15 ynh 01 scaled

ಪಾವಗಡ: ಯಲ್ಲಪ್ಪನಾಯಕ ವಂಶಜರ ಜಂಬೂಸವಾರಿ….!

DISTRICT NEWS ತುಮಕೂರು

ಯಲ್ಲಪ್ಪನಾಯಕ ವಂಶಜರ ಜಂಬೂಸವಾರಿ

ವೈ.ಎನ್.ಹೊಸಕೋಟೆ : ವೈ.ಎನ್.ಹೊಸಕೋಟೆ ಸಂಸ್ಥಾನದ ನಿರ್ಮಾತೃವಾದ ಪಾಳೇಗಾರ ಯಲ್ಲಪ್ಪನಾಯಕನ ಕಾಲದಿಂದಲೂ ಸಾಗಿ ಬಂದಿರುವ ಪಾರಂಪರಿಕ ಜಂಬೂ ಸವಾರಿಯು ಶುಕ್ರವಾರದ ವಿಜಯದಶಮಿಯಂದು ಎಂದಿನAತೆ ಈ ವರ್ಷವೂ ಗ್ರಾಮದಲ್ಲಿ ನಡೆಯಿತು.

ಸಂಸ್ಥಾನದ ದೊರೆಯ ಮನೆಯಲ್ಲಿ ಪಾಡ್ಯಮಿಯಿಂದಲೇ ಆರಂಭಗೊAಡಿದ್ದ ನವರಾತ್ರಿಯ ಸಾಂಪ್ರದಾಯಿಕ ಪೂಜೆಗಳು ಪೂರ್ಣಗೊಂಡ ನಂತರ  ವಿಜಯದಶಮಿಯಂದು ಸಂಜೆ ೩ ಗಂಟೆ ಸಮಯದಲ್ಲಿ ಅಶ್ವಾರೂಡರಾದ ದೊರೆ ರಾಜಾ ಜಯಚಂದ್ರರಾಜುರವರು ಕೋಟೆ ಆಂಜನೇಯಸ್ವಾಮಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ದಸರಾ ಜಂಬೂ ಸವಾರಿಗೆ ಚಾಲನೆ ನೀಡಿದರು. ಕೊಂಬು ಕಹಳೆ ವಾದ್ಯತಾಳಗಳೊಂದಿಗೆ, ದಂಡು ದಳವಾಯಿವಾಯಿಗಳು, ಸಂಸ್ಥಾನದ ಖಾವಂದಾರರುಗಳಿAದ ಕೂಡಿದ ಮೆರೆವಣಿಗೆ ಗ್ರಾಮದೇವತೆ ಗೌರಸಮುದ್ರ ಮಾರಮ್ಮ, ನಿಡಗಲ್ ಮಾರಮ್ಮ, ಬೊಮ್ಮಲಿಂಗೇಶ್ವರ ಇತ್ಯಾದಿ ದೇವರುಗಳ ಉತ್ಸವ ಮೂರ್ತಿಗಳೊಂದಿಗೆ ಪುರ ಜನರ ಸಮೇತವಾಗಿ ಹೊರಟ ಮೆರವಣಿಗೆ ಪುರಬೀದಿಗಳಲ್ಲಿ ಸಾಗಿ ಬಂದು ಗ್ರಾಮದ ಪೂರ್ವದಲ್ಲಿರುವ ಬನ್ನಿ ಮಂಟಪಕ್ಕೆ ಬಂದು ಸೇರಿತು.

ಬನ್ನಿ ಮಂಟಪದ ಬನ್ನಿ ಮರಕ್ಕೆ ದೊರೆಯು ಸಾಂಪ್ರದಾಯಿಕ ಪೂಜೆ ಸಲ್ಲಿಸಿ ನಾಲ್ಕು ದಿಕ್ಕುಗಳಿಗೂ ಅಂಬು ಹಾಕಿ ಎಲ್ಲಾ ಕಡೆ ಮಳೆ ಬಿದ್ದು ಜನತೆ ಸಂಮೃದ್ದಿಯಿAದ ಇರಲಿ ಹಾಗೂ ಕೊರೋನಾ ಮಾರಿ ಬಹುಬೇಗ ನಾಶವಾಗಲಿ ಎಂದು ಎಂದಿನAತೆ ಪ್ರಾರ್ಥನೆ ಮಾಡಿದರು. ಅಲ್ಲಿಂದ ಮುಂದೆ ರಾಜ ಮೆರವಣಿಗೆ ಪುರಬೀದಿಗಳಲ್ಲಿ ಸಾಗಿತು. ಜಾತಿಮತ ಬೇದಗಳಿಲ್ಲದೆ ಎಲ್ಲರೊಡಗೂಡಿ ಬರುತ್ತಿದ್ದ ಅಶ್ವಾರೂಡ ರಾಜಾ ಜಯಚಂದ್ರರಾಜು ರವರು ಗ್ರಾಮದ ಪ್ರಮುಖ ದೇವಾಲಯಗಳಲ್ಲಿ ಪೂಜೆ ನೆರವೇರಿಸಿ ರಾಜರ ಮನೆ ಸೇರುವುದರೊಂದಿಗೆ ಮುಕ್ತಾಯಗೊಂಡಿತು.  ಈ ಬಂಬೂಸವಾರಿ ಸಂಪ್ರದಾಯವು ಸಂಸ್ಥಾನ ಪ್ರಾರಂಭದೊAದಿಗೆ ತಳಕು ಹಾಕಿಕೊಂಡಿದ್ದು, ತಲೆ ತಲಾಂತರದಿAದ ಸಾಗಿಬರುತ್ತಿದ್ದು ಮೈಸೂರಿನ ಜಂಬೂಸವಾರಿಯಷ್ಟೇ ವೈಶಿಷ್ಠ÷್ಯತೆಯನ್ನು ಪಡೆದಿದೆ.

ಶಮಿವೃಕ್ಷದ ಪೂಜೆಯ ನಂತರ ಎಲ್ಲಾ ಸಾರ್ವಜನಿಕರು ಶಮೀ ಪತ್ರೆಯನ್ನು ಪಡೆದು ಪರಸ್ಪರ ಹಂಚಿಕೊಳ್ಳುತ್ತಾ, ಬಾಳು ಬಂಗಾರವಾಗಲಿ, ನಮ್ಮ ನಿಮ್ಮ ನಡುವಿನ ವಿಶ್ವಾಸ ಶಾಶ್ವತವಾಗಿರಲಿ ಎಂದು ಶುಭ ಹಾರೈಕೆ ಮಾಡಿಕೊಂಡರು