IMG 20200611 WA0023

ಪ್ರೇಮ ಕಲಹ:ಸಾವು – ಬದುಕಿನಲ್ಲಿ ಯುವತಿ

DISTRICT NEWS ಚಿಕ್ಕಬಳ್ಳಾಪುರ

ಚಿಕ್ಕ ಬಳ್ಳಾಪುರ ಜೂನ್ 11: – . ಮಾಜಿ ಪ್ರಿಯಕರನಿಂದ ಪ್ರೇಯಸಿ ಮೇಲೆ ಮಾರಣಾಂತಿಕ ಹಲ್ಲೆ, ತ್ರಿಕೋನ ಪ್ರೇಮ ಸರಣಿಯಲ್ಲಿ ಸಿಲುಕಿದ ಯುವತಿ ಸಾವು ಬದುಕಿನ ನಡುವೆ ಹೋರಾಟ

ಐದು ವರ್ಷದ ಪ್ರೀತಿಗೆ ಯೂಟರ್ನ್ ಹೊಡೆದ ಹುಡಿಗೆಗೆ ಮಾರಣಾಂತಿಕ ಹಲ್ಲೆ ನಡೆದಿದ ಮಾಜಿ ಪ್ರಿಯಕರ, ಆಘಾತದ ನಾಟಕವಾಡಿ ಯುವತಿಯರ ಪೋಷಕರಿಗೆ ಕರೆ ಮಾಡಿ ಆಸತ್ರೆಗೆ ಸೇರಿಸುವಂತೆ ತಿಳಿಸಿದ, ಆದ್ರೆ ಯುವತಿ ಮಾತ್ರ ಆಸ್ಪತ್ರೆಯ ಐಸಿಯುನಲ್ಲಿ ಸಾವು ಬದುಕಿನ ನಡುವೆ ನರಳಾಡುತ್ತಿದ್ದಾಳೆ.

IMG 20200611 WA0024

ಆರ್ಕಿಟೆಕ್ಚರ್ ಎಂಜಿನಿಯರಿಂದ ಪದವಿ ಮುಗಿಸಿ, ತಂದೆ ಖರೀದಿಸಿದ್ದ ಸೈಟ್‌ನಲ್ಲಿ ಮನೆ ಕಟ್ಟಿ ಜೀವನ ಕಟ್ಟುವ ಆಸೆಯಲ್ಲಿದ್ದ ಆ ಯುವತಿ ಇಂದು ಸಾವು ಬದುಕಿನ ನಡುವೆ ಆಸ್ಪತ್ರೆಯ ಐಸಿಯುನಲ್ಲಿ ನರಳಾಡುತ್ತಿದ್ದಾಳೆ. ಯುವತಿ 23 ವರ್ಷದ ಮೋನಿಕ ಬೆಂಗಳೂರಿನ ಸಿಡೆದಹಳ್ಳಿ ನಿವಾಸಿ, ಸೋಲದೇವನಹಳ್ಳಿ ರಸ್ತೆಯ ಆಚಾರ್ಯ ಕಾಲೇಜಿನಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಳು. ಕಳೆದ ಐದು ವರ್ಷದ ಹಿಂದೆ ಚಿಕ್ಕಬಾಣಾವಾರದ ನಿವಾಸಿ ಬಬೀತ್‌ ಜೊತೆ ಪ್ರೇಮಾಂಕುರವಾಗಿದೆ. ಕಳೆದ ಐದು ವಷಗಳಿಲ್ಲನ ಪ್ರೀತಿಗೆ ಯುವತಿ ಮೋನಿಕ ಯೂಟರ್ನ್ ಹೊಡೆದು ಬಬಿತ್ ಸ್ನೇಹಿತ ರೋಹಿತ್ ಜೊತೆ ಪ್ರೀತಿ ಶುರುವಾಗಿದೆ.

 

ಕಳೆದ ಆರು ತಿಂಗಳಿನಿಂದ ರೋಹಿತ್ ಜೊತೆ ಮೋನಿಕ ಓಡಾಡಿಕೊಂಡಿದ್ದಳು, ಮೋನಿಕ ಭಾನುವಾರ ಸಂಜೆ ರೋಹಿತ್ ಮನೆಗೆ ಪಾರ್ಟಿಗೆಂದು ತೆರಳಿದ್ದಾಗ ಅಲ್ಲಿಗೆ ಬಂದ ಬಬಿತ್ ಮೋನಿಕಾಳ ಮೇಲೆ ಹಲ್ಲೆಗೆ ಮಾಡಿದ್ದಾನೆ. ಅಲ್ಲಿ ಸಾಲದ್ದು ಅಂತ ಬಬಿತ್ ಮನೆಗೆ ಮೋನಿಕಾಳನ್ನು ಕರೆತಂದು ಅಲ್ಲಿಯು ಸಹ ಮನಸೋಇಚೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಮೋನಿಕಾ ತಂದೆಗೆ ಕರೆ ಮಾಡಿ ನಿಮ್ಮ ಮಗಳಿಗೆ ಅಪಘಾತವಾಗಿದೆ, ಮನೆಯ ಬಳಿ ಇದ್ದಾಳೆ ಬನ್ನಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದಿದ್ದಾನೆ. ತಕ್ಷಣ ಸ್ಥಳಕ್ಕೆ ಮೋನಿಕಾ ಪೋಷಕರು ಹೋಗಿ ಸಪ್ತಗಿರಿ ಆಸ್ಪತ್ರೆಗೆ ಸೇರಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಸೋಲದೇವನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಈ ಎಲ್ಲಾ ಪ್ರಕರಣಗಳು ಬೆಳಕಿಗೆ ಬಂದಿದೆ ಎನ್ನಲಾಗಿದ್ದು. ಸದ್ಯ ಕೊಲೆ ಯತ್ನ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ತನಿಖೆಗೆ ಮುಂದಾಗಿದ್ದು ಘಟನೆಯ ಸತ್ಯಾಸತ್ಯತೆ ಬೆಳಕಿಗೆ ತರಬೇಕಿದೆ.