗಡ: ಸಂಚಾರ ದಟ್ಟಣೆ ನಿಯಂತ್ರಿಸಲು ಮನವಿ…!

DISTRICT NEWS ತುಮಕೂರು

ಪಾವಗಡ ಪಟ್ಟಣದ ಪ್ರಮುಖ ರಸ್ತೆಗಳ ಸಂಚಾರ ದಟ್ಟಣೆ ನಿಯಂತ್ರಿಸುವ ಕುರಿತು ಹೆಲ್ಪ್ ಸೋಸೈಟಿಯಿಂದ ಸರ್ಕಲ್ ಇನ್ಸ್ಪೆಕ್ಟರ್ ಲಕ್ಷ್ಮಿಕಾಂತ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು

ಮಾನ್ಯರೆ : ಪಾವಗಡ ಪಟ್ಟಣದಲ್ಲಿ ಬೈಪಾಸ್ ರಸ್ತೆ ಇಲ್ಲದ ಕಾರಣ ಅತೀ ಹೆಚ್ಚು ಸಾರುಕು ಸಾಗಣೆ ಸಾರಿಗೆ ವಾಹನಗಳು ,ಸೋಲಾರ್ ಕಂಪನಿಗೆ ಸಂಬಂದಿಸಿದ ದೊಡ್ಡ ಗಾತ್ರದ ವಾಹನಗಳು ಸಂಚರಿಸುತ್ತಿರುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಕೆ- ಶಿಪ್ ರವರ ಅವೈಜ್ಞಾನಿಕ ರಸ್ತೆ ಯಿಂದ ಪಾದಚಾರಿಗಳ ಮಾರ್ಗವಿಲ್ಲದೆ ನಡು ರಸ್ತೆಯಲ್ಲಿ ಓಡಾಡುವಂತಾಗಿದೆ. ಪ್ರಮುಖ ರಸ್ತೆಗಳ ಎರಡು ಭಾಗದದಲ್ಲಿ ದ್ವಿಚಕ್ರ ವಾಹನ, ಮತ್ತು ಕಾರುಗಳ ನಿಲುಗಡೆಯಿಂದ ವಾಹನ ಸಂಚಾರಕ್ಕೆ ಬಹಳ ತೊಂದರೆ ಆಗುತ್ತಿದೆ. ಪ್ರಮುಖ ರಸ್ತೆಗಳಾದ ಸಿರಾ ರಸ್ತೆ, ಬಳ್ಳಾರಿ ರಸ್ತೆ, ಹೊಸಬಸ್ ನಿಲ್ದಾಣ ರಸ್ತೆಗಳನ್ನು ಏಕಾಮುಖ ಸಂಚಾರ ಮಾರ್ಗಗಳನ್ನಾಗಿ ಮಾಡುವಂತೆ ಈ ಮೂಲಕ ವಿನಂತಿಸಿಕೊಳ್ಳಲಾಗಿದೆ ಈ ಸಂದರ್ಭದಲ್ಲಿ ಹೆಲ್ಪ್ ಸೊಸೈಟಿ ಅಧ್ಯಕ್ಷರು ಮಾನಂ ಶಶಿಕಿರಣ್ ಆಟೋ ಸಂಘದ ಅಧ್ಯಕ್ಷರು ನಾಗರಾಜ್ ಹೆಲ್ಪ್ ಸೊಸೈಟಿಯ ಪದಾಧಿಕಾರಿಗಳಾದ ಸಾಯಿ ರಾಕೇಶ್ ಮಂಜುನಾಥ ಅನಿಲ್ ಕುಮಾರ್ ಇದ್ದರು

ವರದಿ: ಬುಲೆಟ್‌ ವೀರಸೇನ ಯಾದವ್