04 pvgd photo 01

ಪಾವಗಡ..ಹಾಸ್ಟೆಲ್ ಗಳ ಪರಿಶೀಲನೆ

DISTRICT NEWS ತುಮಕೂರು

ಪಾವಗಡ..ಹಾಸ್ಟೆಲ್ ಪರಿಶೀಲನೆ.                         

ಪಾವಗಡ ಪಟ್ಟಣದಲ್ಲಿನ ವಿವಿಧ ವಿದ್ಯಾರ್ಥಿ ನಿಲಯಗಳಲ್ಲಿ ನ ಅವ್ಯವಸ್ಥೆಯ ಬಗ್ಗೆ ಖಚಿತ ಮಾಹಿತಿ ಪಡೆದು ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಶ್ರೀನಿವಾಸ್ ನಾಯಕ್ ರವರು ಇಂದು ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡಿದರು.

ಪಟ್ಟಣದ y.e ರಂಗಯ್ಯ ಶೆಟ್ಟಿ ಕಾಲೇಜು ಆವರಣದ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದ ಅವರು ಮೆನು ಪ್ರಕಾರ ಊಟ ಸ್ವಚ್ಛತೆ ಮೂಲಭೂತ ಸೌಕರ್ಯದ ಬಗ್ಗೆ ಮಾಹಿತಿ ಪಡೆದು ಓಮಿಕ್ರಾನ್ ವ್ಯಾಪಿಸುತ್ತಿರುವ ಹಿನ್ನೆಲೆ ಕೈಗೊಂಡಿರುವ ಮುಂಜಾಗ್ರತೆ ಕ್ರಮಗಳ ಬಗ್ಗೆ ವಿದ್ಯಾರ್ಥಿನಿಲಯದ ನಿಯಮ ಪಾಲಕರಾದ ಕೃಷ್ಣಮೂರ್ತಿ ಅವರಿಂದ ಮಾಹಿತಿ ಪಡೆದು ವಿದ್ಯಾರ್ಥಿನಿಲಯದಲ್ಲಿನ ಆಹಾರಪದಾರ್ಥಗಳ ಗುಣಮಟ್ಟ ಮತ್ತು ಸ್ವಚ್ಛತೆ ಬಗ್ಗೆ ಖುದ್ದು ಪರಿಶೀಲನೆ ನಡೆಸಿದರು.

ಪ್ರತಿನಿತ್ಯ ಆಹಾರ ಪದಾರ್ಥಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕೆಂದು, ಗುಣಮಟ್ಟದ ತಿಂಡಿ-ಊಟ ನೀಡುವುದರ ಜೊತೆಗೆ ಶುದ್ಧ ಕುಡಿಯುವ ನೀರು ಮೂಲಭೂತ ಸೌಕರ್ಯ ಕಲ್ಪಿಸಬೇಕು ಎಂದರು.

  ಗ್ರಂಥಾಲಯಗಳಲ್ಲಿ ಪುಸ್ತಕಗಳ ಕೊರತೆ ಇದ್ದು ಸರಿಪಡಿಸಬೇಕೆಂದು,ಹಾಸ್ಟೆಲನ್ನು ಸ್ಯಾನಿಟೈಸರ್ ಮಾಡಿಸುವಂತೆ ನಿಲಯಪಾಲಕರಾದ ಕೃಷ್ಣಮೂರ್ತಿ ಅವರಿಗೆ ತಿಳಿಸಿದರು.

ವರದಿ: ಶ್ರೀನಿವಾಸುಲು ಎ