IMG 20210816 WA0044

ಪಾವಗಡ:ಕೊರೋನಾ ಮದ್ದು ವಿತರಣೆ….!

DISTRICT NEWS ತುಮಕೂರು

ಆನಂದಯ್ಯ ರವರ ಕೊರೋನಾ ಮದ್ದು ವಿತರಣೆ

ವೈ.ಎನ್.ಹೊಸಕೋಟೆ : ಗ್ರಾಮದ ಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲಿ ಆಂದ್ರಪ್ರದೇಶದ ಕೃಷ್ಣಪಟ್ಟಣಂ ನ ಆನಂದಯ್ಯ ರವರು ಸಿದ್ದಪಡಿಸಿರುವ ಕೊರೋನಾ
ಮದ್ದನ್ನು ವಾಸವಿ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ ಮತ್ತು ಪ್ರಪಂಚ ಆರ್ಯವೈಶ್ಯ ಮಹಾಸಭಾದ ಸಹಯೋಗದಲ್ಲಿ ಸಾರ್ವಜನಿಕರಿಗೆ ಸೋಮವಾರದಂದು
ವಿತರಿಸಲಾಯಿತು.

ಈ ಸಂದರ್ಭದಲ್ಲಿ ವಾಸವಿ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತದ ಅಧ್ಯಕ್ಷ ಇ.ವಿ.ಶ್ರೀಧರ್ ಮಾತನಾಡಿ ಸ್ಥಳೀಯ ಕೊರೋನಾ ಸಮಸ್ಯೆಯನ್ನು ಆನಂದಯ್ಯರವರ
ಬಳಿ ವಿವರಿಸಿದಾಗ ಅವರು ಔಷದಿಯನ್ನು ಇಲ್ಲಿಗೆ ಕಳುಹಿಸಿ ಕೊಟ್ಟಿದ್ದಾರೆ. ಈ ಔಷದಿಯಿಂದ ಯಾವುದೇ ಅಡ್ಡಪರಿಣಾಮ ಇಲ್ಲ. ಔಷದಿ ಸೇವನೆಯಿಂದ ದೇಹದಲ್ಲಿ ರೋಗ
ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಕೊರೋನಾ ಸೋಂಕು ತಗಲುವ ಪ್ರಮಾಣ ಕಡಿಮೆ ಇರುತ್ತದೆ. ಅವಶ್ಯಕತೆ ಇದ್ದವರು ಮಾತ್ರ ಈ ಔಷದಿಯನ್ನು ಬಳಸಿ. ಅನಾವಶ್ಯಕವಾಗಿ
ಪಡೆದು ವ್ಯರ್ಥ ಮಾಡಬೇಡಿ. ಇಂದಿನ ಕಾರ್ಯಕ್ರಮದಲ್ಲಿ ಸುಮಾರು ಏಳು ನೂರು ಮಂದಿಗೆ ಔಷದಿ ವಿತರಣೆ ಮಾಡಲಾಗಿದೆ. ಅವಶ್ಯಕತೆ ಇದ್ದವರು ವಾಸವಿ ಬ್ಯಾಂಕಿನಲ್ಲಿ
ಸಂಪರ್ಕಿಸಿದರೆ ಔಷದಿ ದೊರೆಯುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಎಂ.ಆರ್.ಶಿವಾನಂದಗುಪ್ತ, ಟಿ.ವಿ.ವೆಂಕಟೇಶ್, ಎನ್.ಎಸ್.ಮಂಜುನಾಥ, ಎನ್.ಆರ್.ಅಶ್ವಥ್ ಕುಮಾರ್, ಎಸ್.ಸಿ.ಬದರಿ, ರಮೇಶ್
ಬಾಬು, ಡಿ.ವಿ.ಅನಿಲ್ ಕುಮಾರ್, ರಘು ಮತ್ತು ರಾಘವೇಂದ್ರ ಇದ್ದರು.

ವರದಿ: ಸತೀಶ್