IMG 20211030 WA0012

ಪಾವಗಡ:ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನಕ್ಕೆ ಅಭಿಮಾನಿಗಳಿಂದ ಸಂತಾಪ…!

DISTRICT NEWS ತುಮಕೂರು

*ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನಕ್ಕೆ ಅಭಿಮಾನಿಗಳಿಂದ ಸಂತಾಪ

ಪಾವಗಡ ಅ 29 .ಕನ್ನಡ ಚಿತ್ರರಂಗದ ಅಪಾರ ಅಭಿಮಾನಿಗಳನ್ನು ಹೊಂದಿದಂತ ಏಕೈಕ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಇಂದು ಹೃದಯಘಾತದಿಂದ ನಿಧನ ಹೊಂದಿದ ಸುದ್ದಿ ಕೇಳಿ ಅಪಾರ ಅಭಿಮಾನಿಗಳು, ಸಾರ್ವಜನಿಕರು ದಿಗ್ಬ್ರಮೆಗೆ ಒಳಗಾಗಿದ್ದು ಇವರನ್ನು ಕಳೆದುಕೊಂಡ ಕುಟುಂಬಕ್ಕೆ ಹಾಗೂ ಅಭಿಮಾನಿಗಳಿಗೆ ನೋವನ್ನು ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಮಾಜಿ ಶಾಸಕ ಕೆ. ಎಂ. ತಿಮ್ಮರಾಯಪ್ಪ ಸಂತಾಪ ವ್ಯಕ್ತಪಡಿಸಿದರು.

ನಂತರ ಸಂತಾಪ ವ್ಯಕ್ತಪಡಿಸಿದ ವೈದ್ಯ ಶ್ರೀಕಾಂತ್ ರವರು ಕೇವಲ ಚಲನ ಚಿತ್ರವಲ್ಲದೆ ರಾಜ್ಯಾದಂತ ಅನಾಥಶ್ರಮ, ಗೋಶಾಲೆ,ಉಚಿತ ಶಿಕ್ಷಣ, ಹೆಣ್ಣುಮಕ್ಕಳಿಗೆ ಆಶ್ರಯ ಹಾಗೂ ಮುಂತಾದ ಸೇವೆಗಳನ್ನು ನೀಡುತ್ತಾ ಜನರ ಮನ್ನಣೆ ಗಳಿಸಿದ ಪವರ್ ಸ್ಟಾರ್ ಅಪ್ಪು ನಿಧನವನ್ನು ಅರಗಿಸಿಕೊಳ್ಳಲಾಗುತ್ತಿಲ್ಲ ಎಂದು ನೋವನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್, ಯುವ ಮುಖಂಡ ಅನಿಲ್, ದೇವರಾಜು, ರಾಜೇಂದ್ರ, ಆಟೋ ಚಾಲಕರ ಸಂಘದ ಬೇಕರಿ ನಾಗರಾಜ, ಶಮಿ ಚಿರಂಜೀವಿ, ಶಶಿಕಲಾ, ಸಾಯಿ, ಸಾಗರ್, ಹಾಗೂ ಅಪ್ಪು ಅಭಿಮಾನಿಗಳು ಸಂತಾಪ ಸೂಚಿಸಿದರು.

IMG 20211030 163509

ಒಟ್ಟಿನಲ್ಲಿ ಹೇಳುವುದಾದರೆ ಇಂದು ಅಪ್ಪುವಿನ ಪಾರ್ಥಿವ ಶರೀರ ದರ್ಶನ ಪಡೆಯಲು ತೆಲುಗು ಚಿತ್ರರಂಗದ ಖ್ಯಾತ ನಟರಾದ ಚಿರಂಜೀವಿ, ವೆಂಕಟೇಶ್, ಬಾಲಕೃಷ್ಣ, ಶ್ರೀಕಾಂತ್, ಜೂನಿಯರ್ ಎನ್ಟಿಆರ್, ಆಲಿ‌. ಮುಂತಾದವರು ಬಂದಿದ್ದರು ಎಂದರೆ ಇದು ಪುನೀತ್ ರಾಜಕುಮಾರ್ ಅವರ ಮನೆತನದ ಬಗ್ಗೆ ತೆಲುಗು ನಟರಲ್ಲಿ ಇರುವ ಪ್ರೀತಿ ವಿಶ್ವಾಸವದ ಕೈಗನ್ನಡಿಯಾಗಿದೆ ಎಂದು ಹೇಳಬಹುದು.

ವರದಿ:  ಎ ಶ್ರೀನಿವಾಸುಲು