IMG 20211005 WA0000

ಪಾವಗಡ:ಅಗಸರಕುಂಟೆಗೆ ರಕ್ಷಣಾ ಗೋಡೆಗೆ ಮನವಿ…!

DISTRICT NEWS ತುಮಕೂರು

*ಅಗಸರಕುಂಟೆಗೆ ರಕ್ಷಣಾ ಗೋಡೆಗೆ ಹೆಲ್ಪ್ ಸೊಸೈಟಿ ಮನವಿ*

ಪಾವಗಡ ಅ 4:ಪಾವಗಡ ಪಟ್ಟಣದ ಅಗಸರ ಕುಂಟೆಯಲ್ಲಿ ಆತ್ಮಹತ್ಯೆ ಯಂತಹ ಪ್ರಕರಣಗಳು ಹಾಗೂ ಸೆಲ್ಫಿಗೆ ಮುಗಿಬಿದ್ದು ಪ್ರಾಣ ಹಾನಿ ಸಂಭವಿಸುತ್ತಿರುವ ಹಿನ್ನಲೆಯಲ್ಲಿ ಅಗಸರಕುಂಟೆಗೆ ರಕ್ಷಣಾ ಗೋಡೆ ಅಥವಾ ತಡೆ ಬೇಲಿ ನಿರ್ಮಿಸಿ ಅನಾಹುತಗಳನ್ನು ತಪ್ಪಿಸುವಂತೆ ಹೆಲ್ಪ್ ಸೊಸೈಟಿ ಹಾಗೂ ಶ್ರೀರಾಮಸೇನೆ ಸಂಘಟನೆ ವತಿಯಿಂದ ಇಂದು ಪುರಸಭೆ ಅಧ್ಯಕ್ಷರಾದ ರಾಮಾಂಜಿನಪ್ಪ ರವರಿಗೆ ಪುರಸಭೆ ಇಲಾಖೆ ಕಚೇರಿಯಲ್ಲಿ ಮನವಿ ಪತ್ರವನ್ನು ನೀಡಲಾಯಿತು.
ಮನವಿ ಸ್ವೀಕರಿಸಿ ಮಾತನಾಡಿದ ಪುರಸಭೆ ಅಧ್ಯಕ್ಷರಾದ ರಾಮಾಂಜಿನಪ್ಪ ಸದರಿ ಕೆರೆಗೆ ಸುತ್ತಲೂ ತಡೆ ಗೋಡೆ ನಿರ್ಮಾಣ ಹಾಗೂ ಕೆರೆಯ ಅಭಿವೃದ್ಧಿಗಾಗಿ ವಿದ್ಯುತ್ ದೀಪಕಂಬ , ಆಸನ ವ್ಯವಸ್ಥೆ ಹಾಗೂ ಇನ್ನು ಹಲವಾರು ಯೋಜನೆಗಳ ಕ್ರಿಯಾ ಯೋಜನೆ ಸಿದ್ದಪಡಿಸಲಾಗುತ್ತಿದ್ದು ತಾತ್ಕಾಲಿಕವಾಗಿ ತಂತಿ ಬೇಲಿ ನಿರ್ಮಿಸಲು ಕ್ರಮ ಕೈಗೊಲ್ಲುವುದಾಗಿ ಮನವಿ ನಿರತರಿಗೆ ಬರವಸೆಯಿತ್ತರು.
ಈ ಸಂದರ್ಭದಲ್ಲಿ ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್, ಶ್ರೀರಾಮಸೇನೆ ಅಧ್ಯಕ್ಷ ರಾಮಾಂಜಿ, ಪುರಸಭೆ ಸದಸ್ಯರಾದ ಪಿ. ಎಚ್.ರಾಜೇಶ್, ವೇಲುರಾಜ್, ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅನಿಲ್, ಆಟೋ ಚಾಲಕರ ಸಂಘದ ಅಧ್ಯಕ್ಷ ಬೇಕರಿ ನಾಗರಾಜ,ಉಪಸ್ಥಿತರಿದ್ದರು.

ವರದಿ: ಶ್ರೀನಿವಾಸ್