IMG 20240918 WA0035

ಪಾವಗಡ : ಅಂಬುಲೆನ್ಸ್ ವ್ಯವಸ್ಥೆಯಿಲ್ಲದೆ ಮೃತ ದೇಹವನ್ನು ಬೈಕ್ ನಲ್ಲಿ ಕೊಂಡೊಯ್ದ ಕುಟುಂಬಸ್ಥರು….!

DISTRICT NEWS ತುಮಕೂರು

ವೈ ಎನ್. ಹೊಸಕೋಟೆ : ಸರ್ಕಾರಿ ಆಸ್ಪತ್ರೆ ಯ ದುಸ್ಥಿತಿ

ಅಂಬುಲೆನ್ಸ್ ವ್ಯವಸ್ಥೆಯಿಲ್ಲದೆ ಮೃತ ದೇಹವನ್ನು ಬೈಕ್ ನಲ್ಲಿ ಕೊಂಡೊಯ್ದ ಕುಟುಂಬಸ್ಥರು.

ಪಾವಗಡ:- ಮೃತ ವ್ಯಕ್ತಿಯ ಮೃತ ದೇಹ ಸಾಗಿಸಲು ಸೂಕ್ತವಾದ ಆಂಬುಲೆನ್ಸ್ ವ್ಯವಸ್ಥೆ ಇಲ್ಲದೆ ಕುಟುಂಬಸ್ಥರು ಮೃತ ವ್ಯಕ್ತಿಯ ಶವವನ್ನು ದ್ವಿಚಕ್ರವಾಹನದಲ್ಲಿ ಕೊಂಡೊಯ್ದ ಹೃದಯ ವಿದ್ರಾಯಕ ಘಟನೆ ತಾಲ್ಲೂಕಿನ ವೈ ಎನ್ ಹೊಸಕೋಟೆಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬುಧವಾರ ನಡೆದಿದೆ.

ತಾಲ್ಲೂಕಿನ ದಳವಾಯಿ ಹಳ್ಳಿ ಗ್ರಾಮದ ಹೊನ್ನೂರಪ್ಪ (80) ವಯೋ ಸಹಜ ಕಾಯಿಲೆಯಿಂದ
ವೈ ಎನ್ ಹೋಸಕೋಟೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬುಧವಾರ ಮೃತಪಟ್ಟಿದ್ದರು, ಮೃತಪಟ್ಟಿರುವ ಹೊನ್ನೂರಪ್ಪ ಅವರ ಶವವನ್ನು ಸಾಗಿಸಲು ಆಂಬುಲೆನ್ಸ್ ಇಲ್ಲದ ಕಾರಣ ದ್ವಿಚಕ್ರ ವಾಹನದಲ್ಲಿಯೇ ಹೊನ್ನೂರಪ್ಪ ಅವರ ಹಿರಿಯ ಪುತ್ರ ಚಂದ್ರಣ್ಣ ಮತ್ತು ಕಿರಿಯ ಪುತ್ರ ಗೋಪಾಲಪ್ಪ ತಮ್ಮೂರಿಗೆ ಮೃತ ವ್ಯಕ್ತಿಯ ಶವವನ್ನು ದ್ವಿಚಕ್ರವಾಹನದಲ್ಲಿ ಯೇ ಕೊಂಡೊಯ್ದರು.

ಈ ಘಟನೆಯಿಂದ ನವ ಸಮಾಜ ತಲೆ ತಗ್ಗಿಸುವಂತಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಯಿತು.

ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕ್ರಮವಹಿಸಿ ಆಸ್ಪತ್ರೆಗಳಲ್ಲಿನ ಅವ್ಯವಸ್ಥೆಗಳನ್ನು ಸರಿಪಡಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ವರದಿ : ಶ್ರೀನಿವಾಸಲು. A

Leave a Reply

Your email address will not be published. Required fields are marked *